‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆಗಾಗಿ ಮೊದಲ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಚಿದ ಆರ್.ಆರ್.ಆರ್

ಎಸ್.ಎಸ್ ರಾಜಮೌಳಿಯವರ ಆರ್.ಆರ್.ಆರ್ ಚಿತ್ರವು 2023 ನೇ ಸಾಲಿನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ಅದರ ಹಿಟ್ ಟ್ರ್ಯಾಕ್ “ನಾಟು ನಾಟು” ಗಾಗಿ ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಚಿನ್ನದ ಟ್ರೋಫಿಯನ್ನು ಗೆದ್ದು ಬೀಗಿದೆ. ತೆಲುಗು ಚಲನಚಿತ್ರವು ‘ಅತ್ಯುತ್ತಮ ಚಿತ್ರ-ಇಂಗ್ಲಿಷೇತರ’ ವಿಭಾಗದಲ್ಲಿಯೂ ನಾಮನಿರ್ದೇಶನಗೊಂಡಿದೆ. ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿಯವರು ಪ್ರಶಸ್ತಿ ಸ್ವೀಕರಿಸಿ ಇಡೀ ತಂಡಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. MM Keeravaani’s #GoldenGlobes2023 acceptance Speech!! ❤️🔥❤️🔥 #RRRMovie […]
ಅಪಘಾತ ಸಾವು ಹಿಂಸಾಚಾರ ಪ್ರಕರಣಗಳ ಜವಾಬ್ದಾರಿಯುತ ವರದಿಗಾರಿಕೆ: ಖಾಸಗಿ ಟಿವಿ ಚಾನೆಲ್ ಗಳಿಗೆ ಸಲಹೆ ನೀಡಿದ ಕೇಂದ್ರ

ನವದೆಹಲಿ: ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ದೌರ್ಜನ್ಯ ಸೇರಿದಂತೆ ಅಪಘಾತಗಳು, ಸಾವುಗಳು ಮತ್ತು ಹಿಂಸಾಚಾರದ ಘಟನೆಗಳನ್ನು ವರದಿ ಮಾಡುವುದರ ವಿರುದ್ಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಖಾಸಗಿ ಟಿವಿ ಚಾನೆಲ್ಗಳಿಗೆ ಸೋಮವಾರ ‘ಬಲವಾದ’ ಸಲಹೆಯನ್ನು ನೀಡಿದೆ. 1995 ರ ಅಡಿಯಲ್ಲಿ ಹಾಕಲಾದ ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯಿದೆಯ ಪ್ರೋಗ್ರಾಂ ಕೋಡ್ಗೆ ಬದ್ಧವಾಗಿರುವಂತೆ ಸರ್ಕಾರವು ಟಿವಿ ಚಾನೆಲ್ಗಳಿಗೆ ನಿರ್ದೇಶಿಸಿದೆ. “ಒಳ್ಳೆಯ ಅಭಿರುಚಿ ಮತ್ತು ಸಭ್ಯತೆಯ” ಮೇಲೆ ಸಂಪೂರ್ಣವಾಗಿ ರಾಜಿ ಮಾಡಿಕೊಂಡು ಮತ್ತು “ಸಾಮಾನ್ಯ ವೀಕ್ಷಕರ ಕಣ್ಣು […]
ಭೂಕುಸಿತ ನಿರಂತರ: ಉತ್ತರಾಖಂಡದ ಜೋಶಿಮಠವಿನ್ನು ‘ಜೀವಿಸಲು ಅಸುರಕ್ಷಿತ’; ಸರ್ಕಾರದ ಘೋಷಣೆ

