ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾದ ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ

ಉಡುಪಿ: ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿ ಹಾಗೂ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಲು ಅಸ್ತಿತ್ವದಲ್ಲಿರುವ ‘ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ (NAI) ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕ ಸುಭಾಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. NAI ರಾಜ್ಯ ಘಟಕದ ಅಧ್ಯಕ್ಷ ಅಮ್ಮರವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಶ್ರೀಕಾಂತ್ ಕಶ್ಯಪ್ ಇವರು ನಿರ್ಭೀತಿಯ ಪತ್ರಿಕೆಯಾದ “ಪೊಲೀಸ್ ವಾರ್ತೆ” ಇದರ ಪ್ರಧಾನ ಸಂಪಾದಕ ಸೃಜನಶೀಲ ಮತ್ತು ಸರಳ ವ್ಯಕ್ತಿತ್ವದ ಸುಭಾಶ್.ಆರ್.ಶೆಟ್ಟಿ ಇವರನ್ನು ನೇಮಕಾತಿ ಮಾಡಿರುತ್ತಾರೆ. ರಾಷ್ಟ್ರೀಯ ಪ್ರಧಾನ […]
ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಭೇಟಿ

ಪೆರ್ಣಂಕಿಲ: ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏ.2 ರ ವರೆಗೆ ಬ್ರಹ್ಮಕಲಶೋತ್ಸವ, ನಾಗಮಂಡಲ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಬುಧವಾರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ, ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಆಶೀರ್ವಾದ ಪಡೆದರು. ಬಳಿಕ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶಿರ್ವಾದ ಪಡೆದು ಇಂತಹ ಪುರಾತನ ದೇವಾಲಯದ ಅಂದದ ಸ್ವರೂಪ ಕಂಡು […]
ಮಣಿಪಾಲ: ಬೈಕ್ ಗೆ ಡಿಕ್ಕಿ ಹೊಡೆದ ಕಾರು – ಬೈಕ್ ಸವಾರನಿಗೆ ಗಾಯ

ಮಣಿಪಾಲ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಅಲೆವೂರು ರಸ್ತೆಯ ಬಳಿ ಸಂಭವಿಸಿದೆ. ಈ ಬಗ್ಗೆ ಬೈಕ್ ಸವಾರ ಜೀವನ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾರು ಚಾಲಕ ಅನಿರುದ್ದ ಎಂಬವರ ನಿರ್ಲಕ್ಷ್ಯ ಮತ್ತು ದುಡುಕುತನದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಕಾರ್ಕಳ: ಕಾರು ಡಿಕ್ಕಿ, ಬೈಕ್ ಸವಾರ ಸಾವು

ಕಾರ್ಕಳ: ಅತಿ ವೇಗದಿಂದ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕುಕ್ಕುಂದೂರು ಗ್ರಾಮದ ಜೋಡು ರಸ್ತೆ ಬಳಿ ಗುರುವಾರ ಸಂಭವಿಸಿದೆ. ಬಂಗ್ಲೆಗುಡ್ಡೆ ಕಡೆಯಿಂದ ಜೋಡು ರಸ್ತೆಯ ಕಡೆಗೆ ಸಂಚರಿಸುತ್ತಿದ್ದ ಬೈಕ್ ಸವಾರ ಮುದ್ದು (84) ಎಂಬವರಿಗೆ ಜೋಡು ರಸ್ತೆ ಕಡೆಯಿಂದ ಬಂಗ್ಲೆಗುಡ್ಡೆ ಕಡೆಗೆ ಅತಿ ವೇಗದಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನ ಹೆಲ್ಮೆಟ್ ಕಳಚಿ ರೋಡಿಗೆ ಬಿದ್ದಿದ್ದು ತಲೆಗೆ ತೀವ್ರವಾದ ಗಾಯವಾಗಿದ್ದು, ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ […]
ಬ್ರಹ್ಮಾವರದ “ಬ್ಲೂಬೆರಿ ಹಿಲ್ಸ್” ನಲ್ಲಿದೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಸೌಲಭ್ಯಗಳುಳ್ಳ ಅಪಾರ್ಟ್ಮೆಂಟ್ ಗಳು: ಬುಕ್ಕಿಂಗ್ ಪ್ರಾರಂಭ

ಬ್ರಹ್ಮಾವರ: ಎನ್.ಎನ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ನವರ ರೇರಾ ಪ್ರಮಾಣೀಕೃತ ಬ್ಲೂಬೆರಿ ಹಿಲ್ಸ್ ಅಪಾರ್ಟ್ ಮೆಂಟ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾ.17ರಂದು ನಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.ಈ ಕಟ್ಟಡವು ಉತ್ತಮ ಶೈಲಿಯ ಗುಣಮಟ್ಟದ ಮೂಲ ಸೌಕರ್ಯಗಳನ್ನು ಒಳಗೊಂಡಿದೆ.3, 2 ಮತ್ತು1 ಬಿ. ಎಚ್. ಕೆ ಅಪಾರ್ಟ್ಮೆಂಟ್ ಗಳ ಸಕಲ ಅತ್ಯಾಧುನಿಕ ಸುಸಜ್ಜಿತ ಕೊಠಡಿಗಳನ್ನು ಹೊಂದಿದೆ. ಈ ನೂತನ ಕಟ್ಟಡವು ಹೊರಾಂಗಣ ವ್ಯವಸ್ಥೆ, 24*7 ಸಿ ಸಿ ಟಿವಿಗಳ ಭದ್ರತೆ, ವಾಕಿಂಗ್ ಮತ್ತು ಜಾಗಿಂಗ್ ಗೆ ಪ್ರತ್ಯೇಕ ಟ್ರ್ಯಾಕ್ , ಯಾವುದೇ […]