ಪಟ್ಲ ಯು.ಎಸ್.ನಾಯಕ್ ಶಾಲಾ ವಿದ್ಯಾರ್ಥಿಗಳಿಗೆ ಬಾಲೋಪಚಾರ ಕೈಪಿಡಿ ವಿತರಣೆ

ಹಿರಿಯಡ್ಕ: ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಪ್ರಕಾಶಿತವಾದ ಆರೋಗ್ಯ ಭಾರತಿ ಕಾರ್ಕಳ ಇದರ ಅಧ್ಯಕ್ಷ ಮತ್ತು ಮೈಸೂರು ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಅವರು ಶಾಲಾ ಮಕ್ಕಳಿಗಾಗಿ ಬರೆದ ” ಬಾಲೋಪಾಚಾರ-ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಕೈಪಿಡಿಯನ್ನು ಪಟ್ಲದ ಯು.ಎಸ್.ನಾಯಕ್ ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಇಂದು ಉಚಿತವಾಗಿ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆರೋಗ್ಯ ಭಾರತಿಯ ಅಖಿಲ ಭಾರತ ಸ್ವಸ್ಥಗ್ರಾಮ ಪ್ರಮುಖ್ ಹಾಗೂ ಕಾರ್ಯಕಾರಣಿ ಸದಸ್ಯ, ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವ ಜೀ , ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು, ಪಟ್ಲ ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ನಾರಾಯಣ ಶೆಣೈ ಮತ್ತು ಆರೋಗ್ಯ ಭಾರತಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್ ಉಪಸ್ಥಿತರಿದ್ದರು.

ಆರೋಗ್ಯ ಭಾರತಿ ಉಡುಪಿ ಗ್ರಾಮಾಂತರ ಕಾರ್ಯದರ್ಶಿ ನಿರಂಜನ ಪ್ರಭು ಕಾರ್ಯಕ್ರಮ ನಿರೂಪಿಸಿದರು.