ಚಿಟ್ಪಾಡಿ ಹೊಸಮಠ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನದ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ

ಉಡುಪಿ: ಚಿಟ್ಪಾಡಿ ಹೊಸಮಠ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ ಟ್ರಸ್ಟ ವತಿಯಿಂದ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ, ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರು, ಪಂಜುರ್ಲಿ ಮತ್ತು ಪರಿವಾರ ದೈವಸ್ಥಾನ ಜೀರ್ಣೋದ್ದಾರದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮವು ಜ. 17 ರಂದು ನಡೆಯಿತು.

ಸಮಿತಿಯ ಗೌರವಾಧ್ಯಕ್ಷ ವಾಸುದೇವ ಆಚಾರ್ಯ ಮತ್ತು ರಾಧಿಕಾ ಮನೋಹರ ರಾವ್ ಉಪಸ್ಥಿಯಲ್ಲಿ ಹಯವದನ ತಂತ್ರಿಯವರ ನೇತೃತ್ವದಲ್ಲಿ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸದ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಜರಗಿತು.

ಶಿಲಾನ್ಯಾಸ ಸಮಾರಂಭದ ಮುಖ್ಯ ಅತಿಥಿಗಳಾಗಿ ವಾಮನ ಹೊಳ್ಳ ಮುಂಬಯಿ, ಸುಧಾಕರ ಶೆಟ್ಟಿ ಮುಂಬಯಿ, ನಗರ ಸಭಾ ಸದಸ್ಯ ರಾಜು, ಸದಾನಂದ ಶೆಟ್ಟಿ, ಶಂಕರ ಶೆಟ್ಟಿ, ರಮೇಶ ರಾವ್ , ಪ್ರದೀಪ್ ಕುಮಾರ್, ಪ್ರಭಾಕರ್ ಭಟ್, ಅನಂತ ಭಟ್, ರಘುಪತಿಭಟ್, ವೆಂಕಟ್ ರಾಜ್ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಾರ್ಯಾಧ್ಯಕ್ಷ ರಘುಪತಿ ಆಚಾರ್ಯ, ಕಾರ್ಯದರ್ಶಿ ಸುಬ್ರಮಣ್ಯ ಆಚಾರ್ಯ, ಕೋಶಾಧಿಕಾರಿ ಶ್ರೀಕಾಂತ್ ಆಚಾರ್ಯ, ಪ್ರಸಾದ್ ರಾವ್ , ತಾಂತ್ರಿಕ ಸಲಹೆಗಾರ ಶ್ರೀಧರ್ ಆಚಾರ್ಯ, ಸಮಿತಿಯ ನಂದಕುಮಾರ್, ರವೀಂದ್ರ ನಾಯಕ್, ಶಾಂತಿ ಆಚಾರ್ಯ, ಪ್ರಧಾನ ಅರ್ಚಕ ರಾಮದಾಸ್ ಆಚಾರ್ಯ, ಭಾಸ್ಕರ್ ಶೆಟ್ಟಿ , ವಿಜಯ ಶೆಟ್ಟಿ, ಉಮೇಶ ಕಾರಂತ್ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.