ಏನಿದು ಕ್ಲೀನ್ ನೋಟ್ ಪಾಲಿಸಿ? 2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವಿಕೆ ಕಾರಣ ಹಾಗೂ ನೋಟು ಬದಲಾಯಿಸುವುದು ಹೇಗೆ? ತಿಳಿದುಕೊಳ್ಳಿ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2,000 ರೂನ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು,ಇದು ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. 2016ರ ನವೆಂಬರ್‌ ತಿಂಗಳಿನಲ್ಲಿ 500 ಮತ್ತು 1,000 ರ ಹಳೆಯ ನೋಟುಗಳನ್ನು ನಿಷೇಧಿಸಿದಾಗ 2,000 ನೋಟುಗಳನ್ನು ಪರಿಚಯಿಸಲಾಯಿತು. ಆದರೆ ಇದೀಗ ಆರ್.ಬಿ.ಐ ಈ ನೋಟುಗಳನ್ನು ಹಿಂಪಡೆಯುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಆರ್.ಬಿ.ಐ ಪ್ರಕಾರ, ನೋಟ್ ಬ್ಯಾನ್ ಬಳಿಕ ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಗೆ ಬಂದ ಬಳಿಕ 2018-2019 ರಲ್ಲಿ 2000 ರೂ ನೋಟುಗಳನ್ನು […]

ಮೇ.20 ರಿಂದ 25: ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಹಿರಿಯಡಕ: ಕಾರ್ಕಳ ತಾಲೂಕಿನ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರಿಗೆ ಬ್ರಹ್ಮಕಲಶೋತ್ಸವವು ಮೇ.20 ರಿಂದ 25 ರವರೆಗೆ ವೇದಮೂರ್ತಿ ಷಡಂಗ ಶ್ರೀ ಬಿ. ಗುರುರಾಜ ತಂತ್ರಿ ಅವರ ನೇತೃತ್ವದಲ್ಲಿ ಜರಗಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಮೇ.20 ರ ಬೆಳಿಗ್ಗೆ 12 ಕಾಯಿ ಗಣಪತಿ ಹೋಮ, ನವಗ್ರಹ ಹೋಮ, ಸಂಜೆ 5ರಿಂದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಭೋಜನ ಶಾಲೆ, ಪಾಕಶಾಲೆ, ವಸಂತ ಮಂಟಪ ಉದ್ಘಾಟನೆ ನಡೆಯಲಿದೆ. ಶ್ರೀ ಪೇಜಾವರ […]

ಉಡುಪಿ ಅಧಿಕೃತ ಡೀಲರ್ National Equipment ನಲ್ಲಿದೆ ಅಂತರಾಷ್ಟ್ರೀಯ ಗುಣಮಟ್ಟದ ವಾಣಿಜ್ಯ ಶೈತ್ಯೀಕರಣ ಉಪಕರಣಗಳು

2009 ರಲ್ಲಿ ಪ್ರಾರಂಭವಾದ ವಾಣಿಜ್ಯ ಶೈತ್ಯೀಕರಣ ಉಪಕರಣ ಸಂಸ್ಥೆಯಾದ Elanpro 2021 ರಿಂದಲೇ 510 ಚಾನಲ್ ಪಾಲುದಾರರ ಮೂಲಕ ಬಲವಾದ ವಿತರಣಾ ಜಾಲವನ್ನು ಹೊಂದಿದೆ. ಬಾರ್, ಮೆಡಿಕಲ್, ರಿಟೇಲ್, ಪ್ರೊಫೆಷನಲ್ ಕಿಚನ್, ಶೋಕೇಸ್ ಡಿಸ್ಪ್ಲೇ, ಬೆವೆರೇಜ್ ಡಿಸ್ಪೆನ್ಸರ್ ಮುಂತಾದ ರೆಫ್ರಿಜೆರೇಷನ್ ಸೌಲಭ್ಯಗಳನ್ನು Elanpro ಗ್ರಾಹಕರಿಗಾಗಿ ನೀಡುತ್ತಾ ಬಂದಿದೆ. ಯಶಸ್ವಿ ಸ್ವಾಮ್ಯದ ಬ್ರ್ಯಾಂಡ್ ಗುಣಮಟ್ಟದ ವಾಣಿಜ್ಯ ಶೈತ್ಯೀಕರಣ ಮತ್ತು ಪಾನೀಯ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಉಡುಪಿ ನಗರದಲ್ಲಿ National Equipment ವಿತರಕರು ಉಪಕರಣಗಳ ವಿತರಣೆಯನ್ನು ಕೈಗೊಳ್ಳುತ್ತಿದ್ದಾರೆ.  

ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರದ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ

ಉಡುಪಿ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾಭಿಷೇಕ ಹಾಗೂ ರಾಶಿ ಪೂಜಾ ಮಹೋತ್ಸವ ಮೇ 24ರ ತನಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ ಮಂಗಳವಾರ ಹೇಳಿದರು. ದೇವಸ್ಥಾನದ ಸುತ್ತುಪೌಳಿ ಮತ್ತು ಅಗ್ರ ಸಭಾ ಮಂಟಪವನ್ನು ನವೀಕರಿಸಿ ತಾಮ್ರದ ಮುಚ್ಚಿಗೆ ಹಾಕುವ ಕಾರ್ಯಕ್ಕೆ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದು, ಗರ್ಭಗುಡಿಯ ಸುತ್ತು ಹಾಸು ಕಲ್ಲಿನ ನವೀಕರಣ ವ್ಯವಸ್ಥೆ, ಒಳ ಮತ್ತು […]

ಬನ್ನಂಜೆ ಶ್ರೀ ಶನಿಕ್ಷೇತ್ರ ಶ್ರೀ ಶನಿದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹ ಸನ್ನಿಧಾನ

ಉಡುಪಿ: ಉಡುಪಿ ಬನ್ನಂಜೆ ಗರಡಿ ರಸ್ತೆ ಹತ್ತಿರ ಬನ್ನಂಜೆ ಶ್ರೀ ಶನಿಕ್ಷೇತ್ರ ಶ್ರೀ ಶನಿದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹ ಸನ್ನಿಧಾನದಲ್ಲಿ ಮೇ19 ಶುಕ್ರವಾರದಂದು ಶ್ರೀ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಮಾರ್ಗದರ್ಶನದಲ್ಲಿ ಕೊರಂಗ್ರಪಾಡಿ ಶ್ರೀ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ಚರ ಉತ್ಸವ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಬೆಳಿಗ್ಗೆ 5.30ಕ್ಕೆ ಉಷಾಕಾಲ ಪೂಜೆ, 7:30 ರಿಂದ ಸಗ್ರಹಮುಖ ಶನಿಶಾಂತಿ ಪುರಸ್ಸರ ಜಯ ಸೂಕ್ತ ಯಾಗ 11.30ಕ್ಕೆ ಪೂರ್ಣಾಹುತಿ, […]