ಇವತ್ತು ಶುಕ್ರವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನ್ ವಿಶೇಷವಿದೆ? ಪಂಡಿತ್ ರಾಮಚಂದ್ರ ರಾವ್ ಹೇಳಿದ ರಾಶಿ ಭವಿಷ್ಯ

ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಿ ಆರಾಧನೆಯಿಂದ ಈ ದಿನದ ನಿಮ್ಮ ರಾಶಿ ಫಲವನ್ನು ನೋಡೋಣ

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ
ಶಾಸ್ತ್ರಂ
ಪಂಡಿತ್ :: ರಾಮಚಂದ್ರ ರಾವ್
9845307809

ಮೇಷ ರಾಶಿ
: ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಮುದ ನೀಡುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಸಂಗಾತಿಯೊಂದಿಗೆ ದುಡುಕಿನ ಮಾತನಾಡಿದರೆ ಕಲಹವಾದೀತು. ಎಚ್ಚರ.

ವೃಷಭ ರಾಶಿ
: ದಾಯಾದಿಗಳೊಂದಿಗಿನ ಆಸ್ತಿ ವಿವಾದಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಹಿರಿಯ ಮಾತುಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ಕೋರ್ಟು, ಕಚೇರಿ ವ್ಯವಹಾರದಲ್ಲಿ ಜಯ ಸಿಗುವುದು.

ಮಿಥುನ ರಾಶಿ
: ಎಷ್ಟೋ ದಿನದ ಬಳಿಕ ಹಳೆಯ ಮಿತ್ರನೊಬ್ಬನ ಭೇಟಿ ಮನಸ್ಸಿಗೆ ಖುಷಿ ನೀಡಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಲಿವೆ. ಸಂತಾನ ಹೀನ ದಂಪತಿ ದೇವರ ಮೊರೆ ಹೋಗುವರು.

ಕರ್ಕಟಕ ರಾಶಿ
: ಹೊಸ ಕೆಲಸಗಳಿಗೆ ಕೈ ಹಾಕಲು ಇಂದು ಉತ್ತಮ ದಿನ. ಆರ್ಥಿಕವಾಗಿ ಲಾಭ ಗಳಿಸುವಿರಿ. ಸಣ್ಣ ವ್ಯಾಪಾರಿಗಳು ಕೊಂಚ ಹಿನ್ನಡೆ ಅನುಭವಿಸಿಯಾರು. ಆದರೆ ಚಿಂತ ಬೇಡ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಮುನ್ನಡೆ ಕಂಡುಬರಲಿದೆ.

ಸಿಂಹ ರಾಶಿ
: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ತಕ್ಕ ಮನ್ನಣೆ, ಗೌರವ ಸಿಗುವುದು. ಉತ್ತಮ ಹೆಸರು ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳು ಶಿಕ್ಷಕರ ಪ್ರಶಂಸೆಗೆ ಪಾತ್ರರಾಗುವರು. ನಿರುದ್ಯೋಗಿಗಳಿಗೆ ನಿರೀಕ್ಷಿತ ಫಲ ಸಿಗುವುದ. ದೇವತಾ ಪ್ರಾರ್ಥನೆ ಮಾಡುವುದನ್ನು ಮರೆಯದಿರಿ.

ಕನ್ಯಾ ರಾಶಿ
: ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಸಿಗಲಿದೆ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡ ದೇಹಾಯಾಸವಾಗುವಂತೆ ಮಾಡುತ್ತದೆ.

ತುಲಾ ರಾಶಿ
: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಹೋದರಿಯರ ವಿವಾಹ ಪ್ರಯತ್ನದಲ್ಲಿ ಫಲ ಕಾಣುವಿರಿ. ಸ್ವ ಉದ್ಯೋಗಿಗಳು ನಿವ್ವಳ ಲಾಭ ಗಳಿಸುವರು. ಹೊಸ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.

ವೃಶ್ಚಿಕ ರಾಶಿ
: ವೃತ್ತಿ ಸಂಬಂಧವಾಗಿ ಆಗುವ ಮನೋಕ್ಷೋಭೆಗಳನ್ನು ಮನೆಗೆ ತರಬೇಡಿ. ಮಡದಿ ಮಕ್ಕಳೊಂದಿಗೆ ಕೋಪದಿಂದ ವರ್ತಿಸಿದರೆ ಸಂಬಂಧ ಹಾಳಾದೀತು ಎಂಬುದನ್ನು ಮರೆಯದಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಧನುಸ್ಸು ರಾಶಿ
: ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ. ಅಪ್ಪ-ಮಕ್ಕಳ ನಡುವೆ ವಿರಸ ಮೂಡಬಹುದು. ಆಸ್ತಿ ವಿಚಾರದಲ್ಲಿ ಹಿರಿಯರ ಮಧ್ಯಸ್ಥಿಕೆಗೆ ಪ್ರಾಶಸ್ತ್ಯ ಕೊಡಿ. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸುವಿರಿ.

ಮಕರ ರಾಶಿ
: ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸುವಿರಿ. ಧಾರ್ಮಿಕ ಭಾವನೆ ಹೆಚ್ಚಾಗುವುದು. ಶುಭ ಮಂಗಲ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ತಾಳ್ಮೆ ಅಗತ್ಯ.

ಕುಂಭ ರಾಶಿ
: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಸ‍್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ತಾತ್ಕಾಲಿಕ ವೃತ್ತಿಯವರಿಗೆ ಖಾಯಂ ಉದ್ಯೋಗ ಸಿಗುವುದು. ವ್ಯಾಪಾರ ವಹಿವಾಟಿನಲ್ಲಿ ಅಧಿಕ ಧನ ಲಾಭವಾಗಲಿದೆ. ಹಿತಶತ್ರುಗಳನ್ನು ದೂರವಿಡಿ.

ಮೀನ ರಾಶಿ:

ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಯಾರೋ ಹೇಳುವ ಚಾಡಿ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮಕ್ಕಳ ವಿಚಾರದಲ್ಲಿ ಹೊಸ ನಿರ್ಧಾರ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಮುಖ್ಯ.

ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ
ಶಾಸ್ತ್ರಂ
ಪಂಡಿತ್ :: ರಾಮಚಂದ್ರ ರಾವ್
9845307809