ಜಿಲ್ಲಾಧಿಕಾರಿ ಕಚೇರಿಗೆ ಬರುವ ಸರ್ಕಾರಿ ನೌಕರರಿಗೆ ಬಸ್ ಸೌಲಭ್ಯ

ಉಡುಪಿ: ಜಿಲ್ಲೆಯಲ್ಲಿ ಜುಲೈ 16ರ ಗುರುವಾರ ಬೆಳಿಗ್ಗೆಯಿಂದ 14 ದಿನಗಳ ಕಾಲ ಸೀಲ್ ಡೌನ್  ಇರುವುದರಿಂದ ಬಸ್ ