ನಟ ಫಹಾದ್ ಫಾಸಿಲ್ ಜನ್ಮದಿನದ ಹಿನ್ನೆಲೆ ‘ಪುಷ್ಪ 2’ ಖಳನಾಯಕನ ಫಸ್ಟ್ ಲುಕ್ ಔಟ್

‘ಪುಷ್ಪ 2: ದಿ ರೂಲ್’ ಭಾರತೀಯ ಚಿತ್ರರಂಗದ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಮಾಲಿವುಡ್ ನಟ ಫಹಾದ್ ಫಾಸಿಲ್ ಅವರ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದೆ. 2021ರಲ್ಲಿ ತೆರೆ ಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಪುಷ್ಪ: ದಿ ರೈಸ್ನ ಮುಂದುವರೆದ ಭಾಗ ಇದಾಗಿದೆ.ನಟ ಫಹಾದ್ ಫಾಸಿಲ್ ಜನ್ಮದಿನದ ಹಿನ್ನೆಲೆ ಪುಷ್ಪ 2: ದಿ ರೂಲ್ ಚಿತ್ರದ ಫಸ್ಟ್ […]
ಹಾಲಿವುಡ್ ನಿರ್ದೇಶಕ , ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಫ್ರೈಡ್ಕಿನ್ ವಿಧಿವಶ

ವಿಲಿಯಂ ಫ್ರೈಡ್ಕಿನ್ ನಿರ್ದೇಶನದ ‘ದಿ ಕೇನ್ ಮ್ಯೂಟಿನಿ ಕೋರ್ಟ್ ಮಾರ್ಷಲ್’ ಚಿತ್ರದ ಪ್ರಥಮ ಪ್ರದರ್ಶನವನ್ನು ಆಯೋಜಿಸಲು ವೆನಿಸ್ ಚಲನಚಿತ್ರೋದ್ಯಮ ನಿರ್ಧರಿಸಿದೆ. ಈ ಚಿತ್ರದಲ್ಲಿ ಕೀಫರ್ ಸದರ್ಲ್ಯಾಂಡ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದು ಫ್ರೈಡ್ಕಿನ್ ಅವರ ಕೊನೆಯ ಚಿತ್ರವಾಗಿದೆ. ವಿಲಿಯಂ ಫ್ರೈಡ್ಕಿನ್ ಅವರ ಪತ್ನಿ ಶೆರ್ರಿ ಲ್ಯಾನ್ಸಿಂಗ್ ಅವರ ಆಪ್ತ ಸ್ನೇಹಿತ, ಚಾಪ್ಮನ್ ವಿಶ್ಚವಿದ್ಯಾಲಯದ ಡೀನ್ ಸ್ಟೀಫನ್ ಗ್ಯಾಲೋವೆ ನಟನ ನಿಧನವನ್ನು ಧೃಢಪಡಿಸಿದ್ದಾರೆ. ಹಾಲಿವುಡ್ ನಿರ್ದೇಶಕ ವಿಲಿಯಂ ಫ್ರೈಡ್ಕಿನ್ ಸೋಮವಾರ ಲಾಸ್ ಏಂಜಲೀಸ್ನಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. […]
ಪ್ರೇಕ್ಷಕರಿಗೆ ಬಿಗ್ ಆಫರ್ ನೀಡಿದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡ , ಬುಕ್ ಮೈ ಶೋನಲ್ಲಿ 2 ಟಿಕೆಟ್ ತಗೊಂಡ್ರೆ 1 ಫ್ರೀ

ಥಿಯೇಟರ್ ಅಂಗಳದಲ್ಲಿ ತುಂಗಾ ಹಾಸ್ಟೆಲ್ ಬಾಯ್ಸ್ ಓಟ ಮುಂದುವರೆದಿದೆ. ಮೂರನೇ ವಾರವೂ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ವಿಭಿನ್ನ ಬಗೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿ ಗೆದ್ದಿರುವ ಚಿತ್ರತಂಡಕ್ಕೆ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ವೀರೇಶ್ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅನುಶ್ರೀ ಟಿಕೆಟ್ ವಿತರಿಸಿದರು. ಬಳಿಕ ಅಭಿಮಾನಿಯಾಗಿ ಈ ಸಿನಿಮಾದ ಸಕ್ಸಸ್ ಸೆಲೆಬ್ರೇಟ್ ಮಾಡುವುದಾಗಿ ಹೇಳಿದರು. ಯುವ ಪ್ರತಿಭೆಗಳ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬುಕ್ ಮೈ […]
ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ರಜನಿಕಾಂತ್ ಜೈಲರ್ ಸಿನಿಮಾ ನೋಡಲು ರಜೆ

ಭಾರತ ಮಾತ್ರವಲ್ಲ, ವಿಶ್ವದ ನಾನಾ ಕಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಯಾರೆಂಬ ಪ್ರಶ್ನೆಗೆ ಬಹುತೇಕ ಸಿನಿರಸಿಕರ ಬಾಯಲ್ಲಿ ಮೊದಲು ಬರುವ ಉತ್ತರವೇ ರಜನಿಕಾಂತ್. ಹೀಗಿರುವಾಗ ಅವರ ಹೊಸ ಸಿನಿಮಾಗಳ ಬಗ್ಗೆ ಫ್ಯಾನ್ಸ್ ಕ್ರೇಜ್ ಹೇಗಿರಬಹುದು ಎಂಬುದನ್ನು ನೀವೇ ಒಮ್ಮೆ ಊಹಿಸಿ. ತಮ್ಮ ಮೆಚ್ಚಿನ ನಟನ ಹೊಚ್ಚ ಹೊಸ ಸಿನಿಮಾ ವೀಕ್ಷಿಸಲು ಇದೀಗ ಕಟ್ಟಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.ರಜನಿಕಾಂತ್. ಈ ಹೆಸರು ಕೇಳುತ್ತಿದ್ದಂತೆ ವಿಶಿಷ್ಟ ಮ್ಯಾನರಿಸಂ ಹೊಂದಿರುವ ವ್ಯಕ್ತಿಯೊಬ್ಬರು ಥಟ್ಟನೆ ನೆನಪಾಗುತ್ತಾರೆ.ಜೈಲರ್ ಸಿನಿಮಾ ವೀಕ್ಷಿಸಲು ಚೆನ್ನೈ, ಮಧುರೈ […]
ಸ್ಪಂದನಾ ವಿಜಯ್ ಪಾರ್ಥಿವ ಶರೀರ ಇಂದು ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ

ಚಂದನವನದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಮಂಗಳವಾರ (ಇಂದು) ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಬರಲಿದೆ. ಅದಕ್ಕಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಈಗಾಗಲೇ ಬ್ಯಾಂಕಾಕ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಿಪೋರ್ಟ್ ಬಂದ ತಕ್ಷಣವೇ ಮಾಧ್ಯಮಕ್ಕೆ ಕೊಡುತ್ತೇವೆ ಎಂದು ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ. ಸ್ಪಂದನಾ ಚಿಕ್ಕಪ್ಪ ಹಾಗೂ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾಹಿತಿ : […]