ಪರ್ಯಾಯ ಶ್ರೀಪಾದರಿಂದ “ಕೋಟಿ ತುಳಸಿ ಅರ್ಚನೆ” ಯ ಕರಪತ್ರ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ.

ಉಡುಪಿ: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯ ಹಾಗೂ ಅನುಜ್ಞೆಯ ಮೇರೆಗೆ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಸಭಾ ಕಡಿಯಾಳಿ ಶಾಖೆಯ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಬ್ರಾಹ್ಮಣ ಸಮುದಾಯದ ಸಹಾಯ ಸಹಕಾರದೊಂದಿಗೆ ಉಡುಪಿಯ ರಾಜಾಂಗಣದಲ್ಲಿ ಡಿ.31 ರವಿವಾರದಂದು ನಡೆಯಲಿರುವ ಋಕ್ಮಿಣೀಕರಾರ್ಚಿತ ಶ್ರೀಕೃಷ್ಣನಿಗೆ ಶ್ರೀ ವಿಷ್ಣು ಸಹಸ್ರ ನಾಮಾವಳೀ ಸಹಿತ “ಕೋಟಿ ತುಳಸಿ ಅರ್ಚನೆ”ಯ ಆಮಂತ್ರಣ ಪತ್ರಿಕೆ ಹಾಗೂ ಈ ಬಗ್ಗೆ ಶ್ರೀಮಠದಿಂದ ಪ್ರಕಟಿತ ಮನವಿಯ ಕರಪತ್ರವನ್ನು ಪರ್ಯಾಯ ಮಠದ ಪರಮ […]

ಆಯುರಾರೋಗ್ಯಕ್ಕಾಗಿ ನಂದಿ ಆರ್ಗಾನಿಕ್ ಫಾರ್ಮ್ ಹೌಸ್ ನ ಸಾವಯವ ಮೊರಿಂಗಾ(ನುಗ್ಗೆ) ಉತ್ಪನ್ನಗಳು

ಮಾನವ ಮಾನಸಿಕವಾಗಿ ನೆಮ್ಮದಿಯಿಂದ ಇರುವುದು ಮುಖ್ಯ ಅಷ್ಟೇ ನೆಮ್ಮದಿಯು ಆತನ ದೇಹದಿಂದಲೂ ಅವನಿಗೆ ದೊರೆಯುವುದು ಮುಖ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬ ಮಾತಿನಂತೆ ಮನುಷ್ಯನಿಗೆ ತನ್ನ ದೇಹ ಸಹಕರಿಸಿದಾಗ ಮಾತ್ರ ಆತನ ಮನಸ್ಸು ದೃಢವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಕೊಪ್ಪಳದ ತಾವರೆಕೆರೆಯಲ್ಲಿ ಡಾ. ಬಸಯ್ಯ ಹಿರೇಮಠ ಎಂಬುವವರು “ನಂದಿ ಆರ್ಗಾನಿಕ್ ಫಾರ್ಮ್ ಹೌಸ್” ಎಂಬ ಒಂದು ಸಂಸ್ಥೆಯನ್ನು ನಿರ್ಮಿಸಿ ಸಂಪೂರ್ಣವಾಗಿ ಸಾವಯವತೆಯನ್ನು ಉಳಿಸಿಕೊಂಡು ಮತ್ತು ನಿರ್ಮಿಸಿಕೊಂಡು ಬಂದಿದ್ದಾರೆ. ಈ ಕಂಪನಿಯು ಕರ್ನಾಟಕದ ಏಕೈಕ ಮೋರಿಂಗಾ […]

ಉಡುಪಿ ಭಾರತ್‌ ಮಾರ್ಕೆಟಿಂಗ್‌ 16ನೇ ವರ್ಷಕ್ಕೆ ಪಾದಾರ್ಪಣೆ: ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟದಲ್ಲಿ ಅತ್ಯಂತ ವಿಶ್ವಾಸಾರ್ಹತೆ ಹೊಂದಿದ ಸಂಸ್ಥೆ

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರುವ ಗುಣಮಟ್ಟದ ಅತ್ಯಾಧುನಿಕ ಬೃಹತ್‌ ಸಂಗ್ರಹದ ವಿದ್ಯುತ್‌ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿಎಂ ಬ್ರ್ಯಾಂಡ್‌ ಶೋರೂಂ ‘ಭಾರತ್‌ ಮಾರ್ಕೆಟಿಂಗ್‌’ ಬ್ರ್ಯಾಂಡೆಡ್‌ ಎಲೆಕ್ಟ್ರಿಕಲ್ ಸರಕುಗಳ ಮಾರಾಟದ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ಇಲ್ಲಿ ನೂತನ ಮನೆ, ಸಭಾಂಗಣ, ಮಾಲ್, ಮಳಿಗೆ, ಸಮುಚ್ಚಯ ನಿರ್ಮಾಣದಲ್ಲಿ ಬಳಸುವ ಜಿಎಂ, ಹ್ಯಾವೆಲ್, ಫಿನೊಲೆಕ್ಸ್‌, ವಿ-ಗಾರ್ಡ್‌, ಲಿಗ್ರೆಂಡ್‌, ಆರ್‌ಆರ್‌, ಲ್ಯೂಕರ್, ಹಿಲ್ಸ್ ಕ್ಯಾಬ್, ಪ್ಯಾಸೋಲೈಟ್, ಸ್ಟ್ಯಾಂಡರ್ಡ್ ಕಂಪೆನಿಗಳ ಕೇಬಲ್ಸ್, ವಯರ್, ಎಲ್ಇಡಿ ಫಿಟ್ಟಿಂಗ್ಸ್‌, ಹವೆಲ್ಸ್ ಕಂಪೆನಿಯ ಇಲೆಕ್ಟ್ರಿಕಲ್ ಸಾಮಗ್ರಿಗಳಾದ […]

37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಕಾರ್ಕಳ: ಡಿ.9 ರಂದು ನಡೆದ 37ನೇ ವರ್ಷದ ಬಾರಾಡಿಬೀಡು “ಸೂರ್ಯ – ಚಂದ್ರ” ಜೋಡುಕರೆ ಕಂಬಳ ಕೂಟದ ಫಲಿತಾಂಶ ಹೀಗಿವೆ. ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: ಕನೆಹಲಗೆ: 04 ಜೊತೆ ಅಡ್ಡಹಲಗೆ: 03 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 35 ಜೊತೆ ಹಗ್ಗ ಕಿರಿಯ: 36 ಜೊತೆ ನೇಗಿಲು ಕಿರಿಯ: 110 ಜೊತೆ ಒಟ್ಟು ಕೋಣಗಳ ಸಂಖ್ಯೆ: 208 ಜೊತೆ ಕನೆಹಲಗೆ: ( ಸಮಾನ ಬಹುಮಾನ ) ನೇರಳೆಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ […]

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಧ್ಯಕ್ಷ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಫಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥ್ ನಾರಾಯಣ್ ಮತ್ತು ಶ್ರೀ ಮಠದ ಪಿ ಆರ್ ಓ ಆದ ಕಡೆಕಾರು ಶ್ರೀಶ ಭಟ್, ಶ್ರೀಗಳ ಆಪ್ತರಾದ ಕೆ.ಗಿರೀಶ್ ಉಪಾಧ್ಯಾಯ, ಮತ್ತಿತರು ಉಪಸ್ಥಿತರಿದ್ದರು.