ಭಾರತೀಯ – ಅಮೆರಿಕನ್, ಕನ್ನಡಿಗ ಥಾನೇದಾರ್ ಸಂತಸ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆದೊಯ್ಯಲಿದ್ದಾರೆ ಥಾನೇದಾರ್

ವಾಷಿಂಗ್ಟನ್(ಅಮೆರಿಕ): ಜೂನ್ 22 ರಂದು ಅಮೆರಿಕಾದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ. ಶ್ರೀ ಥಾನೇದಾರ್ ಮಿಚಿಗನ್‌ನ 13 ನೇ ಕಾಂಗ್ರೆಸನಲ್ ಡಿಸ್ಟ್ರಿಕ್ಟ್ ಅನ್ನು ಮೊದಲ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಅಮೆರಿಕದಲ್ಲಿ ಕಾಂಗ್ರೆಸ್‌ನ ಐತಿಹಾಸಿಕ ಜಂಟಿ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ಶ್ರೀ ಥಾನೇದಾರ್ ಅವರು ಕರೆದೊಯ್ಯಲಿದ್ದಾರೆ. ಅವರ ಭಾಷಣಕ್ಕೆ ಬೆಂಗಾವಲಾಗ್ತಿರೋದು ದೊಡ್ಡ ಗೌರವ ಎಂದು ಅಮೆರಿಕನ್​ ಕನ್ನಡಿಗ ಸಂತಸ ಥಾನೇದಾರ್ […]

ಇದು OpenAI ವತಿಯಿಂದ ಯೋಜನೆ AI ಮಾಡೆಲ್​​ಗಳಿಗೂ ಬರಲಿದೆ ಆಯಪ್ ಸ್ಟೋರ್

ನವದೆಹಲಿ : ಮೈಕ್ರೋಸಾಫ್ಟ್ ಬೆಂಬಲಿತ OpenAI ಕೃತಕ ಬುದ್ಧಿಮತ್ತೆ (AI) ಸಾಫ್ಟ್‌ವೇರ್ ಮತ್ತು ಮಾದರಿಗಳಿಗಾಗಿ ವಿಶೇಷ ಆನ್‌ಲೈನ್ ಮಾರುಕಟ್ಟೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಕಂಪನಿ ಓಪನ್ ಎಐ, ಕೃತಕ ಬುದ್ಧಿಮತ್ತೆ ಸಾಫ್ಟವೇರ್​ಗಳಿಗಾಗಿಯೇ ಮೀಸಲಾದ ಆನ್ಲೈನ್ ಆಯಪ್ ಮಾರುಕಟ್ಟೆಯೊಂದನ್ನು ತಯಾರಿಸಲು ಯೋಜಿಸುತ್ತಿದೆ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ತಾವು ಕಸ್ಟಮೈಸ್ ಮಾಡುವ AI ಮಾಡೆಲ್​ಗಳನ್ನು ಇತರ ವ್ಯಾಪಾರಿ ಕಂಪನಿಗಳಿಗೆ ಮಾರಾಟ ಮಾಡಬಹುದಾದ AI ಆಯಪ್ ಸ್ಟೋರ್ ಒಂದನ್ನು ಆರಂಭಿಸಲು ಸ್ಯಾಮ್ ಆಲ್ಟಮ್ಯಾನ್ ಒಡೆತನದ ಕಂಪನಿ […]

ಕ್ರಮ ಕೈಗೊಳ್ಳಲು 3 ವಾರ ಕಾಲಾವಕಾಶ ನೀಡಿದ ಹೈಕೋರ್ಟ್ : ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷ, ಸದಸ್ಯರ ನೇಮಕ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರ ನೇಮಕ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹೈಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ.ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠಕ್ಕೆ […]

ಅಟ್ಲಾಂಟಿಕ್ ಸಾಗರದೊಳಗೆ ಕಿರು ಜಲಾಂತರ್ಗಾಮಿ ಸುಳಿವು ಪತ್ತೆ, ಬಿಲಿಯನೇರ್ ದಾವೂದ್​ಗಾಗಿ ಶೋಧ

ಟೈಟಾನಿಕ್ ಅವಶೇಷಗಳನ್ನು ನೋಡಲು ಹೋಗಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿರುವ ಟೈಟಾನ್​ ಎಂಬ ಕಿರು ಜಲಾಂತರ್ಗಾಮಿ ಹುಡುಕಾಟದಲ್ಲಿ ನಿರ್ಣಾಯಕ ಬೆಳವಣಿಗೆ ಕಂಡುಬಂದಿದೆ. ಬೋಸ್ಟನ್, ಅಮೆರಿಕ: ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾದ ಮಿನಿ ಜಲಾಂತರ್ಗಾಮಿ ಶೋಧ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಕೆನಡಾದ ಗಸ್ತು ವಿಮಾನ P-3 ನೀರೊಳಗಿನ ಶಬ್ದಗಳನ್ನು ಪತ್ತೆ ಮಾಡಿದೆ ಎಂದು ಅಮೆರಿಕನ್ ಕೋಸ್ಟ್ ಗಾರ್ಡ್ ಹೇಳಿದೆ. ಕೆನಡಾದ P-3 ಕಣ್ಗಾವಲು ವಿಮಾನವು ವೈಮಾನಿಕ ಚಟುವಟಿಕೆಗಳನ್ನು ನಡೆಸುತ್ತಿರುವಾಗ ನೀರೊಳಗಿನ ಶಬ್ದಗಳನ್ನು ಪತ್ತೆಹಚ್ಚಿದೆ ಎಂದು US ಕೋಸ್ಟ್ ಗಾರ್ಡ್ ಹೇಳಿದೆ. […]

ಯೋಗದಿಂದ ನೆಮ್ಮದಿ, ಆರೋಗ್ಯ ದೊರಕುತ್ತದೆ : ಡಾ.ವೀರೇಂದ್ರ ಹೆಗ್ಗಡೆ

ಶಿವಮೊಗ್ಗ: ವಿಶ್ವಕ್ಕೆ ಭಾರತ ಯೋಗವನ್ನು ಕೊಡುಗೆಯಾಗಿ ನೀಡಿದೆ. ಯೋಗದಿಂದ ನೆಮ್ಮದಿ, ಆರೋಗ್ಯ ದೊರಕುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ ಆಚಾರ್ಯ ಎಂದರೆ ಮೊದಲು ಅನುಭವಿಸಿ ನಂತರ ಪ್ರಚಾರ ಮಾಡುವವರು. ಪ್ರಾಚಾರ್ಯರು ಹೇಳುವುದಷ್ಟೆ ಎಂದರು. ಆರೋಗ್ಯವಂತರು, ದೀರ್ಘಾಯುಷಿಗಳಾಗಿ ಬಾಳಿರಿ. ನೀವು ನಿಮ್ಮ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಭಾರತ ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡುವ ಮೂಲಕ ಪ್ರಪಂಚಕ್ಕೆ ಶಾಂತಿ, ನೆಮ್ಮದಿ ನೀಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶಿವಮೊಗ್ಗದ ಹೊರ […]