ಮೇ.9 ರಿಂದ 14: ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ.

ಬ್ರಹ್ಮಾವರ: ತಾಲೂಕಿನ ಬ್ರಹ್ಮಾವರ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೇ.9 ರಿಂದ 14ರ ವರೆಗೆ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮಗಳು ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಮೇ.9 ಗುರುವಾರ ವಿಶ್ಲೇಶ್ವರ ಪ್ರಾರ್ಥನಾ, ಮುಹೂರ್ತ ಬಲಿ, ಅಂಕುರ ಸ್ಥಾಪನಾದಿಗಳು, ಮಧ್ಯಾಹ್ನ ಸಂತರ್ಪಣೆ ಮತ್ತು ರಾತ್ರಿ ಸಣ್ಣ ರಂಗಪೂಜೆ. ಮೇ.10 ಶುಕ್ರವಾರ ಧ್ವಜಾರೋಹಣ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿಬಲಿ, ಭೇರಿತಾಡನ, ಗಜವಾಹನೋತ್ಸವ, ರಾತ್ರಿ ಸಣ್ಣ ರಂಗಪೂಜೆ. ಮೇ.11 ಶನಿವಾರ ದೊಡ್ಡರಂಗಪೂಜೆ, ನಿತ್ಯಬಲಿ, ಸಂತರ್ಪಣೆ, ಸಾಯಂಕಾಲ ಸವಾರಿ ಬಲಿ, ಉತ್ಸವ ಬಲಿ, 2 […]
ಸಂತ್ರಸ್ತೆಯ ಅಪಹರಣ ಪ್ರಕರಣ: ಮಾಜಿ ಸಚಿವ ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ.

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲುಪಾಲಾಗಿದ್ದಾರೆ. ಕೆಆರ್ ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ರೇವಣ್ಣರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣರನ್ನು ಅಧಿಕಾರಿಗಳು ಎಸ್ಐಟಿ ಕಚೇರಿಯಿಂದ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಿದ್ದಾರೆ. ಕೆ.ಆರ್.ನಗರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಅವರನ್ನು 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಪ್ರಕಟಿಸಿದೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ “ಸಾವಿಷ್ಕಾರ” ದಲ್ಲಿ ಬಹುಮಾನ.

ಮೂಡಲ್ ಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ದಿನಾಂಕ 1 ಮತ್ತು 2 ಮೇ 2024 ರಂದು ನಡೆದ ರಾಜ್ಯಮಟ್ಟದ ಸಾಂಸ್ಕೃತಿಕ ಹಬ್ಬ “ಸಾವಿಷ್ಕರ್”ದಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅಭಿಷೇಕ್ ಕಿಣಿ, ಪ್ರಖ್ಯಾತ್ ಪಿ ಶೆಟ್ಟಿ ಮತ್ತು ಶಶಾಂಕ್ ಇವರು ಎಲೆಕ್ಟ್ರಾನಿಕ್ ಕ್ವಿಜ್ನಲ್ಲಿ ಪ್ರಥಮ ಸ್ಥಾನ, ಅಭಿಷೇಕ್ ಕಿಣಿ ಮತ್ತು ಆಶಿಶ್ ಪ್ರಸಾದ್ ಇವರು Conceptify ನಲ್ಲಿ ದ್ವಿತೀಯ ಸ್ಥಾನ, ರಾಮಚಂದ್ರ ಉಡುಪ ಮತ್ತು ಪ್ರಥಮ್ ಎಲ್ ಕಾಮತ್ ಕೋಡ್ ಕ್ರೇಜ್ನಲ್ಲಿ ದ್ವಿತೀಯ […]
ಮಣಿಪಾಲ MSDC ಯಲ್ಲಿ ಇಂಟರ್ ನೆಟ್ ತಂತ್ರ್ಯಜ್ಞಾನ ಕುರಿತು ಅತ್ಯುತ್ತಮ ಶಿಕ್ಷಣ.

ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ)ವಾಗಿದ್ದು ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ. Embedded Systems and loT: 🔹IoT Architecture and life cycle 🔹 Platforms for IoT 🔹 Real time […]
ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮೇ 08: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಲ್ಲಿ ಹೆಲಿಕಾಪ್ಟರ್-ಎಂ.ಆರ್.ಓ ವಿಭಾಗದ ಸ್ಕೇಲ್ ಡಿ-6 ಹುದ್ದೆ ಹಾಗೂ ದೇಶದ ವಿವಿಧ ಸ್ಥಳಗಳಲ್ಲಿ ಕೆಲಸ ನಿರ್ವಹಿಸಲು ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಪದವೀಧರರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೇ 1 2024 ರಂದು ಅಥವಾ ಅದಕ್ಕೂ ಮೊದಲು ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಅಗತ್ಯವಿರುವ ಡಿಪ್ಲೋಮಾ ಪದವಿ ಪಡೆದಿರುವ ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 11 ರ ಒಳಗೆ ವೆಬ್ಸೈಟ್ www.hal-india.co.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಹೆಚ್ಚಿನ […]