ಕೇಂದ್ರ ಸರಕಾರದ ಹಿಂದಿ ಸಲಹಾ ಸಮಿತಿಗೆ ನಿಟ್ಟೆ ಪ್ರಥಮ ದರ್ಜೆ ಕಾಲೇಜಿನ ಡಾ.ದಯಾನಂದ ಎನ್ ಬಾಯಾರ್ ನೇಮಕ

ಕಾರ್ಕಳ: ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಂದಾಯ, ವೆಚ್ಚ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಇಲಾಖೆಗಳ ಅಧಿಕೃತ ಭಾಷಾ ಸಮಿತಿಯ ಹಿಂದಿ ಸಲಹಾ ಸಮಿತಿಗೆ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ದಯಾನಂದ ಎನ್ ಬಾಯಾರ್ ಇವರು ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುತ್ತಾರೆ. ಇವರು ಮೂಲತಃ ಕಾಸರಗೋಡು ಜಿಲ್ಲೆಯ ಬಾಯಾರಿನವರಾಗಿರುತ್ತಾರೆ.