ತೀರ್ಥಹಳ್ಳಿ-ಕುಂದಾಪುರ ಬಾಳೆಬರೆ ಘಾಟ್ ರಸ್ತೆಯಲ್ಲಿ ಭೂ ಕುಸಿತ: ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ; ಪರ್ಯಾಯ ಮಾರ್ಗ ಬಳಸಲು ಸೂಚನೆ!

ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚಿಸಿ ತಾತ್ಕಾಲಿಕ ಆದೇಶವನ್ನು ಶಿವಮೊಗ್ಗದ ಜಿಲ್ಲಾಧಿಕಾರಿಯವರು ಹೊರಡಿಸಿದ್ದಾರೆ. ತೀರ್ಥಹಳ್ಳಿ -ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ (ಹುಲಿಕಲ್ ಘಾಟ್)ನ 42.10ರಿಂದ 42.20ರಲ್ಲಿನ ಹೇರ್‌ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮತ್ತೆ ಮಳೆ ಚುರುಕುಗೊಂಡಿರುವುದರಿಂದ […]

ಉಡುಪಿ:ಮಣಿಪಾಲದ ಪ್ರೈಮ್ ಲೊಕೇಶನ್‌ನಲ್ಲಿ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದೆ.

ಉಡುಪಿ:ಮಣಿಪಾಲದ ಪ್ರೈಮ್ ಲೊಕೇಶನ್‌ನಲ್ಲಿ 2BHK ಅಪಾರ್ಟ್‌ಮೆಂಟ್ ಮಾರಾಟಕ್ಕಿದೆ.ನೀವು ಹೂಡಿಕೆಗೆ ಯೋಚಿಸುತ್ತಿದ್ದೀರಾ? ಅಥವಾ ನೆಲೆಸಲು ಸ್ಥಳ ಹುಡುಕುತ್ತಿದ್ದೀರಾ? ಈ ಅಪಾರ್ಟ್‌ಮೆಂಟ್ ಇಬ್ಬರಿಗೂ ಸರಿಹೊಂದುತ್ತದೆ. ಈ ಅಪಾರ್ಟ್ಮೆಂಟ್ 1240 ಚದರ ಅಡಿ ಇದ್ದು, ಉತ್ತರಮುಖಿಯಲ್ಲಿದೆ. ಪ್ರತಿ ತಿಂಗಳು ₹25,000–₹30,000 ಆದಾಯದ ಸಾಧ್ಯತೆ ಇದೆ.24×7 ಭದ್ರತೆ ಸೌಲಭ್ಯವಿದ್ದು, ಬಿಲ್ಡಿಂಗ್‌ನಲ್ಲಿ ಈಜು ಹೊದಿಕೆ ವ್ಯವಸ್ಥೆ ಇದೆ. 📍 ಮುಖ್ಯ ರಸ್ತೆಗೆ ಕೇವಲ 50 ಮೀಟರ್ (ಡಿ.ಸಿ. ಕಚೇರಿ ರಸ್ತೆ)ದೂರದಲ್ಲಿದೆ. 📞ಆಸಕ್ತಿ ಇದ್ದವರು ಸಂಪರ್ಕಿಸಿ: 8095747077

ಮಣಿಪಾಲ-ಮಂಗಳೂರಿನ ಸುಪ್ರಸಿದ್ಧ ಪ್ರಿಂಟಿಂಗ್ & ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ – ಮಂಗಳೂರಿನ ಸುಪ್ರಸಿದ್ಧ ಪ್ರಿಂಟಿಂಗ್ & ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪ಮೆಕ್ಯಾನಿಕಲ್ ಇಂಜಿನಿಯರ್ – 4 Positions▪ಪ್ರೊಡಕ್ಷನ್ ಸೂಪ‌ರ್ವೈಸರ್ – 6 Positions▪ಲಾಜಿಸ್ಟಿಕ್ ಎಕ್ಸಿಕ್ಯೂಟಿವ್ – 2 Positions▪ಗ್ರಾಫಿಕ್ ಡಿಸೈನರ್ – 10 Positions▪ಕಸ್ಟಮರ್ ಸಪೋರ್ಟ್ 20 Positions▪ಸ್ಟೋರ್ & ಅಕೌಂಟ್ಸ್ ಎಕ್ಸಿಕ್ಯೂಟಿವ್ – 6 Positions▪QA & QC ಅಸಿಸ್ಟೆಂಟ್ – 4 Positions ಆಸಕ್ತರು ತಕ್ಷಣ ಸಂಪರ್ಕಿಸಿ:7019891796, 9606968198

ಕಾರ್ಕಳ: 4 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು; ಮೂವರು ಆರೋಪಿಗಳ ಬಂಧನ

ಉಡುಪಿ: ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಟ್ಟೆ ಗ್ರಾಮದ ದಿನೇಶ್ ಶೆಟ್ಟಿಗಾರ್ ಎಂಬವರ ತೋಟದಲ್ಲಿ ಬೆಳೆಸಿದ್ದ 4 ಲಕ್ಷ ಮೌಲ್ಯದ ಒಟ್ಟು 9 ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ‌. ಮೂಡುಬೆಳ್ಳೆಯ ಗಣೇಶ್ (44), ಎಣ್ಣೆಹೊಳೆಯ ಸಂತೋಷ(35) ಹಾಗೂ ಬಂಟ್ವಾಳ ತಾಲೂಕು ಬಾಳೆಪುಣಿಯ ಮೊಯ್ದೀನ್ ಯಾನೆ ಮೊಯಿದು ಕುಂಞ (60) ಬಂಧಿತ ಆರೋಪಿಗಳು. ಬಂಧಿತರಿಂದ ಕಳವು ಮಾಡಲಾದ ಶ್ರೀಗಂಧದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ರೋಟರಿ ಕ್ಲಬ್ ಕಾರ್ಕಳ ಪತ್ರಿಕಾ ಮಾಹಿತಿ ವರದಿಗಾರಿಕೆ ತರಬೇತಿ ಕಾರ್ಯಗಾರ

ಕಾರ್ಕಳ: ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕಾ ರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದರ ಜೊತೆಗೆ ಮಾಹಿತಿ ನೀಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಪತ್ರಿಕೆ ಯನ್ನು ಓದುವುದರಿಂದ ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಉಪಾಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕಾರ್ಕಳ ಕಾಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕಾರ್ಕಳ ನೇತೃತ್ವದಲ್ಲಿ ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಇಂಟ್ರಾಕ್ಟ್ ಕ್ಲಬ್ ನ […]