ಮಸಾಲೆಗಳ ರಾಣಿ ಬಹುಪಯೋಗೀ ಏಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳು

ಮಸಾಲೆಗಳ ರಾಣಿ ಎಂದೂ ಕರೆಯಲ್ಪಡುವ ಏಲಕ್ಕಿಯನ್ನು ಭಾರತೀಯ ಸಾಂಪ್ರದಾಯಿಕ ಔಷಧ ಅಥವಾ ಆಯುರ್ವೇದದಲ್ಲಿ ಶತಮಾನಗಳಿಂದಲೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ. ಏಲಕ್ಕಿ ಅಥವಾ ಎಲೈಚಿ ಬಹುಪಯೋಗಿ ಮಸಾಲೆಯಾಗಿದ್ದು, ಇದನ್ನು ಬಿರಿಯಾನಿ, ಪುಲಾವ್‌, ಚಹಾ ಮತ್ತು ಹಲವಾರು ತಿಂಡಿ ತಿನಿಸುಗಳಲ್ಲಿ ಬಳಸುವುದು ಕೇವಲ ಸುವಾಸನೆಗೆ ಮಾತ್ರವಲ್ಲ, ಬದಲಿಗೆ ಇದರಲ್ಲಿರುವ ಆರೋಗ್ಯಭರಿತ ಅಂಶಗಳಿಗಾಗಿಯೂ ಹೌದು. ಏಲಕ್ಕಿಯು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ ಏಲಕ್ಕಿ ಚಹಾವು ಅಜೀರ್ಣ, […]

ಆಹಾರದ ಬದಲಾವಣೆಯು ಅಸ್ತಮಾ ರೋಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಬಹುದು: ಡಾ. ಸುದರ್ಶನ್ ಕೆ.ಎಸ್.

ವ್ಯಕ್ತಿಯಲ್ಲಿ ಉಸಿರಾಟದ ವಾಯು ಮಾರ್ಗಗಳು ಉರಿಯೂತಕ್ಕೊಳಗಾವುದು, ಕಿರಿದಾಗುವುದು ಮತ್ತು ಊದಿಕೊಳ್ಳುವುದು ಮತ್ತು ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗುವ ಸ್ಥಿತಿಯನ್ನು ಆಸ್ತಮಾ ಎನ್ನುತ್ತಾರೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಆಸ್ತಮಾ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವಂತಹುದ್ದಾಗಿರಬಹುದು. ಕೆಲವೊಮ್ಮೆ ಇದು ಮಾರಣಾಂತಿಕ ಆಸ್ತಮಾ ದಾಳಿಗೆ ಕಾರಣವಾಗಬಹುದು. ಆಸ್ತಮಾ ಸಮಸ್ಯೆಯು ಉಸಿರಾಟದ ತೊಂದರೆ, ಎದೆ ನೋವು, ಕೆಮ್ಮು ಮತ್ತು ಉಬ್ಬಸವನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲವೊಮ್ಮೆ ಉಲ್ಬಣಗೊಳ್ಳಬಹುದು. ಆಹಾರ ಪದ್ಧತಿಯು ರೋಗಿಗಳಲ್ಲಿ ಆಸ್ತಮಾ ಪರಿಸ್ಥಿತಿಯನ್ನು ಹೆಚ್ಚಿಸಬಹುದು ಅಥವಾ ಸ್ವಲ್ಪ ಪರಿಹಾರ ಉಂಟುಮಾಡಬಹುದು […]

ಉಡುಪಿ: ನಾಳೆ (ಫೆ.13) ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಉಡುಪಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ , ಕೆ. ಕೃಷ್ಣಮೂರ್ತಿ ಅಭಿಮಾನಿ ಬಳಗ ಉಡುಪಿ ಜಿಲ್ಲೆ, ಯಶೋಧ ಆಟೋ ಯೂನಿಯನ್ ಉಡುಪಿ ಹಾಗೂ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದೊಂದಿಗೆ ‘ಬೃಹತ್ ರಕ್ತದಾನ ಶಿಬಿರ’ ನಾಳೆ (ಫೆ.13) ಬೆಳಿಗ್ಗೆ 8.30ರಿಂದ 3 ಗಂಟೆಯವರೆಗೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಇರುವ ಮಥುರಾ ಕಂಫರ್ಟ್ಸ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಗಂಟೆ ಸಭಾಕಾರ್ಯಕ್ರಮ ಜರುಗಲಿದೆ. ರಕ್ತದಾನ ಶಿಬಿರದ ವಿಶೇಷತೆ: […]

ಈ ಸಿಂಪಲ್ ಜ್ಯೂಸ್ ಕುಡಿದ್ರೆ ಆರೋಗ್ಯವಾಗಿರ್ತೀರಿ: “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ”ಇದು ಹೊಸ ಅಂಕಣ

ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ  ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣದ ಮೊದಲ ಕಂತು ಹೂವಿನ ಎಲೆಗಳಿಂದಲೂ ಆರೋಗ್ಯಯುತ ತಿಂಡಿ ತಿನಿಸುಗಳನ್ನು ಮಾಡಬಹುದು. ನಿಮ್ಮ ಮನೆಯಲ್ಲಿಯೇ ನೀವು ದಾಸವಾಳ ಹೂವನ್ನು ನೋಡಿರುತ್ತೀರಿ. ಅದರ ಅಂದ ಚೆಂದ ನೋಡಿ ಖುಷಿಪಟ್ಟಿರುತ್ತೀರಿ. ಅದರ ಎಲೆಯಿಂದ ಒಂದೊಳ್ಳೆ ಆರೋಗ್ಯಯುತ ಜ್ಯೂಸ್ […]

ಈ ಚಳಿಗಾಲದಲ್ಲಿ ನಿಮ್ಮ ದೇಹ ಸೌಂದರ್ಯ ಕಾಪಾಡಲು ಭಾರೀ ಸಿಂಪಲ್ ಟಿಪ್ಸ್ ಇಲ್ಲುಂಟು!

ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಹಲವಾರು.ಅದರಲ್ಲೂ ಚರ್ಮದ ಆರೋಗ್ಯದ ಕುರಿತು ಈ ಕಾಲದಲ್ಲಿ ಎಷ್ಟು ಕಾಳಜಿ ಮಾಡಿದರೂ ಸಾಲದು. ತ್ವಚೆ ಒಡೆಯುವುದು, ತುಟಿ ಒಣಗಿ ಬಿರುಕು, ಪಾದಗಳಲ್ಲಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಮೊದಲಾದ ಸಮಸ್ಯೆಗಳು ಶುರುವಾದಾಗ ತಲೆಬಿಸಿ ಮಾಡಿಕೊಳ್ಳುವವರಿದ್ದಾರೆ.ಡೋಂಟ್ ವರಿ.ಇಲ್ಲಿ ನಾವು ಕೆಲವೊಂದು ಸುಲಭ ಪರಿಹಾರಗಳನ್ನು ನೀಡಿದ್ದೇವೆ. ಇಷ್ಟು ಮಾಡಿ ಸಾಕು.  ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ಆದಷ್ಟು ಕಡಿಮೆ ಮಾಡಿ  ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ […]