ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿ ಶಾಖೆಯಿಂದ ಜು.1ರ ಸಂಜೆ 7.30ಕ್ಕೆ ಬ್ರಹ್ಮಗಿರಿಯಲ್ಲಿ ರುವ ಐಎಂಎ ಭವನದಲ್ಲಿ ‘ವೈದ್ಯರ ದಿನಾಚರಣೆ ನಡೆಯಲಿದೆ.
ಮಣಿಪಾಲ ಕೆಎಂಸಿಯ ಹಿರಿಯ ಸಮಾಲೋಚಕ ಡಾ। ಪ್ರತಾಪ್ ಕುಮಾರ್, ಡಿಎಚ್ಒ ಡಾ| ಬಸರಾಜ ಹುಬ್ಬಳ್ಳಿ ಪಾಲ್ಗೊಳ್ಳಲಿದ್ದಾರೆ. ಐಎಂಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷ ಡಾ| ಕೆ. ಸುರೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ| ಬಿ.ಸಿ.ರಾಯ್ ಅವರ ಬಗ್ಗೆ ಮನೋವೈದ್ಯ ಡಾ| ಪಿ.ವಿ. ಭಂಡಾರಿ ಭಾಷಣ ಮಾಡಲಿದ್ದಾರೆ.
ಹಿರಿಯ ವೈದ್ಯರಾದ ಡಾ| ಶರತ್ ರಾವ್, ಡಾ| ಪ್ರಕಾಶ್ ಭಟ್, ಡಾ| ವಿಷ್ಣು ಶೆಣೈ ಬೆಳ್ಳೆ ಹಾಗೂ ಡಾ| ಗೀತಾ ಪುತ್ರನ್ ಮತ್ತು ಈ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ವೈದ್ಯರನ್ನು ಸಮ್ಮಾನಿಸಲಾಗುವುದು.












