ಸ್ಪೈಡರ್ಮ್ಯಾನ್ ಫಾರ್ಹೋಮ್ ಭಾರತದಲ್ಲಿ ಬಿಡುಗಡೆ ಮೊದಲ ದಿನವೇ 10 ಕೋಟಿ ರೂ. ಗಳಿಕೆ

ಜಗತ್ತಿನಾದ್ಯಂತ ಬಿಡುಗಡೆಗೊಂಡು ಗಲ್ಲಪೆಟ್ಟಿಗೆ ದೋಚುತ್ತಿರುವ ಸ್ಪೈಡರ್ಮ್ಯಾನ್ ಫಾರ್ಹೋಮ್ ಚಲನಚಿತ್ರ ಭಾರತದಲ್ಲಿ ಮೊದಲದಿನವೇ (ಗುರುವಾರ) 10 ಕೋಟಿ ರೂ.,ಗಳಿಕೆ ಮಾಡಿದೆ. ಟಾಮ್ ಹಾಲೆಂಡ್ ಅಭಿನಯದ, ವಾರ್ವಲ್ ಸಿನಿಮ್ಯಾಟಿಕ್ ಯೂನಿವರ್ಸ್ ನಿರ್ಮಾಣದ ಸ್ಪೈಡರ್ ಭಾರತದಲ್ಲಿ ಉತ್ತಮ ಆರಂಭವನ್ನು ಪಡೆದಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರುಣ್ ಆದರ್ಶ್ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಹಾಲಿವುಡ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುವುದನ್ನು ಮುಂದುವರೆಸುತ್ತಿದೆ. ಸ್ಪೈಡರ್ಮ್ಯಾನ್ ಗಳಿಕೆ ಬಗ್ಗೆ ಚುಟುಕಾಗಿ ವಿಶ್ಲೇಷಿಸಿದ್ದಾರೆ. ವಾರಂತ್ಯದಲ್ಲಿ ಗಳಿಕೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಪೈಡರ್ಮ್ಯಾನ್ನ ಮಾರ್ಗದರ್ಶಕ ಮತ್ತು […]
‘ಕಿಟ್ ಕ್ಯಾಟ್’ ರ್ಯಾಪರ್ ನಲ್ಲಿ ಮರವಂತೆ ಮಿಂಚಿಂಗ್: ನಮ್ಮ ಕರಾವಳಿಯ ಕಡಲ ಕಿನಾರೆಗೆ ಸಿಕ್ತು ಜಾಗತಿಕ ಮನ್ನಣೆ

ಉಡುಪಿ:ನಮ್ಮ ರಾಜ್ಯದ ಚಂದದ ಕಡಲ ಕಿನಾರೆಗಳ ಪೈಕಿ ಮರವಂತೆಗೆ ಅದರದ್ದೇ ಆದ ಸೌಂದರ್ಯವಿದೆ. ಪ್ರವಾಸಿಗರ ಮೈ ಮನಗಳಲ್ಲಿ ಮರವಂತೆ ಯಾವಾಗಲೂ ಮೈ ನವಿರೇಳಿಸುವಂತಹ ಅನುಭವವನ್ನೇ ಕೊಡುತ್ತಿರೋದು ನಿಮಗೆಲ್ಲಾ ಗೊತ್ತು. ಈಗ ಇದೇ ಮರವಂತೆಯ ಕಡಲು ಕಿಟ್ ಕ್ಯಾಟ್ ಚಾಕಲೇಟ್ ನ ರ್ಯಾಪರ್ ನಲ್ಲಿ ಮಿಂಚಿ ಜಗತ್ತಿನಲ್ಲೆಲ್ಲಾ ಓಡಾಡುತ್ತಿದೆ. ಹೌದು ಮರವಂತೆ ಬೀಚ್ ಚಿತ್ರವನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಆಹಾರ ಪದಾರ್ಥಗಳ ಉತ್ಪಾದನೆ, ಮಾರಾಟದ ನೆಸ್ಲೆ ಸಂಸ್ಥೆ ‘ಕಿಟ್ಕ್ಯಾಟ್’ ಚಾಕಲೆಟ್ ತನ್ನ ರ್ಯಾಪರ್ ನಲ್ಲಿ ಬಳಸಿದೆ. ಆ ಮೂಲಕ ಮರವಂತೆ ಬೀಚ್ […]
ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ‘ನೀತಿ ಆಯೋಗದ’ ಕುರಿತ ಸರ್ವ ಪಕ್ಷಗಳ ಸಭೆಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಇತರ 5 ಪಕ್ಷಗಳ ನಾಯಕರು ಗೈರಾಗಿದ್ದಾರೆ. ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕುರಿತು ನಡೆಯುತ್ತಿರುವ ‘ನೀತಿ ಆಯೋಗ’ದ ಸಭೆಗಳಿಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಐದು ಪಕ್ಷಗಳ ನಾಯಕರು ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮಮತಾ […]
ವಿಶ್ವಕಪ್ ಟೂರ್ನಿಯಿಂದ ಧವನ್ ಹೊರಕ್ಕೆ..! ಋಷಬ್ ಪಂತ್ ತಂಡ ಸೇರ್ಪಡೆ

ಲಂಡನ್: ಗಾಯದ ಸಮಸ್ಯೆಯಿಂದ ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮ್ಯಾನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಇದುವರೆಗಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೇಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಕೈಬೆರಳಿಗೆ ಗಾಯವಾಗಿತ್ತು. ಹೀಗಾಗಿ ಪಾಕಿಸ್ತಾನ ವಿರುದ್ದದ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಇಂಗ್ಲೆಂಡ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಧವನ್ ಬದಲು ವಿಕೆಟ್ […]
ಸಿರೊಹಿ: ಹಸಿವಿನಿಂದ ಬಳಲಿದ ಮಂಗಗಳಿಗೆ ಹಾಲುಣಿಸಿದ ಹಸು..!

ರಾಜಸ್ಥಾನ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜತೆಗೆ ಪ್ರಾಣಿಗಳೂ ತತ್ತರಿಸಿದ್ದು, ಬಿಸಿಲು ಮತ್ತು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿವೆ. ಹೀಗೆ ಬಳಲಿದ ಮಂಗಗಳಿಗೆ ಹಸುವೊಂದು ಹಾಲುಣಿಸಿದ ಅಚ್ಚರಿಯ ಸಂಗತಿ ನಡೆದಿದೆ. ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಮಂಗಗಳಿಗೆ ಹಾಲುಣಿಸಿ ಭಾರೀ ಸುದ್ದಿಯಾಗಿದೆ. ಹಲವು ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ. […]