ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ

ಉಡುಪಿ: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಹಾಗೂ
ರಾಷ್ಟ್ರೀಯ ಪದವಿ ವಿದ್ಯಾರ್ಥಿಗಳ ಪೋಷಕ ಮತ್ತು ಶಿಕ್ಷಕರ ಸಂಘ ಜಂಟಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದೆ.

ಭಾಷಣದ ವಿಷಯ: “ಭವಿಷ್ಯದ ಜನಪ್ರತಿನಿಧಿ ಹೇಗಿರಬೇಕು?”

ಆಗಸ್ಟ್ 14 ಭಾನುವಾರದಂದು ಶ್ರೀಮತಿ ಸೀತಾಲಕ್ಷ್ಮಿ ಮತ್ತು ಬಿ ಎಂ ರಾಮಕೃಷ್ಣ ಹತ್ವಾರ್ ಸಭಾಭವನ, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ 1-30 ರಿಂದ ಸ್ಪರ್ಧೆ ನಡೆಯಲಿದೆ.

ಕಿರಿಯ ವಿಭಾಗ: 11 ಮತ್ತು 12 ನೆಯ ತರಗತಿ ವಿದ್ಯಾರ್ಥಿಗಳು (16 ರಿಂದ 18 ವಯಸ್ಸಿನ ಗುಂಪು).

ಪ್ರಥಮ ಬಹುಮಾನ :- 3000.00, ದ್ವಿತೀಯ ಬಹುಮಾನ :- 1000.00 ಮತ್ತು ಪ್ರಮಾಣ ಪತ್ರ.

ಹಿರಿಯರ ವಿಭಾಗ: ಪದವಿ / ಸ್ನಾತಕೋತ್ತರ ವಿದ್ಯಾರ್ಥಿಗಳು / ಉದ್ಯೋಗಿಗಳು (19 ರಿಂದ 23 ವರ್ಷ ವಯೋಮಿತಿ)
ಪ್ರಥಮ ಬಹುಮಾನ:- 4,000.00 ದ್ವಿತೀಯ ಬಹುಮಾನ:- 2000.00

ನಿಯಮಗಳು: ಭಾಷಣ ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು.
ಪೂರ್ವ ನೋಂದಣಿ ಕಡ್ಡಾಯ.
ಗರಿಷ್ಠ ಸಮಯದ ಮಿತಿ 4 ನಿಮಿಷ.

ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ.
ಪ್ರತಿವರ್ಗಕ್ಕೆ ಕನಿಷ್ಠ 25 ನೋಂದಾವಣೆಗಳು ಮಾತ್ರ.

ನೋಂದಾವಣೆಗೆ ಆಧಾರ್ ಕಾರ್ಡ್ ಕಡ್ಡಾಯ.

ಹೆಸರನ್ನು ನೋಂದಾಯಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅರ್ಜಿಯನ್ನು ತುಂಬಿಸಿ:

https://forms.gle/PmgtEqUfQDUfiWH2A
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9137386752.