ಉಡುಪಿ: ರಸ್ತೆಯಲ್ಲಿ ತೈಲ ಸೋರಿಕೆ- ಹಲವು ಬೈಕ್ ಸ್ಕಿಡ್

ಉಡುಪಿ: ವಾಹನವೊಂದರಿಂದ ತೈಲ ಸೊರಿಕೆಯಾದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ನಗರದ ಸಿಟಿ ಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.ಅಪರಿಚಿತ ವಾಹನವೊಂದರಿಂದ ತೈಲವು ರಸ್ತೆಗೆ ಸೋರಿಕೆಯಾಗಿದ್ದು, ಇದರ ಮೇಲೆ ಚಲಿಸಿದ ನಾಲ್ಕೈದು ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿವೆ. ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಅದರಂತೆ ಮಲ್ಪೆ ಅಗ್ನಿಶಾಮಕ ದಳದ ಜಲ ವಾಹನವು ಸ್ಥಳಕ್ಕೆ ಬಂದು ರಸ್ತೆಗೆ […]
ಉಡುಪಿ: ಬೈಕ್ ಗೆ ಕಾರು ಡಿಕ್ಕಿ; ಕಾಲೇಜು ವಿದ್ಯಾರ್ಥಿ ಮೃತ್ಯು

ಉಡುಪಿ: ಕಾರೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅ.7 ರ ಸೋಮವಾರ ರಾತ್ರಿ 10.30ರ ಸುಮಾರಿಗೆ ಉಡುಪಿ ಎಂಜಿಎಂ ಕಾಲೇಜು ಎದುರಿನ ಡೈವರ್ಶನ್ ಪಾಯಿಂಟ್ನಲ್ಲಿ ನಡೆದಿದೆ. ಮೃತರನ್ನು ಹಿರಿಯಡ್ಕ ನಿವಾಸಿ, ತೆಂಕನಿಡಿಯೂರು ಕಾಲೇಜಿನ ಪದವಿ ವಿದ್ಯಾರ್ಥಿ ವೀರಜ್(18) ಎಂದು ಗುರುತಿಸಲಾಗಿದೆ. ವೀರಜ್ ತನ್ನ ಬೈಕ್ ನಲ್ಲಿ ಉಡುಪಿ ಕಡೆಯಿಂದ ಎಂಜಿಎಂ ಕಾಲೇಜಿನ ಮುಂಭಾಗದ ಡೈವರ್ಶನ್ ನಲ್ಲಿ ತಿರುವು ಪಡೆದು ಮಣಿಪಾಲ ಕಡೆಗೆ ಹೋಗುತ್ತಿದ್ದರು. ಈ ವೇಳೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ […]
ಮಣಿಪಾಲ: ಅ.10 ರಂದು MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಕಾಲಿ ಮಾ ಆರ್ಟಿಸ್ಟಿಕ್ ಮೇಕಪ್” ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಅ.10 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12:30ವರೆಗೆ “ಕಾಳಿ ಮಾ ಆರ್ಟಿಸ್ಟಿಕ್ ಮೇಕಪ್” ಬಗ್ಗೆ ನೋಡಿ ಕಲಿಯುವ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ದೇವಿಯ ದಿಟ್ಟ, ಶಕ್ತಿಯುತ ನೋಟವನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯಬಹುದು. ಶುಲ್ಕಗಳು ಕೇವಲ ರೂ.199/-. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8123165068/8123163935📍ಒರೇನ್ ಇಂಟರ್ನ್ಯಾಶನಲ್, MSDC ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ
ಉಡುಪಿ ತ್ರಿಶಾ ಕ್ಲಾಸಸ್ : ಸಿಎ ಇಂಟರ್ಮೀಡಿಯಟ್ ತರಗತಿ ಆರಂಭ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 26ವರ್ಷಗಳಿಂದ ಸಿಎ, ಸಿಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಅಕ್ಟೋಬರ್ 13 ರಿಂದ ಸಿಎ ಇಂಟರ್ಮೀಡಿಯಟ್ ತರಗತಿಗಳು ಆರಂಭಗೊಳ್ಳಲಿದೆ. ತರಗತಿಯ ವೈಶಿಷ್ಟ್ಯತೆ ಗಳು: ◼ ನುರಿತ ಅಧ್ಯಾಪಕ ವೃಂದ ◼ ವಿದ್ಯಾರ್ಥಿಗಳಿಗೆ ಸ್ಟಡಿ ಮೆಟೀರಿಯಲ್ ಗಳೊಂದಿಗೆ ರಿವಿಷನ್ ಪುಸ್ತಕ ಲಭ್ಯ ◼ ಪರೀಕ್ಷಾ ಆಧಾರಿತ ರಿವಿಷನ್ ತರಗತಿಗಳು ಹಾಗೂ ಮಾಕ್ ಟೆಸ್ಟ್ ಸರಣಿ ◼ ಹಾಸ್ಟೆಲ್ ಸೌಲಭ್ಯ. ಅಖಿಲ ಭಾರತ […]
ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ಅ.1ರಿಂದ 15 ರವರೆಗೆ ಸ್ಮಾರ್ಟ್ ಫೋನ್ ಫೆಸ್ಟ್: ಗ್ರಾಹಕರಿಗೆ ಬಂಪರ್ ಬಹುಮಾನ ಗೆಲ್ಲುವ ಅವಕಾಶ

ಉಡುಪಿ: ನಗರದ ಪ್ರಸಿದ್ಧ ಬಲ್ಲಾಳ್ ಮೊಬೈಲ್ನಲ್ಲಿ ಗ್ರಾಹಕರಿಗಾಗಿ ಅ.1 ರಿಂದ 15 ರ ವರೆಗೆ ಸ್ಮಾರ್ಟ್ ಫೋನ್ ಫೆಸ್ಟ್ ನಡೆಯುತ್ತಿದೆ.ಈ ಸ್ಮಾರ್ಟ್ ಫೋನ್ ಫೆಸ್ಟ್ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಿ ಲಕ್ಕಿ ಕೂಪನ್ ಪಡೆಯಬಹುದಾಗಿದೆ. ಹಾಗೂ ಸ್ಮಾರ್ಟ್ ಟಿವಿ, ಏರ್ ಕಂಡೀಶನರ್, ಬ್ಲೂಟೂತ್ ಸ್ಪೀಕರ್ ಮಿಕ್ಸರ್ ಗ್ರೈಂಡರ್ ಸಹಿತ ಪ್ರತೀ ತಿಂಗಳು ಬಂಪರ್ ಬಹುಮಾನವಾಗಿ ಬೈಕ್ ಗೆಲ್ಲುವ ಸುವರ್ಣಾವಕಾಶ ಗ್ರಾಹಕರು ಪಡೆಯಬಹುದಾಗಿದೆ. ಜೊತೆಗೆ ಸ್ಕ್ರ್ಯಾಚ್ ಆಂಡ್ ವಿನ್ ಕೊಡುಗೆಯೂ ಇದ್ದು, ಈ ಬಂಪರ್ ಬಹುಮಾನದಲ್ಲಿ ಮೊದಲ ಬಹುಮಾನ ಹೀರೋ […]