ಭರ್ಜರಿ ತಯಾರಿ , ದಿನಪೂರ್ತಿ ಕಾರ್ಯಕ್ರಮ : ಶಿವಣ್ಣನ ಹುಟ್ಟುಹಬ್ಬ

ಕೋವಿಡ್ ಆತಂಕ ಆನಂತರ ನಟ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ದುಃಖದಿಂದಾಗಿ ನಟ ಶಿವರಾಜಕುಮಾರ್, ಸುಮಾರು ನಾಲ್ಕು ವರ್ಷಗಳಿಂದ ಅದ್ಧೂರಿ ಬರ್ತ್ಡೇ, ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದರು. ಆದರೆ ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಸಾರ್ವಜನಿಕವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಲು ಶಿವರಾಜಕುಮಾರ್ ಸಮ್ಮತಿಸಿದ್ದು, ಅದಕ್ಕಾಗಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ. ದಿನಪೂರ್ತಿ ಕಾರ್ಯಕ್ರಮ: ಜು.11ರ ಸಂಜೆಯಿಂದಲೇ ಶಿವರಾಜಕುಮಾರ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ನಿವಾಸದಲ್ಲಿ ರಾತ್ರಿ 12 ಗಂಟೆಗೆ ಬೃಹತ್ ಕೇಕ್ ಕತ್ತರಿಸಲಾಗುತ್ತಿದ್ದು, […]
ಕಾರ್ಪೊರೇಟ್ ಉದ್ಯೋಗಕ್ಕೆ ವಿದಾಯ ಹೇಳಿ ಕೃಷಿಯಲ್ಲಿ ಬದುಕು ಕಟ್ಟಿ ವರ್ಷಕ್ಕೆ 15 ಲಕ್ಷ ಸಂಪಾದಿಸುವ ಮಂಗಳೂರಿನ ಮಾದರಿ ಯುವಕ ಚೇತನ್ ಶೆಟ್ಟಿ!!

ಇಂದಿನ ಕಾಲದ ಯುವಕರೆಲ್ಲಾ ಕೈ ತುಂಬಾ ಸಂಪಾದನೆ ಮಾಡುವ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿರುವಾಗ, ಇಲ್ಲೊಬ್ಬ 35 ವರ್ಷದ ಯುವಕ ತನ್ನ ಕಾರ್ಪೊರೇಟ್ ಕೆಲಸವನ್ನು ತ್ಯಜಿಸಿ ಕೃಷಿಯಲ್ಲಿ ನೆಮ್ಮದಿ ಮತ್ತು ಬದುಕನ್ನು ಕಂಡುಕೊಂಡಿದ್ದಾರೆ. ಮಂಗಳೂರಿನ ಬೆಳ್ಳಾರೆಯ ನಿವಾಸಿ ಚೇತನ್ ಶೆಟ್ಟಿ ತನ್ನ ಎಂಟು ವರ್ಷಗಳ ಕಾರ್ಪೊರೇಟ್ ಜಗತ್ತಿಗೆ ವಿದಾಯ ಹೇಳಿ ಹುಟ್ಟೂರಿಗೆ ಮರಳಿ ಕೃಷಿಕರಾಗಿ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. 2017 ರಲ್ಲಿ, ಬೆಂಗಳೂರಿನಿಂದ ಮರಳಿದ ಚೇತನ್ ಮಂಗಳೂರು ನಗರದಿಂದ 75 ಕಿಮೀ ದೂರದಲ್ಲಿರುವ ಬೆಳ್ಳಾರೆಯಲ್ಲಿರುವ ತಮ್ಮ ಪೂರ್ವಜರ […]
ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ ಕಿರೀಟ ಪಡೆದ ʻಟ್ರಾನ್ಸ್ಜೆಂಡರ್ʼ ಮಾಡೆಲ್ ʻರಿಕ್ಕಿ ವ್ಯಾಲೆರಿ ಕೊಲ್ಲೆʼ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ 2023 ಪ್ರಶಸ್ತಿಯನ್ನು ಇದೇ ಮೊದಲ ಬಾರಿಗೆ ಟ್ರಾನ್ಸ್ಜೆಂಡರ್ ಮಾಡೆಲ್ ರಿಕ್ಕಿ ವ್ಯಾಲೆರಿ ಕೊಲ್ಲೆಗೆ ಜುಲೈ 8 ರಂದು(ಶನಿವಾರ) ಲ್ಯೂಸ್ಡೆನ್ನಲ್ಲಿರುವ AFAS ಥಿಯೇಟರ್ನಲ್ಲಿ ನೀಡಲಾಯಿತು.ರಿಕ್ಕಿ ವಾಲೆರಿ ಕೊಲ್ಲೆ(Rikkie Valerie Kollé) ಮಿಸ್ ಯೂನಿವರ್ಸ್ ನೆದರ್ಲ್ಯಾಂಡ್ಸ್ 2023 ಕಿರೀಟವನ್ನು ಪಡೆದ ಮೊದಲ ಟ್ರಾನ್ಸ್ಜೆಂಡರ್ ಆಗಿದ್ದು, ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇನ್ನೂ, ಆಮ್ಸ್ಟರ್ಡ್ಯಾಮ್ನ 26 ವರ್ಷದ ನಥಾಲಿ ಮೊಗ್ಬೆಲ್ಜಾಡಾ ಮೊದಲ ರನ್ನರ್ ಅಪ್ ಎಂದು ಹೆಸರಿಸಲ್ಪಟ್ಟರೆ, ಹಬೀಬಾ ಮೊಸ್ತಫಾ ಮತ್ತು ಲೌ ಡಿರ್ಚ್ಗಳು ಕ್ರಮವಾಗಿ […]
ಉಡುಪಿ ಕಲ್ಯಾಣಪುರ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು: ಕ್ರಿಯೇಟಿವ್ ಸಮಾಗಮ

ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ.30 ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ “ಕ್ರಿಯೇಟಿವ್ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಶ್ರೀ ಅಶ್ವತ್ ಎಸ್ ಎಲ್ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪಿಯುಸಿ ಹಂತಕ್ಕೆ ಬಂದಿದ್ದು, ಬದುಕಿನ ದಿಕ್ಕನ್ನೇ ಬದಲಾಯಿಸುವ […]
ಡಿಜಿ ಲಾಕರ್ನಲ್ಲಿ ದ್ವಿತೀಯ ಪಿಯುಸಿ ಪಾಸ್ ಔಟ್ ಆದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಲಭ್ಯ

ಬೆಂಗಳೂರು : ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಅಂಕಪಟ್ಟಿಯನ್ನ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. 2023ರ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ 5,24,128 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. 2023ರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಜೂನ್ 26 ರಿಂದಲೇ ಡಿಜಿ ಲಾಕರ್ಗೆ ಅಪ್ಲೋಡ್ಗೆ ಮಾಡಲಾಗಿದೆ. ಹಾಗಾಗಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಎನ್ಎಡಿ ಡಿಜಿಲಾಕರ್ […]