ಬೈಕಾಡಿ: ಕೆ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ

ಬೈಕಾಡಿ: ಕೆ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಇವರ ವತಿಯಿಂದ ಬೈಕಾಡಿ ಗಾಂಧಿನಗರ ನಾಗದೇವರು ಮತ್ತು ನಾಗಕನ್ನಿಕಾ ಅಮ್ಮನವರ ಸಾನಿಧ್ಯ, ಗೆಳೆಯರ ಬಳಗ, ನವಗ್ರಹ ಫ್ರೆಂಡ್ಸ್, ಶ್ರೀ ರಾಮ ಮಿತ್ರ ಕೂಟ ಭಜನಾ ಮಂದಿರ, ಲಕ್ಕಿ ಸ್ಟಾರ್ ಡ್ಯಾನ್ಸ್ ಗ್ರೂಪ್, ನೂರಾನಿ ಜುಮ್ಮಾ ಮಸೀದಿ, ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘ, ಬೈಕಾಡಿ ಭದ್ರಗಿರಿ ಯುವಕ ಮಂಡಲ ಇವರ ಸಹಯೋಗದೊಂದಿಗೆ ಜುಲೈ 16 ರಂದು ಶನಿವಾರ ಗಾಂಧಿನಗರ ಬೈಕಾಡಿ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ 9.00 ಗಂಟೆಯಿಂದ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಲಿರುವುದು.

ತಪಾಸಣೆ ನಡೆಸಲು ಬಯಸುವವರು ಅದೇ ದಿನ ಬೆಳಿಗ್ಗೆ 8.30 ರಿಂದ 11.30ರವರೆಗೆ ತಮ್ಮ ಹೆಸರನ್ನು ಸ್ಥಳದಲ್ಲೇ ನೋಂದಾಯಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕೆ ಕೃಷ್ಣಮೂರ್ತಿ ಆಚಾರ್ಯ 9845199597, ಚರಣರಾಜ್ ಬಂಗೇರ 9886591952, ಕುಮಾರ್ ಸುವರ್ಣ 8971433504, ಪ್ರಭಾಕರ್ ಶೆಟ್ಟಿ 9482233650, ಕೃಷ್ಣರಾವ್ 9916716869, ಉದಯ ಸುವರ್ಣ 8197158473 ಇವರನ್ನು ಸಂಪರ್ಕಿಸಬಹುದು.