ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಇಂದು ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ.15 ಆದಿತ್ಯವಾರದಿಂದ ಅ.24 ಮಂಗಳವಾರದವರೆಗೆ ನಡೆಯಲಿದೆ. ಇದರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ನಾಳೆ ಸಂಜೆ 6 ಗಂಟೆಗೆ ನಡೆಯಲಿದೆ. ಉದ್ಘಾಟಕರು: ಶ್ರೀಮತಿ ಕೆ. ಬೇಬಿ ಅಧ್ಯಕ್ಷರು ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷತೆ: ಶ್ರೀ ಎನ್. ರಘುರಾಮ ಮಧ್ಯಸ್ಥ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಮುಖ್ಯ ಅತಿಥಿಗಳು: ಶ್ರೀ ರಮೇಶ ಪೂಜಾರಿ ಉಪಾಧ್ಯಕ್ಷರು ನೀಲಾವರ ಗ್ರಾಮ ಪಂಚಾಯತ್ ಶ್ರೀ ಮಹೇಂದ್ರ ಕುಮಾರ್ ನಿಕಟಪೂರ್ವ ಅಧ್ಯಕ್ಷರು ಶ್ರೀಮತಿ ಸುಮ ದೇವಾಡಿಗ ಸದಸ್ಯರು, […]

ಅ.15-24: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅ. 15 ರಿಂದ 24ರ ವರೆಗೆ ಪಾಡಿಗಾರ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಅ.15 ರಿಂದ ಪ್ರತಿ ದಿನ ಬೆಳಿಗ್ಗೆ 05:30 ಸುಪ್ರಭಾತ ಚಂಡಿಕಾ ಯಾಗ ರಾತ್ರಿ 7.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಾತ್ರಿ 8.00ಕ್ಕೆ ಕಲ್ಪೋಕ್ತಪೂಜೆ, ನವರಾತ್ರಿ ಉತ್ಸವ, ರಥೋತ್ಸವ. ಅ.16 ರಂದು ಬೆಳಿಗ್ಗೆ 7ಕ್ಕೆ ಕದಿರು ಕಟ್ಟುವುದು, ಅ.19 ರಂದು ಲಲಿತಾ ಪಂಚಮಿ, ಅ.20 ರಂದು ಶಾರದಾ ಪೂಜೆ ಆರಂಭ, ಅ. 22ರಂದು […]

World Sight Day 2023: ಕಣ್ಣಿನ ಆರೋಗ್ಯದ ಬಗ್ಗೆ ಬೇಡ ನಿರ್ಲಕ್ಷ್ಯ, ವಿಶ್ವ ದೃಷ್ಟಿ ದಿನದ ಬಗ್ಗೆ ಇಲ್ಲಿದೆ ಮಾಹಿತಿ

ನಿಮ್ಮ ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಆಲೋಚಿಸಲು ಮತ್ತು ಅದನ್ನು ರಕ್ಷಿಸಲು ಮತ್ತು ಭವಿಷ್ಯದಲ್ಲಿ ಅದನ್ನು ಆರೋಗ್ಯಕರವಾಗಿಡಲು ಎಚ್ಚರಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ದೃಷ್ಟಿ ದಿನದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಹೀಗಿದೆ. ಪಂಚೇಂದ್ರೀಯಗಳಲ್ಲಿ ಕಣ್ಣು (Eye) ಪ್ರಮುಖವಾದ ಅಂಗ. ದೃಷ್ಟಿ ಇಲ್ಲದಿದ್ದರೆ ಜಗತ್ತೇ ಕತ್ತಲು. ಪ್ರಪಂಚದಾದ್ಯಂತದ ಅನೇಕ ಜನರು ವಿವಿಧ ರೀತಿಯ ದೃಷ್ಟಿ ದೋಷಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್​ ತಿಂಗಳ ಎರಡನೇ ಗುರುವಾರದಂದು […]

ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ: ವಾರ್ಷಿಕ ಮಹಾಸಭೆ

ಪೆರ್ಡೂರು: ಪೆರ್ಡೂರು ಸಮಾಜ ಬಾಂಧವರ ನಿರಂತರ ಸಹಕಾರದಿಂದ ಸಂಘ ಅಭಿವೃದ್ದಿ ಹೊಂದುವುದರ ಜತೆಗೆ ಲಾಭಾಂಶವನ್ನು ಶಿಕ್ಷಣ ಆರೋಗ್ಯ ಮತ್ತು ವಸತಿ ವಿಚಾರದಲ್ಲಿ ಸಮಾಜ ಬಾಂಧವರಿಗೆ ನೀಡಲಾಗುತ್ತಿದೆ. ಅಲ್ಲದೆ ಸಂಘದ ಎಲ್ಲಾ ನಿರ್ದೇಶಕರು ಯಾವುದೇ ಗೌರವ ಧನ ಹಾಗೂ ಡಿವಿಡೆಂಟ್ ನ್ನು ಪಡೆಯದೆ ಸಂಘದ ಬೆಳವಣಿಗೆಗೆ ಸಹಕಾರಿಯಾಗಿ ಸದಸ್ಯರಿಗೆ ಶೇ. 8 ಡಿವಿಡೆಂಟ್ ಘೋಷಿಸಲಾಗಿದೆ ಎಂದು ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು. ಅವರು ಸೆ.24ರಂದು ಪೆರ್ಡೂರು ಬಂಟರ ಸಮುದಾಯ […]

ಕಿನ್ನಿಮೂಲ್ಕಿ ಕನ್ನರ್ಪಾಡಿ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ

ಉಡುಪಿ: ಕಿನ್ನಿಮೂಲ್ಕಿ ಕನ್ನರ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಗಣೇಶೋತ್ಸವವು ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಿತು. ಸೆ. 24ರಂದು ಗಣೇಶನ ವಿಸರ್ಜನಾ ಮೆರವಣಿಗೆಯ ಶೋಭಾ ಯಾತ್ರೆಯು ವಿವಿಧ ವೇಷಭೂಷಣ, ವೇದ ಘೋಷಗಳೊಂದಿಗೆ ಫಯರ್ ಸ್ಟೇಷನ್ ರಸ್ತೆ, ಅಜ್ಜರಕಾಡು ಪಾರ್ಕ್, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಕಿನ್ನಿಮುಲ್ಕಿ ಮುಖ್ಯ ರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರದಿಂದ ಮೂಲಕ ಸಾಗಿ ಬಂದು […]