ಹಿರಿಯಡ್ಕ: ಸುಶೀಲ ಟೀಚರ್ ನಿಧನ; ಜಿಲ್ಲಾ ಬಿಜೆಪಿ ತೀವ್ರ ಸಂತಾಪ

ಹಿರಿಯಡ್ಕ: ಬೊಮ್ಮರಬೆಟ್ಟು ಗ್ರಾಮದ ಎಚ್. ಸುಶೀಲ ಟೀಚರ್‌ ಇತ್ತೀಚೆಗೆ ನಿಧನರಾಗಿದ್ದು, ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

1962ನೇ ಇಸವಿಯಿಂದ 2020 ಇಸವಿಯವರೆಗೆ 58 ವರ್ಷ ಬಾಲವಾಡಿಯಲ್ಲಿ ಮಕ್ಕಳ ಹಾಗೂ ಪೋಷಕರ ನೆಚ್ಚಿನ ಶಿಕ್ಷಕಿಯಾಗಿ, 45 ವರ್ಷ ಹೊಲಿಗೆ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅವರ ಸಹೋದರಿ ಎಚ್. ಯೋಗಿನಿ ಅವರ ಜೊತೆ ಸಹಾಯಕಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಇಬ್ಬರು ಜೊತೆಯಾಗಿ ಸರಿ ಸುಮಾರು 33 ವರ್ಷದಿಂದ ಅಂಚೆ ಇಲಾಖೆಯ ಏಜೆಂಟ್ ಆಗಿ ಸೇವೆ ಸಲ್ಲಿಸಿದಾರೆ.

2004 ಇಸವಿಯಿಂದ ನವೋದಯ ಮಹಾಲಕ್ಷ್ಮಿ ಮೊಗವೀರ ಸ್ವ ಸಹಾಯ ಸಂಘ ನಡೆಸಿಕೊಂಡು ಬಂದು ಸಮಾಜ ಸೇವೆ ಸಲ್ಲಿಸಿರುವ ಅವರು ಶ್ರಮಜೀವಿ ಮತ್ತು ಸಂಸಾರವನ್ನು ತುಂಬಾ ಕಷ್ಟದಿಂದ ತೂಗಿಸಿಕೊಂಡು ಹೋಗುತ್ತಿದ್ದರು. ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸುರೇಶ್ ನಾಯಕ್ ತಿಳಿಸಿದ್ದಾರೆ.