ಟ್ರೇಲರ್ ಅನಾವರಣಗೊಳಿಸಲಿದ್ದಾರೆ ದರ್ಶನ್ – ಬಿ.ಸಿ ಪಾಟೀಲ್ ‘ಗರಡಿ’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್
‘ಗರಡಿ’….. ಈ ಹೆಸರು ಕೇಳುತ್ತಿದ್ದಂತೆ ವರನಟ ಡಾ. ರಾಜ್ಕುಮಾರ್ ಅಭಿನಯದ ಮಯೂರ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ ನಾಗರಹಾವು ಸಿನಿಮಾಗಳು ನೆನಪಾಗುತ್ತವೆ. ಈ ಎರಡೂ ಚಿತ್ರಗಳು ಗರಡಿ ಮನೆಗಳಲ್ಲಿ ಕಸರತ್ತು ಮಾಡುವ ಕುಸ್ತಿ ಪಟುಗಳು / ಪೈಲ್ವಾನ್ಗಳ ಕಥೆಯನ್ನು ಒಳಗೊಂಡಿತ್ತು. ಇದೀಗ, ಗರಡಿ ಸಿನಿಮಾ ಮೂಲಕ ನಿರ್ದೇಶಕ ಯೋಗರಾಜ್ ಭಟ್ ಅವರು ನಮ್ಮ ದೇಸಿ ಕ್ರೀಡೆ ಕುಸ್ತಿ ಬಗ್ಗೆ ಹೇಳೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಹಾಡುಗಳಿಂದಲೇ ಕುತೂಹಲ ಹೆಚ್ಚಿಸಿರುವ ಗರಡಿ ಚಿತ್ರಕ್ಕೀಗ ಸ್ಯಾಂಡಲ್ವುಡ್ನ ಡಿ ಬಾಸ್ ದರ್ಶನ್ […]
ಕಮಲ್ ಹಾಸನ್ ಅಭಿಮಾನಿಗಳಲ್ಲಿ ಕುತೂಹಲ : ನಾಳೆ ಹೊರಬೀಳಲಿದೆ ‘ಇಂಡಿಯನ್ 2’ ಅಪ್ಡೇಟ್ಸ್
ಎಸ್ ಶಂಕರ್ ನಿರ್ದೇಶನದ ಮುಂಬರುವ ತಮಿಳು ಸಿನಿಮಾ ‘ಇಂಡಿಯನ್ 2’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಅಪ್ಡೇಟ್ ಹೊರಬೀಳಲಿದ್ದು, ಕಮಲ್ ಹಾಸನ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಬಹುನಿರೀಕ್ಷಿತ ‘ಇಂಡಿಯನ್ 2’ ಸಿನಿಮಾದ ಮಹತ್ವದ ಅಪ್ಡೇಟ್ಸ್ ನಾಳೆ ಹೊರಬೀಳಲಿದೆ. ಇಂದು ಲೈಕಾ ಪ್ರೊಡಕ್ಷನ್ಸ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದೆ. ಜೊತೆಗೆ “ರಿಸೀವ್ಡ್ ಕಾಪಿ ಆಯಂಡ್ ಪ್ರೊಸೆಸಿಂಗ್, ಭಾನುವಾರ ಬೆಳಗ್ಗೆ 11 ಗಂಟೆಗೆ ಅಪ್ಡೇಟ್ಸ್ ಹೊರಬೀಳಲಿದ್ದು, ಸಂಪರ್ಕದಲ್ಲಿರಿ” ಎಂದು ಬರೆದುಕೊಂಡಿದ್ದಾರೆ. ಈ […]
ಅಭಿಮಾನಿಗಳಲ್ಲಿ ಕಾತರ : ಮೂರು ದಶಕದ ಬಳಿಕ ಅಮಿತಾಬ್ ಬಚ್ಚನ್ ಜೊತೆಗೆ ರಜಿನಿಕಾಂತ್ ಸಿನಿಮಾ
ಬೆಂಗಳೂರು: ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ 33 ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.’ತಲೈವರ್ 170′ ಸಿನಿಮಾದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು. ಈ ಕುರಿತು ರಜಿನಿಕಾಂತ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್ ಬಚ್ಚನ್ ಜೊತೆಗಿರುವ ಫೋಟೋ ಹಂಚಿಕೊಂಡು, ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್ ಬಚ್ಚನ್ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್ 170’ರಲ್ಲಿ […]
ಹಿರಿಯ ನಟ ದಲೀಪ್ ತಾಹಿಲ್ಗೆ ಜೈಲುಶಿಕ್ಷೆ : ಹಿಟ್ ಆಯಂಡ್ ರನ್ ಕೇಸ್
2018ರಲ್ಲಿ ಹಿರಿಯ ನಟ ದಲೀಪ್ ತಾಹಿಲ್ (Dalip Tahil) ಅವರು ಹಿಟ್ ಆಯಂಡ್ ರನ್ ಕೇಸ್ನಲ್ಲಿ ಸಿಲುಕಿಕೊಂಡಿದ್ದರು.2018ರ ಹಿಟ್ ಆಯಂಡ್ ರನ್ ಕೇಸ್ಗೆ ಸಂಬಂಧಿಸಿದಂತೆ ಹಿರಿಯ ನಟ ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದ ಆರೋಪ ನಟನ ಮೇಲಿತ್ತು. 2018ರಿಂದ ನಟ ಕಾನೂನು ಹೋರಾಟ ನಡೆಸುತ್ತಿದ್ದರು. ಸುದೀರ್ಘ ಕಾನೂನು ಪ್ರಕ್ರಿಯೆ ಬಳಿಕ ಅಂತಿಮವಾಗಿ ತೀರ್ಪು ಬಂದಿದ್ದು, ದಲೀಪ್ ತಾಹಿಲ್ ಅವರಿಗೆ ಎರಡು ತಿಂಗಳು […]
ಮೊದಲ ದಿನದ ಕಲೆಕ್ಷನ್ : ಬಾಲಯ್ಯ ನಟನೆಯ ‘ಭಗವಂತ ಕೇಸರಿ’ಗೆ ಭರ್ಜರಿ ಗೆಲುವು
ತೆಲುಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯ ‘ಭಗವಂತ ಕೇಸರಿ’ ಸಿನಿಮಾ ಗುರುವಾರ (ಅ.19) ತೆರೆ ಕಂಡಿದೆ. ಅನಿಲ್ ರವಿಪುಡಿ ಆಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಬ್ಯೂಟಿ ಕಾಜಲ್ ಅಗರ್ವಾಲ್, ಗ್ಲ್ಯಾಮರ್ ಕ್ವೀನ್ ಶ್ರೀಲೀಲಾ ಜತೆಗೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕಾಸ್ಟ್, ಟೈಟಲ್, ಟೀಸರ್, ಟ್ರೇಲರ್, ಪೋಸ್ಟರ್ ಸಲುವಾಗಿ ಸದ್ದು ಮಾಡಿತ್ತು. ಇದೀಗ ರಿಲೀಸ್ ಆದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಚಿತ್ರವು ವಿಶ್ವದಾದ್ಯಂತ […]