ಉಡುಪಿ:ಉಡುಪಿ ಜಿಲ್ಲಾ ಫುಡ್ ಅಸೋಸಿಯೇಷನ್ ಮತ್ತು ಅರುಣೋದಯ ಹೋಂ ಇಂಡಸ್ಟ್ರೀಸ್, ವಡ್ಜೆ, ಪೆರ್ಡೂರು ಇದರ ಸಹಯೋಗದಲ್ಲಿ ಮಂಗಳವಾರ (10.6.2025) ನಡೆದ ಉದ್ಯಮ ಮಾಹಿತಿ ಕಾರ್ಯಗಾರವು ಅರುಣೋದಯ ಇಂಡಸ್ಟ್ರೀಸ್ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಮ್ಮ ಸಂಘದ ಸದಸ್ಯರಾದ ಗೋವಿಂದ ಕುಲಾಲ್ ರವರು ಪ್ರಾರ್ಥನೆಯನ್ನು ನೆರವೇರಿಸಿದರು. ಸಂಘದ ಎಲ್ಲಾ ಸದಸ್ಯರಿಗೂ ಮತ್ತು ಸಭೆಯಲ್ಲಿ ನೆರೆದಿರುವ ಎಲ್ಲರಿಗೂ ಅಧ್ಯಕ್ಷರು ಸ್ವಾಗತಿಸಿದರು. ಪ್ರಾಸ್ತವಿಕವಾಗಿ ಅರುಣೋದಯ ಹೋಂ ಇಂಡಸ್ಟ್ರೀಸ್ ಮಾಲಕರಾದ ವಸಂತ ನಾಯಕ್ ಇವರು ಸಂಸ್ಥೆಯು ಬೆಳೆದು ಬಂದ ಹಾದಿ ಮತ್ತು ಅದರ ಉತ್ಪನ್ನಗಳ ಸಮಗ್ರ ಮಾಹಿತಿಯನ್ನು ನೀಡಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರಿ ಸಂಘದ ಅಧ್ಯಕ್ಷರಾದ ಮತ್ತು ಸಂಘದ ಕಾನೂನು ಸಲಹೆಗಾರರಾದ ಶ್ರೀಧರ್ ಪಿಎಸ್ ರವರು ಅರುಣೋದಯ ಸಂಸ್ಥೆಯು ಆಧುನಿಕ ತಾಂತ್ರಿಕತೆಯನ್ನು ಹೇಗೆ ಅಳವಡಿಸಿಕೊಂಡಿದೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಪೂರಕವಾದ ಮಾಹಿತಿಯನ್ನು ನೀಡಿದರು.
ಸಂಘಟನಾ ಕಾರ್ಯದರ್ಶಿಯಾದ ದಿವಾಕರ್ ಸನಿಲ್ ರವರು ಅರುಣೋದಯ ಹೋಂ ಇಂಡಸ್ಟ್ರೀಸ್ ನ ಕಾರ್ಯವೈಖರಿಯ ಬಗ್ಗೆ ವಿವರಿಸಿದರು . ಸುಮಾರು 100ಕ್ಕೂ ಹೆಚ್ಚು ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ವತಿಯಿಂದ ಅರುಣೋದಯ ಹೋಂ ಇಂಡಸ್ಟ್ರೀಸಿನ ವಸಂತ ನಾಯಕ್ ದಂಪತಿ ಸ್ಮರಣೆಕೆ ನೀಡಿ ಗೌರವಿಸಲಾಯಿತು.
ಜುಲೈ 27ರಂದು ನಡೆಯುವ ಸಂಘದ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಯಾಗಿ ಅರುಣ ನಾಯಕ್ ( ಮಾಲಕರು ಅರುಣೋದಯ ಹೋಂ ಇಂಡಸ್ಟ್ರೀಸ್)ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ವಿಶ್ವನಾಥ್ ಬಿಎಸ್ ರವರು ನೆರವೇರಿಸಿದರು. ಸಂಘದ ಕೋಶಾಧಿಕಾರಿಗಳಾದ ಶಶಿಕಾಂತ್ ಜಿ ನಾಯಕ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸತ್ಯಪ್ರಸಾದ್ ಶೆಣೈ ಎಲ್ಲರಿಗೂ ಧನ್ಯವಾದ ಹೇಳಿದರು. ನೆರೆದಿರುವ ಎಲ್ಲರಿಗೂ ಉಚಿತ ಕಿಟ್ ಮತ್ತು ಉಪಹಾರ ವ್ಯವಸ್ಥೆಯನ್ನು ಮಾಡಲಾಯಿತು. ಇದರೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.












