ಕಂಬಳ ಕೋಣಗಳೇ ಇಲ್ಲಿ ರಿಯಲ್ ಹೀರೋಗಳು! “ಕರಾವಳಿ” ಸಿನಿಮಾದ ಟೀಸರ್ ನೋಡಿ ಖುಷಿಯಿಂದ ದಂಗಾದ್ರು ಪ್ರೇಕ್ಷಕರು ! ಅಂತದ್ದೇನಿದೆ ಟೀಸರ್ ನಲ್ಲಿ?

ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು. ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ. ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ […]
ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ “ಮಹಾವತಾರ ನರಸಿಂಹ” 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಅನಿಮೇಷನ್ ಸಿನಿಮಾ !
ಕನ್ನಡದ ಸು ಫ್ರಂ ಸೋ ಥಿಯೇಟರ್ ಗಳಲ್ಲಿ ಅದ್ಬುತ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇನ್ನೊಂದು ಸಿನಿಮಾ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಹೌದು ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಡಿಮೆ ಬಜೆಟ್ನಲ್ಲಿ ಸಿದ್ಧವಾಗಿದೆ. ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರನ್ನು ಅರ್ಪಿಸಿದೆ. […]
ಅಬ್ಬರಿಸಿದ “ಕೂಲಿ” ಟ್ರೈಲರ್: ರಜನಿಕಾಂತ್ ಜೊತೆಗೆ ಉಪೇಂದ್ರ ಕೂಡ ನಟಿಸಿರೋ “ಕೂಲಿ” ಹೆಚ್ಚಿಸಿತು ಸಿನಿ ಜ್ವರ!

ರಜನಿಕಾಂತ್ ನಟನೆಯ “ಕೂಲಿ” ಟ್ರೈಲರ್ ಎಲ್ಲೆಡೆ ಅಬ್ಬರಿಸುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಕೂಲಿ”ಚಿತ್ರದ ಟ್ರೈಲರ್ ಗೆ ಎಲ್ಲಡೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. “ಕೂಲಿ” ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರವಿದು. “ಕೂಲಿ” ನಾಯಕ ನಟನಾಗಿ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಈ ವರ್ಷದಲ್ಲಿ ದಾಖಲೆ ಬರೆಯುವ ಚಿತ್ರವೆಂದು ಹೇಳಲಾಗ್ತಿದೆ. ಕನ್ನಡಕ್ಕೂ ಈ ಚಿತ್ರಕ್ಕೆ ಮಹತ್ವವಿದೆ ಯಾಕೆಂದರೆ ರಜನಿಕಾಂತ್ ಜೊತೆಗೆ, ಕೂಲಿ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಅಲ್ಲದೇ ನಾಗಾರ್ಜುನ, ಸೌಬಿನ್ […]
ಬರ್ತಿದೆಯಂತೆ “ಧರ್ಮಸ್ಥಳ ಫೈಲ್ಸ್” ಸಿನಿಮಾ: ರಿಜಿಸ್ಟರ್ ಆಯ್ತು ಟೈಟಲ್, ಚಿತ್ರರಂಗದಲ್ಲೂ ಸದ್ದು ಮಾಡುತ್ತ ಧರ್ಮಸ್ಥಳದ ಪ್ರಕರಣ!

ಎಲ್ಲರ ಕಣ್ಣು ಈಗ ಧರ್ಮಸ್ಥಳದತ್ತ ನೆಟ್ಟಿದೆ. ನಿನ್ನೆಯಷ್ಟೇ ಧರ್ಮಸ್ಥಳದ 6 ನೇ ಗುಂಡಿಯಲ್ಲಿ ಮೂಳೆಗಳು ಸಿಕ್ಕಿವೆ. ಎಸ್ ಐಟಿ ಮತ್ತು ಅನಾಮಿಕ ವ್ಯಕ್ತಿ ಇನ್ನಷ್ಟು ಶೋಧನೆಗಿಳಿದಿದ್ದಾರೆ. ಈ ಬೆನ್ನಲ್ಲೇ ಜನರು ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸೋದು ಜಾಸ್ತಿಯಾಗಿದೆ. ಎಲ್ಲರ ಬಾಯಲ್ಲೂ ಮಣ್ಣಿನಲ್ಲಿ ಹೂತುಹೋದ ಆ ಮೂಳೆಗಳು ಮತ್ತು ಇನ್ನೂ ಸಿಗಬಹುದಾದ ಅಸ್ಥಿಪಂಜರದತ್ತ ನೆಟ್ಟಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕರ್ನಾಟಕ ಸಿನಿಮಾ ವಾಣಿಜ್ಯ ಮಂಡಳಿಯಲ್ಲಿ ಧರ್ಮಸ್ಥಳ ಫೈಲ್ಸ್ ಎನ್ನುವ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದ್ದು ಚಿತ್ರರಂಗದಲ್ಲೂ ಸದ್ದು […]
ರಮ್ಯಾ ಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್ ವಿಚಾರ: ರಮ್ಯಾ ಬೆಂಬಲಕ್ಕೆ ನಿಂತ ಶಿವಣ್ಣ

ತನ್ನನ್ನು ಅಶ್ಲೀಲ ಕಮೆಂಟ್ ಗಳ ಮೂಲಕ ನಿಂದಿಸಿರೋ ದರ್ಶನ್ ಅಭಿಮಾನಿಗಳಿಂದ ತನ್ನ ವ್ಯಕ್ತಿತ್ವಕ್ಕೆ ನೋವಾಗಿದೆ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ರಮ್ಯಾ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಕುರಿತು ಇದೀಗ ದೊಡ್ಡ ಮಟ್ಟದ ಚರ್ಚೆ ಟೀಕೆಗಳು ದರ್ಶನ್ ಅಭಿಮಾನಿಗಳ ವಿರುದ್ದವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಕೂಡಾ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ- ದರ್ಶನ್ ಫ್ಯಾನ್ಸ್ ಕಮೆಂಟ್ ಜಟಾಪಟಿಯಲ್ಲಿ ರಮ್ಯಾ ಪರ ಶಿವರಾಜ್ ಕುಮಾರ್ ದಂಪತಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ರಮ್ಯಾ ವಿರುದ್ದ ಬಳಸಿರುವ […]