ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 5 ನೇ ಪುಣ್ಯತಿಥಿ: ಗಣ್ಯರಿಂದ ಪುಷ್ಪ ನಮನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಎನ್‌ಡಿಎ ನಾಯಕರು ಮಾಜಿ ಪ್ರಧಾನಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ 5 ನೇ ಪುಣ್ಯತಿಥಿಯ ಅಂಗವಾಗಿ ಸದೈವ್ ಅಟಲ್ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿದರು. ಉಪರಾಷ್ಟ್ರಪತಿ ಜಗದೀಪ್ ಧಂಖರ್, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾಜ್ಯಸಭಾ ಉಪ ಸಭಾಪತಿ ಹರಿವಂಶ್, ಪ್ರಫುಲ್ ಪಟೇಲ್, ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಸಚಿವ ಮತ್ತು ಅಪ್ನಾ […]

ಇನ್ನು ಎಂಟು ದಿನ ಬಾಕಿ: ಚಂದ್ರಯಾನ-3 ಕ್ಕೊಂದು ಬಾಹ್ಯಾಕಾಶದ ಪ್ರತಿಸ್ಪರ್ಧಿ ರಶ್ಯಾದ ಲೂನಾ-25!!

ಅನಿರೀಕ್ಷಿತ ಬಾಹ್ಯಾಕಾಶ ಓಟದಲ್ಲಿ, ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಪ್ರಥಮ ರಾಷ್ಟ್ರವಾಗಲು ಪೈಪೋಟಿ ನಡೆಸುತ್ತಿವೆ. ರಷ್ಯಾ ಕಳೆದ ವಾರ ಲೂನಾ-25 ಮೂನ್ ಮಿಷನ್ ಅನ್ನು ಪ್ರಾರಂಭಿಸಿದ್ದು, ಇದು ಚಂದ್ರನನ್ನು ಭಾರತದ ಚಂದ್ರಯಾನ -3 ಕ್ಕೂ ಮುಂಚೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಚಂದ್ರಯಾನ-3 ರ ನಂತರ ಲೂನಾ-25 ಅನ್ನು ಉಡಾವಣೆ ಮಾಡಲಾಗಿದ್ದರೂ, ಅದು ಎರಡು ದಿನಗಳ ಮುನ್ನವೇ ಚಂದ್ರನ ಮೇಲೆ ಇಳಿಯಬಹುದು ಎನ್ನಲಾಗಿದೆ.   ಲೂನಾ -25 ರ ನಿಗದಿತ ಲ್ಯಾಂಡಿಂಗ್ ಆಗಸ್ಟ್ […]

ಸ್ವಾತಂತ್ರ್ಯದ ಮುನ್ನಾ ದಿನ ಪಾಕಿಸ್ತಾನಕ್ಕೆ ಆಘಾತ: ಬಲೂಚಿಸ್ತಾನದಲ್ಲಿ ಚೀನಾ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲೆ ದಾಳಿ

ಬಲೀಚಿಸ್ತಾನ: ಆದಿತ್ಯವಾರದಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ಸಶಸ್ತ್ರ ಬಂಡುಕೋರರು ಭಾನುವಾರ ದಾಳಿ ನಡೆಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದಾರೆ. ಗ್ವಾದರ್‌ನ ಫಕೀರ್ ಸೇತುವೆಯ ಮೇಲೆ ಚೀನಾದ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲಿನ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಇತರ ಭಯೋತ್ಪಾದಕರು ಗಾಯಗೊಂಡ ಸ್ಥಿತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು […]

ಶತಮಾನದ ಭೀಕರ ಕಾಡ್ಗಿಚ್ಚಿಗೆ ಹವಾಯಿ ದ್ವೀಪ ಭಸ್ಮ.. 89 ಮಂದಿ ಅಗ್ನಿಗಾಹುತಿ

ಲಹೈನಾ (ಹವಾಯಿ) : ಶತಮಾನಗಳಷ್ಟು ಹಳೆಯದಾದ ಲಹೈನಾ ಪಟ್ಟಣವನ್ನು ಕಾಡ್ಗಿಚ್ಚು ಸಂಪೂರ್ಣವಾಗಿ ಸುಟ್ಟು ಹಾಕಿದೆ. ನೂರಾರು ಮನೆಗಳು, ಸಮೃದ್ಧವಾದ ಕಾಡು ಸುಟ್ಟು ಕರಕಲಾಗಿದೆ. ಸ್ಮಶಾನದ ರೀತಿ ನಗರಗಳು ಭಾಸವಾಗುತ್ತಿರುವ ಭಯಾನಕ ದೃಶ್ಯಗಳು ಕರುಳು ಹಿಂಡುತ್ತಿವೆ. ಹವಾಯಿ ದ್ವೀಪ ಎದುರಿಸಿದ ಅತಿ ಭೀಕರ ನೈಸರ್ಗಿಕ ವಿಕೋಪವಾಗಿದೆ. ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟವರನ್ನು ಗುರುತಿಸುವುದೂ ಸಾಧ್ಯವಾಗುತ್ತಿಲ್ಲ. ಪ್ರಕೃತಿ ರುದ್ರನರ್ತನಕ್ಕೆ ತಡೆ ಇಲ್ಲವಾಗಿದೆ. ಸರ್ಕಾರದ ಸದ್ಯದ ಗಮನ ಬದುಕುಳಿದವನ್ನು ಉಳಿಸಿಕೊಳ್ಳುವುದಾಗಿದೆ. ಅವರಿಗೆ ಸುರಕ್ಷಿತ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇದೊಂದು ವಿನಾಶಕಾರಿ ಕಾಡ್ಗಿಚ್ಚು. […]

ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ತಂದೆ ಶಶಿಕಾಂತ್ ನಿಧನ

ನಟಿ ಅಂಕಿತಾ ಲೋಖಂಡೆ ಅವರ ಸಿನಿ ಸ್ನೇಹಿತರು, ಹಿತೈಷಿಗಳು ಸೇರಿದಂತೆ ಅಭಿಮಾನಿಗಳು ಲೋಖಂಡೆ ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಅಂಕಿತಾರ ತಂದೆಯ ನಿಧನದ ಸುದ್ದಿ ಕೇಳಿದ ಸಹನಟರು, ಚಿತ್ರರಂಗದವರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್​ ಲೋಖಂಡೆ ಅವರು ಶನಿವಾರದಂದು (ಆಗಸ್ಟ್ 12) ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.ಪವಿತ್ರ ರಿಷ್ತಾ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರ ತಂದೆ ಶಶಿಕಾಂತ್​ ಲೋಖಂಡೆ ವಿಧಿವಶರಾಗಿದ್ದಾರೆ. ಅಂತಿಮ ನಮನ ಸಲ್ಲಿಸಿದ ಸಿನಿ ಸ್ನೇಹಿತರು: ಜನಪ್ರಿಯ […]