ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾಯಾಗ

ಉಡುಪಿ: ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪರ್ವಕಾಲದ ದುರ್ಗಾಷ್ಟಮಿಯಂದು ಶ್ರೀ ದೇವಿಗೆ ವಿಶೇಷ ಅಲಂಕಾರ, ದೇವರ ಸನ್ನಿಧಿಯಲ್ಲಿ ಪುತ್ತೂರು ಶ್ರೀಶ ತಂತ್ರಿ ಗಳವರ ನೇತ್ರ್ವತದಲ್ಲಿ ಸಾಮೂಹಿಕ ಪ್ರಾರ್ಥನೆ, ಚಂಡಿಕಾ ಯಾಗ ನಡೆಯಿತು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರುಗಳಾದ ರವೀಂದ್ರ ಭಟ್, ಭಗವಾನ್ ದಾಸ್, ವಿಜಯ್ ಭಟ್ ಕಡೆಕಾರ್, ನಿತ್ಯಾನಂದ, ಕಿಶೋರ್ ಕುಮಾರ್, ಸುರೇಖಾ ಶೆಟ್ಟಿ, ವಿಮಲ ಶೇಟ್, ಸಂಜಯ್, ಅರ್ಚಕ ವೃಂದ, ಯುವಕ ಮಂಡಳಿಯ ಪದಾಧಿಕಾರಿಗಳು, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ವಿಪ್ರ ಮಹಿಳೆಯರ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು.