ಮೊಬೈಲ್ ಕಂಟೆಂಟ್ ಗಳನ್ನು 100-ಇಂಚಿನ ಸ್ಕ್ರೀನ್ ನಲ್ಲಿ ನೋಡಿ ಆನಂದಿಸಲು ಮಾರುಕಟ್ಟೆಗೆ ಬರಲಿದೆ JioGlass

ನವದೆಹಲಿ: JioGlass ಇದು ಭಾರತೀಯ ಕಂಪನಿಯಿಂದ ತಯಾರಾದ ಅತ್ಯಾಕರ್ಷಕ ಉತ್ಪನ್ನಗಳಲ್ಲಿ ಒಂದಾಗಿದೆ. ಇದು ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಸಂಪರ್ಕಿಸುವ ಒಂದು ಜೋಡಿ ಸ್ಮಾರ್ಟ್ ಗ್ಲಾಸ್ ಆಗಿದೆ. ಮೊಬೈಲ್ ನಲ್ಲಿರುವ ಕಂಟೆಂಟ್ ಗಳನ್ನು 100-ಇಂಚಿನ ವರ್ಚುವಲ್ ಸ್ಕ್ರೀನ್ ಆಗಿ ಪರಿವರ್ತಿಸುತ್ತದೆ. JioGlass 2019 ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸ್ವಾಧೀನಪಡಿಸಿಕೊಂಡ ಡೀಪ್-ಟೆಕ್ ಸ್ಟಾರ್ಟಪ್ ‘ಟೆಸ್ಸೆರಾಕ್ಟ್‌’ನ ಉತ್ಪನ್ನವಾಗಿದೆ. ಕ್ಯಾಮೆರಾಗಳು, ಹೆಡ್‌ಸೆಟ್‌ಗಳು ಮತ್ತು ಸ್ಮಾರ್ಟ್ ಗ್ಲಾಸ್‌ಗಳಂತಹ ವಿವಿಧ ಉತ್ಪನ್ನಗಳಿಗೆ ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ತಂತ್ರಜ್ಞಾನವನ್ನು […]

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ತೀವ್ರ ಕೋವಿಡ್ ನಿಂದ ಬಳಲಿದವರು ಶ್ರಮದಾಯಕ ವ್ಯಾಯಾಮದಿಂದ ದೂರವಿರಲು ಸೂಚನೆ

ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ತೀವ್ರವಾದ ಕೋವಿಡ್ -19 ಸೋಂಕಿನಿಂದ ಬಳಲಿದ್ದವರು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಗುಜರಾತ್‌ನ ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ವಿಷಯದ ಬಗ್ಗೆ […]

ಮುಂಬೈ ರಸ್ತೆಗಳಿಂದ ಮಾಯವಾಗಲಿದ್ದಾಳೆ ‘ಪ್ರೀಮಿಯರ್ ಪದ್ಮಿನಿ’ : ಇತಿಹಾಸದ ಪುಟ ಸೇರಲಿವೆ ಕಪ್ಪು-ಹಳದಿ ಕಾರುಗಳು

ಮುಂಬೈ: ಆರು ದಶಕಗಳಿಂದ ಮುಂಬೈಯ ಜೀವನಾಡಿಯಾಗಿದ್ದ, ಪ್ರಯಾಣಿಕರನ್ನು ಸುರಕ್ಷಿತವಾಗಿ ತಮ್ಮ ಗಮ್ಯ ಸ್ಥಾನಕ್ಕೆ ತಲುಪಿಸುತ್ತಿದ್ದ ಕಪ್ಪು ಹಳದಿ ಬಣ್ಣದ ‘ಪ್ರೀಮಿಯರ್ ಪದ್ಮಿನಿ’ ಕಾರುಗಳು ಇನ್ನು ಮುಂದೆ ಇತಿಹಾಸದ ಪುಟ ಸೇರಲಿವೆ. ಇತ್ತೀಚೆಗೆ ಮುಂಬೈ ಸಾರಿಗೆ ಇಲಾಖೆಯು ಮಹಾನಗರದಲ್ಲಿ ಓಡುತ್ತಿರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ. 20 ವರ್ಷ ಅಥವಾ ಅದಕ್ಕಿಂತ ಹಿಂದಿನ ನೋಂದಣಿ ಇರುವ ಟ್ಯಾಕ್ಸಿಗಳನ್ನು ತೆಗೆದುಹಾಕಲು ಈ ಆದೇಶವನ್ನು ನೀಡಲಾಗಿದೆ. 2008 ರಲ್ಲಿ, ಮಹಾರಾಷ್ಟ್ರ ಸರ್ಕಾರವು ಕ್ಯಾಬ್ ಗಳ ವಯಸ್ಸಿನ ಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಿತು, […]

ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ರೈಲುಗಳ ಮಧ್ಯೆ ಡಿಕ್ಕಿ: 13 ಸಾವು; 50 ಜನರಿಗೆ ಗಾಯ

ಅಮರಾವತಿ: ಒಡಿಶಾದಲ್ಲಿ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಮೂರು ರೈಲುಗಳ ಭೀಕರ ಡಿಕ್ಕಿ ನಡೆದ ತಿಂಗಳುಗಳ ಬಳಿಕ ಭಾನುವಾರದಂದು ಆಂಧ್ರಪ್ರದೇಶದ ಹೌರಾ-ಚೆನ್ನೈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಿಗ್ನಲ್ ಅನ್ನು ದಾಟಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ. ವಿಶಾಖಪಟ್ಟಣದಿಂದ ಪಲಾಸಕ್ಕೆ ಹೋಗುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಸಿಗ್ನಲ್ ಇಲ್ಲದ ಕಾರಣ ಕೊತ್ಸವತ್ಸಲ ಬಳಿಯ ಅಳಮಂಡ ಮತ್ತು ಕಂಟಕಪಲ್ಲಿ ನಡುವೆ ಹಳಿಗಳ ಮೇಲೆ ನಿಂತಿದ್ದು, ವೈಜಾಗ್-ರಾಯಗಡ ಪ್ಯಾಸೆಂಜರ್ ರೈಲು […]

ಕೇರಳದ ಕಲಮಸ್ಸೆರಿಯ ಕ್ರೈಸ್ತ ಪ್ರಾರ್ಥನಾ ಸಭೆಯಲ್ಲಿ ಸ್ಪೋಟ; ಒಂದು ಸಾವು ಹಲವರಿಗೆ ಗಾಯ

ಎರ್ನಾಕುಲಂ: ಇಂದು ಬೆಳಗ್ಗೆ ಕೇರಳದ ಎರ್ನಾಕುಲಂನ ಕಲಮಸ್ಸೆರಿ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯೊಂದರಲ್ಲಿ ಅನೇಕ ಸ್ಫೋಟಗಳು ಸಂಭವಿಸಿದ ನಂತರ ಒಬ್ಬರು ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡಿದ್ದಾರೆ. #WATCH | Kerala LoP and state Congress President VD Satheesan says, "I was told that there were two blasts and there was a fire. First, there was a major blast. The second one was minor. […]