ಪುತ್ತಿಗೆ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ

ಮುಂಬೈ: ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಚತುರ್ಥ ಪರ್ಯಾಯ ಪ್ರಯುಕ್ತ ಸಂಚಾರ ನಡೆಯಿತು. ಈ ಸಂದರ್ಭದಲ್ಲಿ ಉಭಯ ಶ್ರೀಪಾದರು ನಾಶಿಕ್ ನಗರದ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಇಸ್ಕಾನ್ ಭಕ್ತರು ಉಭಯ ಶ್ರೀಪಾದರನ್ನು ವೈಭವದಿಂದ ಬರಮಾಡಿಕೊಂಡು, ಶ್ರೀಪಾದರಿಗೆ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ಇಸ್ಕಾನ್ ಭಕ್ತರು ಶ್ರೀಪಾದರಿಂದ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದುಕೊಂಡರು.