ಮಲಬಾರ್ ವಿಶ್ವರಂಗ ಪುರಸ್ಕಾರಕ್ಕೆ ಐದು ರಂಗ ಸಾಧಕರು ಆಯ್ಕೆ

ಲಕ್ಷ್ಮಣ್ ಕುಮಾರ್ ಮಲ್ಲೂರು ಮಂಗಳೂರು

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ಜಂಟಿ ಆಶ್ರಯದಲ್ಲಿ ಕೊಡಮಾಡುವ ‘ಮಲಬಾರ್ ವಿಶ್ವರಂಗ ಪುರಸ್ಕಾರ-2021’ ಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಐದು ಹಿರಿಯ ಕನ್ನಡ ರಂಗಕರ್ಮಿಗಳನ್ನು ಆಯ್ಕೆ ಮಾಡಲಾಗಿದೆ.

ಎನ್ . ರಾಜಗೋಪಾಲ್ ಬಲ್ಲಾಳ್ ಉಡುಪಿ

ಅಹಲ್ಯಾ ಬಲ್ಲಾಳ್ ಮುಂಬೈ

ಉಡುಪಿಯ ಎನ್.ರಾಜಗೋಪಾಲ್ ಬಲ್ಲಾಳ್ (ನಟ, ಸಂಘಟಕ), ಮಂಗಳೂರಿನ ಲಕ್ಷ್ಮಣ್ ಕುಮಾರ್ ಮಲ್ಲೂರು (ನಟ), ಮುಂಬಯಿ ಕನ್ನಡ ರಂಗಭೂಮಿಯ ಅಹಲ್ಯಾ ಬಲ್ಲಾಳ್ (ನಟಿ), ಧಾರವಾಡದ ಶಶಿಕಲಾ ಜೋಶಿ (ನಟಿ), ಉಡುಪಿಯ ಗಂಗಾಧರ ಕಿದಿಯೂರು (ನಾಟಕಕಾರ) ಅವರು ಪುರಸ್ಕಾರಕ್ಕೆ ಆಯ್ಕೆಯಾದ ರಂಗ ಸಾಧಕರು.

ಶಶಿಕಲಾ ಜೋಶಿ ಧಾರವಾಡ

ಗಂಗಾಧರ ಕಿದಿಯೂರು ಉಡುಪಿ

ಮಾರ್ಚ್ 26ರಂದು ವಿಶ್ವ ರಂಗಭೂಮಿಯ ದಿನಾಚರಣೆ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಉಡುಪಿ ಶಾಖೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.