“ಚಿತ್ರಾಪುರದ ದೇವಿ ಭಕ್ತಿ ಸುಗಿಪು ಬಿಡುಗಡೆ”

ಮಂಗಳೂರು : ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಶ್ರೀಖಾರ್ ಮ್ಯೂಸಿಕ್ ಪ್ರೊಡಕ್ಷನ್ಸ್ ಅರ್ಪಿಸುವ “ಚಿತ್ರಾಪುರದ ದೇವಿ” ಭಕ್ತಿ ಸುಗಿಪು ಚಿತ್ರಾಪುರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಧರ್ಭ ಬಿಡುಗಡೆಗೊಳಿಸಲಾಯಿತು.

ಮಂಜುಶ್ರೀ ಕಾರ್ತಿಕೇಯ ಇವರ ಕಂಠದಲ್ಲಿ ಮೂಡಿಬಂದ ಸುಮಧುರ ಗೀತೆಯ ಸಾಹಿತ್ಯವನ್ನು ಅಶೋಕ್‌ ಪೂಜಾರಿ ಮುಂಬೈ ಬರೆದಿದ್ದು, ಕೆ. ರವಿಶಂಕರ್ ಮಂಗಳೂರು ಇವರು ರಾಗ ಸಂಯೋಜನೆ ಹಾಗೂ ಸಂಗೀತ ಸಂಯೋಜನೆಯನ್ನು ಶಿನೋಯ್‌ ವಿ ಜೋಸೆಫ್ ಮಾಡಿದ್ದಾರೆ.
ವರುಣ್ ರಾವ್ ಇವರ ಕೊಳಲು ವಾದನ, ರಾಜೇಶ್ ಭಾಗವತ್‌ ತಬಲ ಹಾಗೂ ಸುಮುಖ್ ಆಚಾರ್ಯ ಇವರ ಸಿತಾರ್ ಮೂಲಕ ಇಂಪಾಗಿ ಮೂಡಿಬಂದಿರುವ ಈ ಗೀತೆಯೂ ಮಂಜುಶ್ರೀ ಕಾರ್ತಿಕೇಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.