“ನೇಶನಲ್ ಐಟಿಐ ಹೇರಾಡಿ ಬಾರ್ಕೂರು: ಅಪ್ರೆಂಟಿಶಿಪ್ ಕ್ಯಾಂಪಸ್ ಡ್ರೈವ್”

ಬ್ರಹ್ಮಾವರ: ಬಾರ್ಕೂರು ಎಜ್ಯುಕೇಶನಲ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ಬಾರ್ಕೂರಿನ ‘ನೇಶನಲ್ ಐಟಿಐ ಕಾಲೇಜ್’ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪೆನಿಯಿಂದ ಅಪ್ರೆಂಟಿಷಿಪ್ ಕ್ಯಾಂಪಸ್ ಡ್ರೈವ್ ಮೇ.18 ರಂದು ನಡೆಯಿತು. ಟಿ.ಕೆ.ಎಂ.ನ ಡೆಪ್ಯುಟಿ ಮೆನೇಜರ್ ಕಿರಣ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿ‌ ಸುರೇಶ್ ಕಂಪೆನಿಯ‌ ಬಗ್ಗೆ ಸುವಿಸ್ತಾರ ಮಾಹಿತಿ ನೀಡಿದರು. ಅಸಿಸ್ಟೆಂಟ್ ಮೆನೇಜರ್ ಗಳಾದ ಸೂರ್ಯನಾರಾಯಣ್, ಶ್ರೀಕಾಂತ್, ಟೀಂ ಲೀಡರ್ ಮಂಜುನಾಥ್, ಮಾನವ ಸಂಪನ್ಮೂಲ ಅಧಿಕಾರಿ ಪ್ರದೀಪ್ ಭಾಗವಹಿಸಿದ್ದರು. ಸಂಸ್ಥೆಯ ಸಂಚಾಲಕ ಬಿ.ರಾಮಚಂದ್ರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ‌ ಪ್ರಾಂಶುಪಾಲ […]

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದೆ ನಟಿಯ ಭರತನಾಟ್ಯದ ದೃಶ್ಯ

ಚಾಂದ್ ಮೇರಾ ದಿಲ್ ಚಿತ್ರದಲ್ಲಿ ಅನನ್ಯಾ ಪಾಂಡೆ Ananya Panday ಅವರ ಭರತನಾಟ್ಯ ಸನ್ನಿವೇಶ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಸಾಂಪ್ರದಾಯಿಕ ಭರತನಾಟ್ಯದ ಅಭಿಮಾನಿಗಳು, “ಭರತನಾಟ್ಯವನ್ನು ಸಿನಿಮಾಗಳಲ್ಲಿ ಗ್ಲಾಮರ್ ದೃಷ್ಟಿಯಿಂದ ತೋರಿಸಲಾಗುತ್ತಿದೆ” ಎಂದು ಟೀಕಿಸಿದ್ದಾರೆ. ಚಿತ್ರದಲ್ಲಿ ಅನನ್ಯಾ ಪಾಂಡೆ ಅವರು ಭರತನಾಟ್ಯದಲ್ಲಿ ತರಬೇತಿ ಪಡೆದ ಎಂಜಿನಿಯರಿಂಗ್ ವಿದ್ಯಾರ್ಥಿನಿ ‘ಚಾಂದನಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರು ಧರಿಸಿರುವ ಡಿಸೈನರ್ ಲೆಹೆಂಗಾ, ನೃತ್ಯದ ಭಂಗಿಗಳು ಹಾಗೂ ಶೈಲಿ ಪರಂಪರಾಗತ ಭರತನಾಟ್ಯದ ಮೂಲ ಸೌಂದರ್ಯಕ್ಕೆ ಹೊಂದಿಕೆಯಾಗಿಲ್ಲ ಎಂದು ಕೆಲವರು […]

ವಾಹನ ಸವಾರಿಗೆ ಶಾಕ್; ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ.!

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿ ಹೆಚ್ಚಿಸಲಾಗಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 2.61 ರೂ. ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಿಸಲಾಗಿದೆ.ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 102.12 ರೂ.ಗೆ ಹಾಗೂ ಡೀಸೆಲ್ ದರ 95.20 ರೂ.ಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 110 ರೂ. ಗಡಿ ದಾಟಿದೆ. ಮಂಗಳೂರಿನಲ್ಲಿ 110.43 ರೂ. ದರವಿದೆ. ಕಳೆದ 11 […]

NEET ಪೇಪರ್ ಲೀಕ್ ಪ್ರಕರಣ: ತನಿಖೆಯಿಂದ ಹೊರಬಿತ್ತು ಇನ್ನಷ್ಟು ಆಘಾತಕಾರಿ ಅಂಶಗಳು, ಆರೋಪಿಗಳಿಂದ ಸಿಕ್ಕಿತು ಸಿಕ್ರೆಟ್ ಫೈಲ್ಸ್!

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಕರಣದ ಪ್ರಮುಖ ಆರೋಪಿ ಮನೀಷಾ ಹವಾಲ್ದಾರ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಒದಗಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಸಿಬಿಐ ಅಧಿಕಾರಿಗಳು ಮನೀಷಾ ಹವಾಲ್ದಾರ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಅತ್ಯಂತ ಗೌಪ್ಯ ದಾಖಲೆಗಳು ಪತ್ತೆಯಾಗಿವೆ. […]

ಭಟ್ಕಳ ಭೀಕರ ದುರಂತ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಮೃತ್ಯು

ಉತ್ತರ ಕನ್ನಡ: ಭಟ್ಕಳದಲ್ಲಿ ಚಿಪ್ಪಿಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 12 ಜನರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ. ಎಂಟು ಜನರ ಮೃತದೇಹ ಸಿಕ್ಕಿದೆ. ಇಬ್ಬರು ನಾಪತ್ತೆಯಾಗಿದ್ದು, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ಬೆಳಿಗ್ಗೆ ಭಟ್ಕಳದ ತಟ್ಟೆ ಹಕ್ಕಲು ಬಳಿ ಘಟನೆ ನಡೆದಿದೆ. ಎಂದಿನಂತೆ ನದಿ ಸಮುದ್ರ ತೀರಕ್ಕೆ ಕಪ್ಪೆ ಚಿಪ್ಪು ತರಲು ಕುಟುಂಬ ಮಕ್ಕಳು ಸೇರಿದಂತೆ 12 ಮಂದಿ ತೆರಳಿದ್ದಾರೆ. ದೊಡ್ಡ ಅಲೆಗೆ ಸಿಲುಕಿ 12 ಮಂದಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಪಾರಾಗಿದ್ದು, 8 ಮಂದಿ […]