ಜೋಶಿಮಠ: ಮಾನವನ ದುರಾಸೆ ಮತ್ತು ಅಸಡ್ಡೆಗೆ ಬಲಿಯಾದ ಸನಾತನ ಧರ್ಮದ ಅತ್ಯಂತ ಪವಿತ್ರ ಆಧ್ಯಾತ್ಮಿಕ ಸ್ಥಳವಿನ್ನು ಜೀವಿಸಲು ‘ಅಸುರಕ್ಷಿತ’ ಎನ್ನುವ ಹಣೆಪಟ್ಟಿಯನ್ನು ಅಧಿಕೃತವಾಗಿ ಪಡೆದುಕೊಂಡಿದೆ. ಉತ್ತರಾಖಂಡ ಸರ್ಕಾರವು ಜೋಶಿಮಠದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್ಗಳನ್ನು ವಿಪತ್ತು ನಿರ್ವಹಣಾ ಕಾಯಿದೆಯಡಿ ‘ವಿಪತ್ತು ಪೀಡಿತ’ ಮತ್ತು ‘ಜೀವನಕ್ಕೆ ಅಸುರಕ್ಷಿತ’ ಎಂದು ಘೋಷಿಸಿದೆ. ಹಿಮಾಲಯದ ತಪ್ಪಲಿನ ಪವಿತ್ರ ನಗರದಲ್ಲಿ 600 ಕ್ಕೂ ಹೆಚ್ಚು ಮನೆಗಳಲ್ಲಿ ಹಾಗೂ ಇಲ್ಲಿನ ಪುರಾತನ ದೇವಸ್ಥಾನಗಳಲ್ಲಿ ಬಿರುಕುಗಳನ್ನು ಉಂಟುಮಾಡಿದ ಭೂಕುಸಿತದಿಂದ ಹೆಚ್ಚುತ್ತಿರುವ ಬೆದರಿಕೆಯ ದೃಷ್ಟಿಯಿಂದ ಈ ನಿರ್ಧಾರ […]
ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ದೇವಸ್ಥಾನಕ್ಕೆ ಡಿಕ್ಕಿ: ಪೈಲಟ್ ಸಾವು

ರೇವಾ: ಶುಕ್ರವಾರ ಮುಂಜಾನೆ ಮಧ್ಯಪ್ರದೇಶದ ರೇವಾದಲ್ಲಿ ದೇವಸ್ಥಾನಕ್ಕೆ ಡಿಕ್ಕಿ ಹೊಡೆದ ನಂತರ ವಿಮಾನ ಅಪಘಾತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ. ಚೋರ್ಹಾಟಾ ಎಂಬಲ್ಲಿ ಈ ಘಟನೆ ನಡೆದಿದೆ. ಅಪಘಾತದ ನಂತರ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದರು ಮತ್ತು ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ವಿಮಾನವು ಪೈಲಟ್ ತರಬೇತಿ ಕಂಪನಿಗೆ ಸೇರಿತ್ತು. मध्य प्रदेश के रीवा में विमान हादसामंदिर से टकराया विमान, ट्रेनी पायलट की मौत दूसरे पायलट […]
ಹಿಮಾಲಯದ ತಪ್ಪಲಿನ ಉತ್ತರಾಖಂಡದಲ್ಲಿ ಕುಸಿಯುತ್ತಿದೆ ಭೂಮಿ: ನಗರೀಕರಣದಿಂದಾಗಿ ನಲುಗಿತು ಜೀವನ

ಜೋಶಿಮಠ: ಹಿಮಾಲಯದ ತಪ್ಪಲಿನ ಈ ಪಟ್ಟಣವು ಕುಸಿಯುತ್ತಿದೆ. ಇಲ್ಲಿನ ರಸ್ತೆ, ಮನೆ, ಶಾಲೆ ಕಾಲೇಜು, ಕೃಷಿ ಭೂಮಿಯಲ್ಲಿ ಭೂಮಿ ಬಾಯ್ದೆರೆದು ದೊಡ್ಡ ವಿಕೋಪವೊಂದಕ್ಕೆ ನಾಂದಿ ಹಾಡಲು ತಯಾರಾಗಿ ನಿಂತಿದೆ. ಇಲ್ಲಿನ 561 ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಸುಮಾರು 66 ಕುಟುಂಬಗಳು ಈ ಜಾಗವನ್ನು ತೊರೆದು ಬೇರೆ ಸುರಕ್ಷಿತ ಸ್ಥಳಕ್ಕೆ ತೆರಳಿದೆ. ಸಿಂಗಧಾರ್ ಮತ್ತು ಮಾರವಾಡಿ ಎಂಬ ಸ್ಥಳಗಳಲ್ಲಿ ಬಿರುಕುಗಳು ಹೆಚ್ಚಾಗುತ್ತಿವೆ. ಮನೆ ಮಾತ್ರವಲ್ಲ ಇಲ್ಲಿನ ರಸ್ತೆಗಳಲ್ಲಿಯೂ ಬಿರುಕುಗಳು ಕಾಣಿಸಿಕೊಂಡಿವೆ. ಜೋಶಿಮಠದ 9 ವಾರ್ಡುಗಳಲ್ಲಿ ಬೃಹತ್ ಪ್ರಮಾಣದ ಪರಿಣಾಮಗಳಾಗಿವೆ. […]