ಬಿಜೆಪಿ ಉಡುಪಿ ನಗರ ಯುವ ಮೋರ್ಚಾದಿಂದ ಕಲ್ಮಾಡಿ ಸೇತುವೆಯ ಸ್ವಚ್ಛತೆ

ಉಡುಪಿ: ಗಾಂಧಿಜಯಂತಿ ಪ್ರಯುಕ್ತ ಸೇವಾಸಪ್ತಾಹದ ಅಭಿಯಾನದಡಿ ಉಡುಪಿ ನಗರ ಯುವ ಮೋರ್ಚಾ ವತಿಯಿಂದ ಕಲ್ಮಾಡಿ ಸೇತುವೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

ಶಾಸಕ ಕೆ. ರಘುಪತಿ ಭಟ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಸುಂದರ್ ಜೆ. ಕಲ್ಮಾಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಶಾಂತ್ ಕುಮಾರ್, ಯೋಗೀಶ್ ದೇವಾಡಿಗ, ಸಂಧ್ಯಾ ರಮೇಶ್, ಗಿರೀಶ್ ಕಿದಿಯೂರು, ಸತೀಶ್ ಜತ್ತನ್ನ, ಚಂದ್ರಕಾಂತ್, ಜೀವನ್ ಬಾಬುತೋಟ, ನಿತಿನ್ ಅಮೀನ್, ಸಂದೇಶ್ ಅಮೀನ್, ಪ್ರಸಾದ್, ಕಾರ್ತಿಕ್, ಸುಚಿತ್ ನೀಲೇಶ್, ಗಂಗಾಧರ್, ಅಜಿತ್ ಕಲ್ಮಾಡಿ ಉಪಸ್ಥಿತರಿದ್ದರು
ಯುವ ಮೋರ್ಚಾ ಸದಸ್ಯ ಪ್ರಜೀತ್ ಆಚಾರ್ಯ ಕಾರ್ಯಕ್ರಮದ ಜವಾಬ್ದಾರಿ ವಹಿಸಿದ್ದರು.