ಕಾರ್ಕಳ: ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರು ನ್ಯಾಯಾಂಗ ಬಂಧನಕ್ಕೆ.

ಕಾರ್ಕಳ: ಬಾಂಗ್ಲಾದೇಶದ ಇಬ್ಬರು ಅಕ್ರಮ ವಲಸಿಗರನ್ನು ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ಅ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಬಾಂಗ್ಲಾದ ರಾಜಶಾಹಿ ಜಿಲ್ಲೆಯ ಗೋದ್‌ಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಮ್ಮದ್ ಇಮಾಮ್ ಶೇಖ್ (21) ಹಾಗೂ ರಿಮುಲ್ ಇಸ್ಲಾಂ (20) ಎಂದು ಗುರುತಿಸಲಾಗಿದೆ. ಕೆಲದಿನಗಳ ಹಿಂದೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿಯ ಮೇರೆ ನಿನ್ನೆ […]

11 ನೇ ಸೀಸನ್ ಗೆ ಕಾಲಿಟ್ಟ ಪ್ರೊ ಕಬಡ್ಡಿ ಲೀಗ್ (PKL)ಪಂದ್ಯಾವಳಿ

ಯಶಸ್ವಿ 10 ಋತುಗಳನ್ನು ಕಂಡಿರುವ “ಪ್ರೊ ಕಬಡ್ಡಿ ಲೀಗ್‌'(ಪಿಕೆಎಲ್‌), ಇದೀಗ 11ನೇ ಋತುವಿಗೆ ಕಾಲಿಟ್ಟಿದೆ. ದೇಸಿ ಕ್ರೀಡೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡಲು 2014ರಲ್ಲಿ “ಐಪಿಎಲ್‌ ಮಾದರಿ’ಯಲ್ಲಿ ಆರಂಭವಾದ ಪಿಕೆಎಲ್‌ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದೆ. 11ನೇ ಸೀಸನ್‌ ಆರಂಭದ ಹಿನ್ನೆಲೆಯಲ್ಲಿ ಹಿಂದಿನ ಚಾಂಪಿಯನ್‌ಗಳು, ಈ ಬಾರಿ ಭಾಗಿಯಾಗುತ್ತಿರುವ ತಂಡಗಳ ಬಲಾಬಲ, ಪಂದ್ಯಾವಳಿ ನಡೆಯುವ ಸ್ಥಳಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ… ರೈಡರ್‌ಗಳನ್ನಷ್ಟೇ ನಂಬಿರುವ ಬೆಂಗಳೂರು ಬುಲ್ಸ್‌ಕಳೆದ ಸೀಸನ್‌ನಲ್ಲಿ ಡಿಫೆನ್ಸ್‌ ಇಲ್ಲದೇ ಪ್ಲೇಆಫ್ಗೇರಲು ವಿಫಲವಾದ ಬೆಂಗಳೂರು ಬುಲ್ಸ್‌, […]

ಉಡುಪಿ: ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ

ಉಡುಪಿ: ಮಹರ್ಷಿ ವಾಲ್ಮೀಕಿ ಸಂಘಟನೆ ಉಡುಪಿ ಜಿಲ್ಲೆಯ ವತಿಯಿಂದ ಜಯಂತ್ಯೋತ್ಸವವನ್ನು ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿತ್ತು. ಉದ್ಯಮಿ ವಿಶ್ವನಾಥ ಶೆಣೈ ಯವರು ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಕಲಾರಾಧಕ, ಕಲಾವಿದ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ಭಾರತ್ ಸ್ಕೌಟ್ ಜಿಲ್ಲಾ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ ಸಂಘಟನೆಯಲ್ಲಿ ಬಲವಿದೆ. ಒಟ್ಟಾಗಿ ಸೇರಿ ಕೆಲಸ ಮಾಡಿದಾಗ ಸರಕಾರದ ಮಟ್ಟಕ್ಕೂ ನಮ್ಮ ಬೇಡಿಕೆಯನ್ನು ತಲುಪಿಸಲು ಸಾಧ್ಯ ಎಂದರು. ಕನ್ನಡ […]

ಪಡುತೋನ್ಸೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಉಡುಪಿ: ಕೆಮ್ಮಣ್ಣು ಪಡುತೋನ್ಸೆಯ ಕುದುರು ನೆಕ್ಸ್ಟ್ ಹೊಳೆಯಲ್ಲಿ ವ್ಯಕ್ತಿಯ ಶವ. ಪತ್ತೆಯಾಗಿದೆ. ಮೃತವ್ಯಕ್ತಿಯನ್ನು ಬಾಲು ನಾಯ್ಕ್ ಎಂದು ಗುರುತಿಸಲಾಗಿದೆ‌. ಹೊಳೆಯಿಂದ ಶವ ಮೇಲೆತ್ತಲು ಅಲ್ವಿನ್, ಹರಿದಾಸ್, ನಿಖಿಲ್, ಸತ್ಯ ಅವರು ಸಹಕರಿಸಿದರು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಮಲ್ಪೆ ಠಾಣೆಯ ಎಎಸ್ಐ ವಿಶ್ವನಾಥ್, ನಾಗರಾಜ್ ಸ್ಥಳಕ್ಕೆ ಬಂದು ಮಹಜರು ಪ್ರಕ್ರಿಯೆ ನಡೆಸಿದರು.

ಉಡುಪಿ: ಅಕ್ರಮ ಪಟಾಕಿ ದಾಸ್ತಾನು ಕೇಂದ್ರಕ್ಕೆ ಪೊಲೀಸರ ದಾಳಿ; 40 ಕೆ.ಜಿ. ಪಟಾಕಿ ವಶ

ಉಡುಪಿಯ ಚರ್ಚ್‌ವೊಂದರ ವಿದ್ಯಾ ಜ್ಯೋತಿ ಬಿಲ್ಡಿಂಗ್ ನ ಪಟಾಕಿ ಮಾರಾಟದ ಅಂಗಡಿಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಂಭಾಗವಿರುವ ಕಾಬ್ರಾಲ್ ಗನ್ ಹೌಸ್ ನಲ್ಲಿ ಪರವಾನಗಿ ಇಲ್ಲದೆ ಸುಡುಮದ್ದುಗಳ ಅಕ್ರಮ ದಾಸ್ತಾನು ಬಗ್ಗೆ ದೊರೆತ ಮಾಹಿತಿಯಂತೆ ನಗರ ಠಾಣಾ ಉಪನಿರೀಕ್ಷಕ ಪುನೀತ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಆರೋಪಿ ಕಾಬ್ರಾಲ್ ಅವರು ಒಟ್ಟು 40 ಕೆ.ಜಿ. ತೂಕದ ಪಟಾಕಿ ಮತ್ತು ಸುಡುಮದ್ದುಗಳನ್ನು […]