‘ಆರಾಮ್​ ಅರವಿಂದ್​ ಸ್ವಾಮಿ’ ಚಿತ್ರ : ಮುಂದಿನ ವರ್ಷ ತೆರೆ

ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಿಲನಾ ನಾಗರಾಜ್ ಹಾಗೂ ಹೃತಿಕ​ ಶ್ರೀನಿವಾಸ್ ನಾಯಕಿಯರಾಗಿ ನಟಿಸಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿಯಾಗಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರದ ಬಗ್ಗೆ ಸಿನಿಮಾತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದೆ.ಕನ್ನಡ ಚಿತ್ರರಂಗದಲ್ಲಿ ಫಸ್ಟ್ ಲುಕ್ ಹಾಗೂ ಪ್ರಮೋಷನಲ್ ವಿಡಿಯೋ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ‘ಆರಾಮ್ ಅರವಿಂದ್ ಸ್ವಾಮಿ’.ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಕಾಂಬೋದಲ್ಲಿ ಮೂಡಿಬರುತ್ತಿರುವ ‘ಆರಾಮ್ ಅರವಿಂದ್ […]

ರಾಜ್​ ಕುಟುಂಬದಿಂದ ‘ಪರಮಾತ್ಮ’ನ ಸ್ಮಾರಕ ನಿರ್ಮಾಣ : ಅಪ್ಪು ನಮ್ಮನ್ನಗಲಿ 2 ವರ್ಷ

ಕನ್ನಡ ಚಿತ್ರರಂಗದ ದೊಡ್ಮನೆಯ ರಾಜಕುಮಾರ, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿ ನಾಳೆಗೆ (ಅ.29) ಎರಡು ವರ್ಷ. ನಾಳೆ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ 2ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆ ಕಂಠೀರ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕ ಸಿಂಗಾರಗೊಳ್ಳುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ದೊಡ್ಮನೆ ಕುಟುಂಬ ಡಾ.ರಾಜ್​ಕುಮಾರ್​, ಪಾರ್ವತಮ್ಮ ರಾಜ್​ಕುಮಾರ್​ ಸ್ಮಾರಕದ ಬಳಿಯೇ ಪುನೀತ್​ ರಾಜ್​ಕುಮಾರ್​ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಬಿಳಿ ಮಾರ್ಬಲ್ಸ್​ನಲ್ಲಿ ಅಪ್ಪು ಸಮಾಧಿಯನ್ನು ಕಟ್ಟಲಾಗಿದ್ದು, ಅದರ ಮೇಲೆ ‘ರಾಜಕುಮಾರ’ನ ಫೋಟೋ ಕೂಡ ಇದೆ. ಸ್ಮಾರಕದ ಸುತ್ತಲೂ ಬಿಳಿ ಬಣ್ಣದ […]

ಟ್ರೇಲರ್​ ಅನಾವರಣಗೊಳಿಸಲಿದ್ದಾರೆ ದರ್ಶನ್ – ಬಿ.‌ಸಿ ಪಾಟೀಲ್ ‘ಗರಡಿ’ ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್​ ಸಾಥ್

‘ಗರಡಿ’….. ಈ ಹೆಸರು ಕೇಳುತ್ತಿದ್ದಂತೆ ವರನಟ ಡಾ. ರಾಜ್​​ಕುಮಾರ್ ಅಭಿನಯದ ಮಯೂರ ಹಾಗೂ ಸಾಹಸಸಿಂಹ ಡಾ. ವಿಷ್ಣುವರ್ಧನ್ ನಟನೆಯ ನಾಗರಹಾವು ಸಿನಿಮಾಗಳು ನೆನಪಾಗುತ್ತವೆ. ಈ ಎರಡೂ ಚಿತ್ರಗಳು ಗರಡಿ ಮನೆಗಳಲ್ಲಿ ಕಸರತ್ತು ಮಾಡುವ ಕುಸ್ತಿ ಪಟುಗಳು / ಪೈಲ್ವಾನ್​ಗಳ ಕಥೆಯನ್ನು ಒಳಗೊಂಡಿತ್ತು‌. ಇದೀಗ, ಗರಡಿ ಸಿನಿಮಾ ಮೂಲಕ ನಿರ್ದೇಶಕ ಯೋಗರಾಜ್ ಭಟ್ ಅವರು ನಮ್ಮ ದೇಸಿ ಕ್ರೀಡೆ ಕುಸ್ತಿ ಬಗ್ಗೆ ಹೇಳೋದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಹಾಡುಗಳಿಂದಲೇ ಕುತೂಹಲ ಹೆಚ್ಚಿಸಿರುವ ಗರಡಿ ಚಿತ್ರಕ್ಕೀಗ ಸ್ಯಾಂಡಲ್​ವುಡ್​ನ ಡಿ ಬಾಸ್ ದರ್ಶನ್ […]

