ಉಡುಪಿ: ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ

ಉಡುಪಿ: ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ನ ನೀಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು. ಅದರ ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾದನವನ್ನು ನೀಡುವರೇ ಬಹಳ ಸಂತೋಷ ವಾಗಿದೆಯೆಂದು ಹೇಳಿ ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು. ಪ್ರಾರಂಭದಲ್ಲಿ ಸುಮೇಧಾ ಸಂಸ್ಥೆಯ ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು. ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ ಅವರು ದನ್ಯವಾದ ಸಮರ್ಪಿಸಿದರು. ನಂತರ ಡಾ. ಪಿ.ವಿ. ಭಂಡಾರಿ […]

ಉಡುಪಿ: ಇಂದ್ರಾಳಿ ದೇವಸ್ಥಾನದ ಹೊಸ ಕುಣಿತ ಭಜನ ತಂಡ ಉದ್ಘಾಟನೆ.

ಉಡುಪಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಾಮಾಕ್ಷಿ ಹಾಗೂ ಕಾಲ ಬೈರವ ಸನ್ನಿಧಾನ‌, ಇಂದ್ರಾಳಿ ಉಡುಪಿ ದೇವಸ್ಥಾನದ ಹೊಸ ಕುಣಿತ ಭಜನ ತಂಡದ ಉದ್ಘಾಟನೆಯು ಗುರು ಪೂರ್ಣಿಮೆಯ ದಿನ ಜು.21 ರಂದು ದೀಪ ಪ್ರಜ್ವಲಿಸುದರ ಮೂಲಕ ಚಾಲನೆ ನೀಡಲಾಯಿತು. ಗುರುಗಳಾಗಿ ರೋಹಿತ್ ಕಬಿಯಾಡಿ, ಧರ್ಮಸ್ಥಳ ಭಜನ ಪರಿಷತ್ತಿನ ಹಿರಿಯಡ್ಕ ವಲಯದಅಧ್ಯಕ್ಷರು ವಿಜಯ್ ಶೆಟ್ಟಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಭಜನ ಪರಿಷತ್ತಿನ ನಿರೀಕ್ಷಣಾ ಅಧಿಕಾರಿ ರಾಘವೇಂದ್ರ , ಹಿರಿಯಡ್ಕ ವಲಯದ ಕಾರ್ಯದರ್ಶಿ ಪೂರ್ಣಿಮಾ ಹಾಗೂ […]

ಅಂಕೋಲ ಶಿರೂರು ಗುಡ್ಡ ಕುಸಿತ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ, ಮೃತರ ಸಂಖ್ಯೆ 8ಕ್ಕೆ ಏರಿಕೆ.

ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದ್ದು, ಕಾರ್ಯಾಚರಣೆ ವೇಳೆ ಮತ್ತೊಂದು ಮಹಿಳೆಯ ಶವ ಪತ್ತೆಯಾಗಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ. ಮೃತ ಮಹಿಳೆ ಉಳವರೆ ಗ್ರಾಮದ ಸಣ್ಣಿ ಹನುಮಂತ ಗೌಡ (67). ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನು ಉಳಿದ ಮೂವರಿಗೆ ಶೋಧ ಕಾರ್ಯ […]

ಪೆರ್ಡೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ.

ಪೆರ್ಡೂರು: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ನಯನ(17) ಎಂಬುವವರು ಉಡುಪಿ ಜಿಲ್ಲೆಯ ಪೆರ್ಡೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದವರು. ಜುಲೈ 22 ರಂದು ಬೆಳಿಗ್ಗೆ ಯಾವುದೋ ತನ್ನ ವೈಯುಕ್ತಿಕ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಉಪ್ಪರಿಗೆ ಮಾಡಿನ ಜಂತಿಗೆ ಚೂಡಿದಾರ ಶಾಲನ್ನು ಬಿಗಿದು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಉಡುಪಿ: ಕುಂಜಿಬೆಟ್ಟು-ದೊಡ್ಡಣ್ಣಗುಡ್ಡೆ ಕಿರು ಸೇತುವೆ ಕುಸಿಯುವ ಭೀತಿ: ಬದಲಿ ರಸ್ತೆಯನ್ನು ಬಳಸುವಂತೆ ಮನವಿ.

ಉಡುಪಿ: ಎಂಜಿಎಂ ಮತ್ತು ದೊಡ್ಡಣ್ಣಗುಡ್ಡೆಯನ್ನು ಸಂಪರ್ಕಿಸುವ ಚಕ್ರತೀರ್ಥ ಸಗ್ರಿ ರಸ್ತೆಯ ನಡುಭಾಗದಲ್ಲಿರುವ ಸುಮಾರು 25 ವರ್ಷಗಳ ಹಿಂದಿನ ಕಿರು ಸೇತುವೆಯು ಕುಸಿಯುವ ಭೀತಿಯಲ್ಲಿದೆ. ವಿಪರೀತ ಮಳೆ ಅಬ್ಬರದಿಂದ ನೀರಿ ನ ಪ್ರಮಾಣ ಹೆಚ್ಚಾಗಿದ್ದು ಸೇತುವೆ ಕುಸಿಯುವ ಅಪಾಯದಲ್ಲಿದೆ ಸದ್ಯ ಈ ರಸ್ತೆ ಯನ್ನು ಬ್ಯಾರಿಕೆಡ್ ಇಟ್ಟು ಬಂದ್ ಮಾಡಲಾಗಿದೆ. ಸಾರ್ವಜನಿಕರು ಹಾಗೇನೆ ವಾಹನ ಚಾಲಕರು ಈ ರಸ್ತೆಯನ್ನು ಉಪಯೋಗಿಸದೆ ಬದಲಿ ರಸ್ತೆಯನ್ನು ಬಳಸಬೇಕಾಗಿ ನಗರ ಸಭಾ ಸದಸ್ಯರು ಹಾಗೂ ಸ್ಥಳೀಯರು ಸಾರ್ವಜನಿಕರು ಮನವಿ ಮಾಡಿ ಕೊಂಡಿದ್ದಾರೆ.