ಕೊರೋನ ವಾರಿಯರ್ಸ್‍ಗಳಿಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಎನರ್ಜಿ ಡ್ರಿಂಕ್ಸ್ ಹಸ್ತಾಂತರ

ಉಡುಪಿ ಜುಲೈ 1: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಗೆ ಐ.ಟಿ.ಸಿ ಲಿಮಿಟೆಡ್ ರವರಿಂದ ಕೋವಿಡ್19 ಸಲುವಾಗಿ, ಕ್ವಾರಂಟೈನ್ ನಲ್ಲಿರುವವರಿಗೆ, ಆಶಾ ಕರ್ಯಕರ್ತೆಯರು, ಪ್ರೈಮರಿ ಹೆಲ್ತ್ ಸೆಂಟರ್ ಮತ್ತು ಸ್ಲಮ್ ನವರಿಗೆ ಎನರ್ಜಿ ಡ್ರಿಂಕ್ಸ್ (Tetra packs of fruit juice) ಗಳನ್ನು ಉಡುಪಿ ಜಿಲ್ಲಾ ಘಟಕಕ್ಕೆ ನೀಡಿದ್ದು, ರೆಡ್ ಕ್ರಾಸ್ ಭವನದಲ್ಲಿ ಬುಧವಾರ ನಡೆದ ವೈದರ್ಯ ದಿನಾಚರಣೆ ಕಾರ್ಯಕ್ರಮಮನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ ಜಗದೀಶ್ ಎನರ್ಜಿ ಡ್ರಿಂಕ್ಸ್ ಗಳನ್ನು ಹಸ್ತಾಂತರಿಸಿದರು.
ಎನರ್ಜಿ ಡ್ರಿಂಕ್ಸ್ ಗಳನ್ನು ರೆಡ್ ಕ್ರಾಸ್ ತಾಲೂಕು ಘಟಕಗಳಾದ ಬೈಂದೂರು , ಕಾರ್ಕಳ, ಬ್ರಹ್ಮಾವರ ಶಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಘಟಕ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ, ಗೌರವ ಖಚಾಂಜಿ ಟಿ.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ಮತ್ತು ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.

ಯುವ ರೆಡ್ ಕ್ರಾಸ್ ಘಟಕದ ಡೈರೆಕ್ಟರ್ ಜಯರಾಮ್ ಆಚಾರ್ಯ ಸಾಲಿಗ್ರಾಮ ನಿರೂಪಿಸಿದರು. ,ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ಸ್ವಾಗತಿಸಿದರು. ಗೌರವ ಖಚಾಂಜಿ ಟಿ.ಚಂದ್ರಶೇಖರ್ ವಂದಿಸಿದರು.