ಕಮಲ್​ ಹಾಸನ್​​ ಅಭಿಮಾನಿಗಳಲ್ಲಿ ಕುತೂಹಲ : ನಾಳೆ ಹೊರಬೀಳಲಿದೆ ‘ಇಂಡಿಯನ್ 2’ ಅಪ್​ಡೇಟ್ಸ್

ಎಸ್ ಶಂಕರ್ ನಿರ್ದೇಶನದ ಮುಂಬರುವ ತಮಿಳು ಸಿನಿಮಾ ‘ಇಂಡಿಯನ್ 2’ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ನಾಳೆ ಈ ಚಿತ್ರದ ಅಪ್​​ಡೇಟ್​​ ಹೊರಬೀಳಲಿದ್ದು, ಕಮಲ್​ ಹಾಸನ್​ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.ಬಹುನಿರೀಕ್ಷಿತ ‘ಇಂಡಿಯನ್ 2’ ಸಿನಿಮಾದ ಮಹತ್ವದ ಅಪ್​ಡೇಟ್ಸ್ ನಾಳೆ ಹೊರಬೀಳಲಿದೆ. ಇಂದು ಲೈಕಾ ಪ್ರೊಡಕ್ಷನ್ಸ್ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದೆ. ಜೊತೆಗೆ “ರಿಸೀವ್ಡ್ ಕಾಪಿ ಆಯಂಡ್​ ಪ್ರೊಸೆಸಿಂಗ್, ಭಾನುವಾರ ಬೆಳಗ್ಗೆ 11 ಗಂಟೆಗೆ ಅಪ್​ಡೇಟ್ಸ್ ಹೊರಬೀಳಲಿದ್ದು, ಸಂಪರ್ಕದಲ್ಲಿರಿ” ಎಂದು ಬರೆದುಕೊಂಡಿದ್ದಾರೆ. ಈ […]

ಅಭಿಮಾನಿಗಳಲ್ಲಿ ಕಾತರ : ಮೂರು ದಶಕದ ಬಳಿಕ ಅಮಿತಾಬ್ ಬಚ್ಚನ್‌ ಜೊತೆಗೆ ರಜಿನಿಕಾಂತ್​ ಸಿನಿಮಾ

ಬೆಂಗಳೂರು: ತಮಿಳು ಸೂಪರ್‌ಸ್ಟಾರ್​ ರಜಿನಿಕಾಂತ್​​ 33 ವರ್ಷಗಳ ಬಳಿಕ ತಮ್ಮ ಸ್ನೇಹಿತನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.’ತಲೈವರ್​ 170′ ಸಿನಿಮಾದಲ್ಲಿ ಇಬ್ಬರು ಅಭಿನಯಿಸಲಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ ಅಂತಿದ್ದಾರೆ ಸಿನಿಮಾ ಪಂಡಿತರು. ಈ ಕುರಿತು ರಜಿನಿಕಾಂತ್​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ನೀಡಿದ್ದಾರೆ. ಅಮಿತ್​ ಬಚ್ಚನ್​ ಜೊತೆಗಿರುವ ಫೋಟೋ ಹಂಚಿಕೊಂಡು, ’33 ವರ್ಷಗಳ ಬಳಿಕ ನನ್ನ ಸ್ನೇಹಿತನೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅಮಿತಾಬ್​​ ಬಚ್ಚನ್​ ತಮ್ಮ ಮುಂದಿನ ಚಿತ್ರ ಲೈಕಾ ನಿರ್ಮಾಣದ ‘ತಲೈವರ್​ 170’ರಲ್ಲಿ […]