ಭಾರೀ ಮಳೆಗೆ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತ, ಪರ್ಯಾಯ ಮಾರ್ಗ ಸಂಚಾರ

ಕಾರ್ಕಳ : ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಶೃಂಗೇರಿ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ- ಶೃಂಗೇರಿ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ.

ಪ್ರಯಾಣಿಕರಿಗಾಗಿ ಬದಲಿ ಮಾರ್ಗದ ವಿವರ:
ಶೃಂಗೇರಿ – ಕೆಲ್ಲಾರ್ – ಮೀಗಾ ಮಾರ್ಗವಾಗಿ ಬೇಗಾರ್ ಮೂಲಕ ಆಗುಂಬೆ ತಲುಪಬಹುದಾಗಿದೆ
ಅಥವಾ
ಶೃಂಗೇರಿ – ಕಾವಡಿ – ಬಿಲಗದ್ದೆ – ಶಾನುವಳ್ಳಿ – ಮಾವಿನಕಟ್ಟೆ – ಬೇಗಾರ್ ಮಾರ್ಗವಾಗಿ ಆಗುಂಬೆ ತಲುಪಬಹುದಾಗಿದೆ.