ಅಬುದಾಭಿಯ ರೂವಿಸ್ ನಗರದಲ್ಲಿ ಪುತ್ತಿಗೆ ಶ್ರೀಪಾದರಿಗೆ ಭವ್ಯ ಸ್ವಾಗತ

ಅಬುದಾಭಿ: ಪರ್ಯಾಯ ಸಂಚಾರ ನಿಮಿತ್ತ ರೂವಿಸ್ ನಗರಕ್ಕೆ ಆಗಮಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರಿಗೆ ಭವ್ಯ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ನೆರೆದಿದ್ದ ಭಕ್ತರಿಗೆ ಭಗವದ್ಗೀತಾ ಲೇಖನ ದೀಕ್ಷಾ ಪ್ರದಾನ ಮಾಡಲಾಯಿತು. ಉಡುಪಿಯ ಬ್ರಹ್ಮಾವರದ ಅಮ್ಮುಂಜೆ ಉದಯ ನಾಯಕ್ ರಿಂದ ಮೊದಲ ದೀಕ್ಷಾ ಸ್ವೀಕಾರ ನಡೆಯಿತು. ಬಳಿಕ ಶ್ರೀಗಳಿಗೆ ಗೌರವಾರ್ಪಣೆ ಮಾಡಲಾಯಿತು. ರೂವಿಸ್ ನಗರ ಅಬುದಾಭಿಯ ಪಕ್ಕದ ನಗರವಾಗಿದ್ದು ಸೌದಿದೇಶದ ಗಡಿಯಲ್ಲಿದೆ. ಸಾವಿರಾರು ಮಂದಿ ಭಾರತೀಯರು ಇಲ್ಲಿ ನೆಲೆಸಿದ್ದು, ಉಡುಪಿಯ ಶ್ರೀಪುತ್ತಿಗೆ ಶ್ರೀಗಳ ಆಗಮನದಿಂದ ಉತ್ಸವದ ವಾತಾವರಣ ನಿರ್ಮಾಣಗೊಂಡಿತ್ತು.  

ಜೀವನದಲ್ಲಿ ಯಶಸ್ಸು ಹೊಂದಲು ಸಹಕಾರಿ ಋಷಿ ಅಗಸ್ತ್ಯರು ಶ್ರೀರಾಮನಿಗೆ ಬೋಧಿಸಿದ ಆದಿತ್ಯ ಹೃದಯ ಸ್ತ್ರೋತ್ರ

ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ದೇವತೆಗಳೆಂದು ಆರಾಧಿಸುವುದು ಸನಾತನ ಸಂಸ್ಕೃತಿ. ಸೃಷ್ಟಿಯಲ್ಲಿರುವ ಪ್ರತಿಯೊಂದು ವಸ್ತುವೂ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಎಂಬ ಪಂಚತತ್ವಗಳಿಂದಾಗಿದೆ. ಅಗ್ನಿಯಿಂದ ಸೃಷ್ಟಿಯ ಉತ್ಪತ್ತಿಯಾಗಿದೆ. ಅಗ್ನಿಯ ಪ್ರತ್ಯಕ್ಷ ರೂಪ ಸೂರ್ಯದೇವ. ಅದಿತಿಯ ಪುತ್ರನಾದ ಸೂರ್ಯನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಭೂಮಿಯ ಮೇಲಿನ ಜೀವನದ ಆಧಾರಸ್ತಂಭವಾಗಿರುವ ಆದಿತ್ಯನಿಗೆ ಸಮರ್ಪಿತ ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಜ್ಯೋತಿಷ್ಯದ ಪ್ರಕಾರ ದುರ್ಬಲ ಸೂರ್ಯನನ್ನು ಹೊಂದಿರುವ ಅಥವಾ ಜೀವನದಲ್ಲಿ ಅನಿರ್ದಿಷ್ಟತೆಯನ್ನು ಅನುಭವಿಸುತ್ತಿರುವ ಜನರು ಆದಿತ್ಯ ಹೃದಯ ಸ್ತೋತ್ರವನ್ನು […]

ಮಂದಿರ 360: ಮನೆಯಲ್ಲಿ ಕುಳಿತೇ ಮಂದಿರ ದರ್ಶನ; ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾವಪೂರ್ಣ ಉಡುಗೊರೆ

ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ತೀರ್ಥಯಾತ್ರೆ ಕೈಗೊಳ್ಳಬೇಕು, ದೇಶದ ದೇವಸ್ಥಾನಗಳನ್ನೆಲ್ಲಾ ನೋಡಿ ಕೃತಾರ್ಥರಾಗಬೇಕು ಎಂದು ಬಯಸುವ ಅದೆಷ್ಟೋ ಆಸ್ತಿಕರಿಗೆ ಸಮಯದ ಅಭಾವ, ಆರ್ಥಿಕತೆಯ ಕೊರತೆ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ತೀರ್ಥಯಾತ್ರೆ ಕೈಗೊಳ್ಳುವುದು ಕನಸಾಗಿಯೇ ಉಳಿಯುತ್ತದೆ. ಇಂತಹ ಸದ್ಭಕ್ತರಿಗಾಗಿಯೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಒಂದು ಅತ್ಯಪೂರ್ವವಾದ ಉಡುಗೊರೆಯನ್ನು ನೀಡಿದೆ. ಅಂದೆಂದರೆ, ಮಂದಿರ 360(ಟೆಂಪಲ್ 360). ಏನಿದು ಟೆಂಪಲ್ 360? ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ವೈಬ್ ಸೈಟ್ https://temple360.in ಭಾರತದ ತೀರ್ಥಯಾತ್ರಾರ್ಥಿಗಳಿಗೆ ಎಲ್ಲ ದೇವಸ್ಥಾನಗಳಿಗೆ ವರ್ಚುವಲ್ ಪ್ರವಾಸವನ್ನು ಏರ್ಪಡಿಸಿದೆ. […]

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ಇಂದು‌ ಸಂಜೆ ಶರನ್ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಸೆ.26 ರಿಂದ ಅ.05 ವರೆಗೆ ನಡೆಯುವ ಶರನ್ನವರಾತ್ರಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರದ ಉದ್ಘಾಟನಾ ಸಮಾರಂಭವು ಸೆ.26 ಸೋಮವಾರ ಸಂಜೆ: 6.30ಕ್ಕೆ, ಸ್ಥಳ ಗಾಲವ ಮಂಟಪ, ಶ್ರೀ ಮಹಿಷಮರ್ದಿನೀ ದೇವಸ್ಥಾನ, ನೀಲಾವರದಲ್ಲಿ ನಡೆಯಲಿದೆ. ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶ್ರೀ ಮಹಿಷಮರ್ದಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಘುರಾಮ ಮಧ್ಯಸ್ಥ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಹೇಂದ್ರ ಕುಮಾರ್, ಕನ್ನಾರು ಶ್ರೀ […]

ಆ.31: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ

ಕುಂದಾಪುರ: ಕುಂದಾಪುರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ವಿನಾಯಕ ಚತುರ್ಥಿಯ ಪ್ರಯುಕ್ತ ಆ.31 ರಂದು ಅಷ್ಟೋತ್ತರ ಸಹಸ್ರ ನಾಲಿಕೇರ ಗಣಪತಿ ಯಾಗ ಜರಗಲಿದೆ. ಆ.30 ಮತ್ತು 31 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.