ಉಡುಪಿ: ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಚಂಡಿಕಾಯಾಗ

ಉಡುಪಿ: ಇಲ್ಲಿನ ಕೃಷ್ಣ ಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ ಇದರ 7ನೇ ವರ್ಷದ ಶಾರದಾ ಮಾತೆ ಸನ್ನಿಧಿಯಲ್ಲಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಂಗಳವಾರದಂದು ಅರ್ಚಕ ವೃಂದದವರು ಚಂಡಿಕಾಯಾಗ ನಡೆಸಿಕೊಟ್ಟರು. ಸಾಮೂಹಿಕ ಪ್ರಾಥನೆ, ಚಂಡಿಕಾ ಯಾಗದ ಪೂರ್ಣಾಹುತಿ, ಮಹಾ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಮಾರಂಭದಲ್ಲಿ ಲಕ್ಷ್ಮೀ ನಾರಾಯಣ ಮಟ್ಟು, ರಾಧಾಕೃಷ್ಣ ಮೆಂಡನ್, ತಾರಾ ಆಚಾರ್ಯ, ಸರೋಜಾ ರಾವ್, ಹರೀಶ್, ಸುರೇಶ್ ಶೇರಿಗಾರ್, ಸುಜಾತ, ಸತೀಶ್ ಕುಮಾರ್, ಮಹೇಶ್ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.