ಯೂನಿಯನ್ ಬ್ಯಾಂಕಿನ ಸಿಬ್ಬಂದಿಗೆ ಬೀಳ್ಕೊಡುಗೆ ಸನ್ಮಾನ

ಉಡುಪಿ: ಯೂನಿಯನ್ ಬ್ಯಾಂಕ್ ನಲ್ಲಿ ಸುಮಾರು 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿಯಾದ ಚಂದ್ರಕಾಂತ ಪಡಿಯಾರ್ ಇವರನ್ನು ಸನ್ಮಾನಿಸಲಾಯಿತು. ಇವರು ಉಡುಪಿ , ಹೇರಾಡಿ , ಕಾರ್ಕಳ , ಶಿರ್ವ , ಕುರ್ಕಾಲು , ಅಂಬಲಪಾಡಿ ಮತ್ತು ಅಲೆವೂರುಗಳಲ್ಲಿ ಶಾಖೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಅಲೆವೂರು ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಸೌರಬ್ ಸುಮನ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರ .

ಪ್ರವೀಣ ಪ್ರಕಾಶ್ , ರಂಜನಿ , ಸುರೇಂದ್ರ , ದಿನೇಶ್ , ಅಮ್ಮಣಿ , ವಾಸುದೇವ ಶೆಣೈ , ಪ್ರಭಾವತಿ ಪಡಿಯಾರ್ , ನಾಗೇಶ್ ನಾಯಕ್ , ಹೇಮಂತ್ ಕುಮಾರ್, ರಾಜೇಂದ್ರ ಉಪಸ್ಥಿತರಿದ್ದರು.