ಚೀನಾದಲ್ಲಿ ಉದ್ಘಾಟನೆಯಾಯ್ತು ಅತೀ ಎತ್ತರದ ಸೇತುವೆ!

ಬೀಜಿಂಗ್: ಚೀನಾದ ಬೈಪಾನ್ ನದಿಯ ಮೇಲೆ ನಿರ್ಮಿಸಲಾದ ವಿಶ್ವದ ಅತೀ ಎತ್ತರದ ಸೇತುವೆ ಹುವಜಿಯಾಂಗ್ ಗ್ರ್ಯಾಂಡ್ ಕ್ಯಾನ್ಯೋನ್ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ. ಬೈಪಾನ್ ನದಿಯ ಮೇಲೆ 625 ಮೀಟರ್ ಎತ್ತರದಲ್ಲಿ ನಿರ್ಮಾಣಗೊಂಡಿರುವ ಸೇತುವೆಯು ಕಣಿವೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 2 ನಿಮಿಷಕ್ಕೆ ಇಳಿಸಿದೆ. ಸುಮಾರು ಮೂರೂವರೆ ವರ್ಷಗಳಲ್ಲಿ ನಿರ್ಮಾಣಗೊಂಡಿರುವ ಸೇತುವೆಯು 2,890 ಮೀಟರ್ ಉದ್ದವಿದ್ದು ಇದರ ಮುಖ್ಯ ಕಮಾನು 1,420 ಮೀಟರ್ ಎತ್ತರವಿದೆ ಇದು ಸೆಪ್ಟೆಂಬರ್ 28ರಿಂದ ಸಂಚಾರಕ್ಕೆ […]

ಕಂದಾಯ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ: ಕಾಗದರಹಿತ ನೋಂದಣಿ ಶುರು ಮಾಡಿದ ಹರಿಯಾಣ

ಕುರುಕ್ಷೇತ್ರ: ರಾಜ್ಯದಲ್ಲಿ ಕಾಗದರಹಿತ ನೋಂದಣಿ ವ್ಯವಸ್ಥೆ ಜಾರಿಗೆ ತಂದಿದ್ದು, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತೊಡೆದುಹಾಕಲು ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಮೂಲಕ, ವಾಸ್ತವಿಕವಾಗಿ ದುಷ್ಕೃತ್ಯದ ಅವಕಾಶಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಅವರು ಹೇಳಿದರು. ನೋಂದಣಿ ಕಾರ್ಯವು ಈಗ ಸಂಪೂರ್ಣವಾಗಿ ಡಿಜಿಟಲ್ ಆಗಿರುತ್ತದೆ. ಇದು ಸರ್ಕಾರದ ‘ಕನಿಷ್ಠ ಸರ್ಕಾರ-ಗರಿಷ್ಠ ಆಡಳಿತ’ ನೀತಿಯ ಉದಾಹರಣೆಯಾಗಿದೆ ಎಂದಿದ್ದಾರೆ. ಕಾಗದದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸಲು ಈ ಉಪಕ್ರಮವು […]

ಬೆಂಕಿ ಅವಘಡ: ಬಾಲನಟ ವೀರ್ ಶರ್ಮಾ ಹಾಗೂ ಸಹೋದರ ಮೃತ್ಯು.

ಜೈಪುರ: ಬೆಂಕಿ ಅವಘಡ ಸಂಭವಿಸಿ ಖ್ಯಾತ ಬಾಲನಟ, ಅವರ ಸಹೋದರ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.ಸೋನಿ ಸಬ್‌ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದ್ದ ಶ್ರೀಮದ್ ರಾಮಾಯಣದಲ್ಲಿ ಪುಷ್ಕಲ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬಾಲನಟ ವೀರ್‌ ಶರ್ಮಾ (10) ಮತ್ತು ಸಹೋದರ ಶೋರಿಯಾ ಶರ್ಮಾ (16) ಮೃತಪಟ್ಟಿದ್ದಾರೆ. ಬಹು ಮಹಡಿಯ ಕಟ್ಟಡದಲ್ಲಿ ಭಾನುವಾರ ಬೆಳಗಿನ ಜಾವ 2 ಗಂಟೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ […]

ಮಹಾರಾಷ್ಟ್ರ: 7 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಶಾಲಾ ಮುಖ್ಯೋಪಾಧ್ಯಾಯ ಬಂಧನ.

7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​ ನಗರದಲ್ಲಿ ನಡೆದಿದೆ.ಒಂದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಖಾಸಗಿ ಭಾಗಗಳನ್ನು ಮುಖ್ಯೋಪಾಧ್ಯಾಯ ಅನುಚಿತವಾಗಿ ಮುಟ್ಟಿರುವ ಆರೋಪ ಕೇಳಿಬಂದಿದೆ. ಈ ವೇಳೆ ಆತನನ್ನು ಮುನಾಡ್​ ಪೊಲೀಸರು ಬಂಧಿಸಿದ್ದು, ಅಕ್ಟೋಬರ್ 1 ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿ ಮುಖ್ಯೋಪಾಧ್ಯಾನ್ನು ಬಂಧಿಸಿ, ಎಫ್ಐಆರ್​ ದಾಖಲಿಸಿದ್ದಾರೆ. ಹಾಗೆಯೇ ಪ್ರಕರಣದ ಕುರಿತು ಹೆಚ್ಚಿನ […]

ಬಿಸಿ ಹಾಲಿನ ಪಾತ್ರೆಗೆ ಬಿದ್ದ ಮಗು ಸಾವು: ಶಾಲೆಯಲ್ಲಿ ನಡೆದ ಭೀಕರ ಘಟನೆ

ಅನಂತಪುರಂ: ಶಾಲೆಯ ಅಡುಗೆ ಮನೆಯಲ್ಲಿ ಇರಿಸಲಾಗಿದ್ದ ಕುದಿಯುತ್ತಿದ್ದ ಹಾಲಿನ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದು ಒಂದೂವರೆ ವರ್ಷದ ಬಾಲಕಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕರಾಯಸಮುದ್ರಂ ಗ್ರಾಮದ ಅಂಬೇಡ್ಕರ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮೃತ ಮಗು 17 ತಿಂಗಳ ಪುಟ್ಟ ಮಗು ಅಕ್ಷಿತಾ. ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮೂಲಗಳ ಪ್ರಕಾರ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ತನ್ನ ತಾಯಿಯೊಂದಿಗೆ ಮಗು ಇತ್ತು. ಆದರೆ ತಾಯಿಯ […]