ಅಯೋಧ್ಯೆಯಲ್ಲಿ 25000 ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ ನಿರ್ಮಾಣ: ಪೇಜಾವರ ಶ್ರೀ

ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ಬೆಳವಣಿಗೆಗಳ‌ಕುರಿತು ಮಾಹಿತಿ ನೀಡಿದ ಶ್ರೀಗಳು, ಮಂದಿರ ನಿರ್ಮಾಣ ಕಾರ್ಯ ವೇಗದಿಂದ ನಡೆಯುತ್ತಿದ್ದು ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ […]

ಬೈಲೂರು ಶ್ರೀ ಧೂಮಾವತಿ ದೈವಸ್ಥಾನ: ದೈವಸ್ಥಾನಕ್ಕೆ 15 ಸೆಂಟ್ಸ್ ಜಾಗವನ್ನು ನೀಡಿದ ದಾನಿ ಸದಾನಂದ ಶೆಟ್ಟಿ ಅವರಿಗೆ ಗೌರವ

ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂಬಂದಿಸಿದ 5 ಗ್ರಾಮಗಳಾದ ಬೈಲೂರು, ಮಾರ್ಪಳ್ಳಿ, ಚಿಟ್ಪಾಡಿ, ಕೊರಂಗ್ರಪಡಿ, ಕೆಮೊತ್ತುರು ಮಾಗಣೆಗೆ ಒಳಪಟ್ಟ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಶಿಲಾಮಯ ಆಲಯದಲ್ಲಿ ಹನುಮಾನ್ ರಸ್ತೆಯ 76 ಬಡುಗುಬೆಟ್ಟಿನ ಬೈಲೂರು ನಲ್ಲಿಶುಕ್ರವಾರ ಬೆಳ್ಳಿಗೆ ಪ್ರತಿಷ್ಠಾಪನೆ ಮಾಡಲಾಯಿತು. ಧಾರ್ಮಿಕ ಪೂಜಾ ವಿಧಾನಗಳನ್ನು ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ತಂತ್ರಿಗಳಾದ ಶ್ರೀ ರಮಣ ತಂತ್ರಿ, ಕೃಷ್ಣಮೂರ್ತಿ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್ ಹಾಗೂ ಅರ್ಚಕ ವೃಂದ ನೆಡೆಸಿಕೊಟ್ಟರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ […]

ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು: ಕೆ.ವೈ.ಸಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಗೆ ಗೌರವ

ಉಡುಪಿ: ಅಜ್ಜಮ್ಮ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಕುಂಜಿಬೆಟ್ಟು ಇವರ ಆಶ್ರಯದಲ್ಲಿ ಅಶಕ್ತ ಬಡ ಕುಟುಂಬದ ನೆರವಿಗಾಗಿ ನಡೆದ ಅಜ್ಜಮ್ಮ ಟ್ರೋಫಿ – 2023 ಪಂದ್ಯಾಟದಲ್ಲಿ ಕರಾವಳಿ ಯೂತ್ ಕ್ಲಬ್ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಡಿವೈನ್ ಪ್ರೇಯರ್ ಸೆಂಟರ್ ತೊಕ್ಕೊಟ್ಟು ಇಲ್ಲಿ ತಪಸ್ಸು ಕಾಲದ ಪ್ರಯುಕ್ತ ಡಿವೈನ್ ವಚನ ಮಹೋತ್ಸವ

ಡಿವೈನ್ ಪ್ರೇಯರ್ ಸೆಂಟರ್ ತೊಕ್ಕೊಟ್ಟು (ತೊಕ್ಕೊಟ್ಟು ಬಸ್ಸ್ ಸ್ಟ್ಯಾಂಡ್ ಹಿಂಬದಿ) ಇಲ್ಲಿ ತಪಸ್ಸು ಕಾಲದ ಪ್ರಯುಕ್ತ ‘ಡಿವೈನ್ ವಚನ ಮಹೋತ್ಸವ’ ಇಂದಿನಿಂದ ಮೂರು ದಿನಗಳ ಕಾಲ ಬೆಳಿಗ್ಗೆ ೯ ರಿಂದ ಸಂಜೆ ೬ರ ವರೆಗೆ ಕನ್ನಡದಲ್ಲಿ ರಿಟ್ರೀಟ್ ನಡೆಯಲಿರುವುದು. ಪೊಟ್ಟಾ ಡಿವೈನ್ ರಿಟ್ರೀಟ್ ಸೆಂಟರಿನ ಪ್ರಖ್ಯಾತ ಬ್ರದರ್ ಸಾಜಿತ್ ಜೋಸೆಫ್ ಮುಖ್ಯ ಪ್ರಭೋಧಕರಾಗಿ ನಡೆಸಿಕೊಡಲಿದ್ದು, ತೊಕ್ಕೊಟ್ಟು ಡಿವೈನ್ ಪ್ರೇಯರ್ ಸೆಂಟರ್ ನಿರ್ದೇಶಕರಾದ ಫಾ| ಜೋಸೆಫ್ ವಾಣಿಯಂತರ, ಪೆರ್ಮನ್ನೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಪ್ರಧಾನ ಗುರುಗಳಾದ ಫಾ| ಸಿಪ್ರಿಯನ್ […]

ಬಂಗಾಡಿ ಕೊಲ್ಲಿ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಮಂಗಳೂರು: ಮಾ.18 ರಂದು ನಡೆದ 25ನೇ ವರ್ಷದ ಬಂಗಾಡಿ ಕೊಲ್ಲಿ “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 05 ಜೊತೆ ಅಡ್ಡಹಲಗೆ: 07 ಜೊತೆ ಹಗ್ಗ ಹಿರಿಯ: 09 ಜೊತೆ ನೇಗಿಲು ಹಿರಿಯ: 25 ಜೊತೆ ಹಗ್ಗ ಕಿರಿಯ: 14 ಜೊತೆ ನೇಗಿಲು ಕಿರಿಯ: 44 ಜೊತೆ ಸಬ್ ಜೂನಿಯರ್ ನೇಗಿಲು: 51 ಒಟ್ಟು ಕೋಣಗಳ ಸಂಖ್ಯೆ: 155 ಜೊತೆ ಕನೆಹಲಗೆ: ( ನೀರು ನೋಡಿ […]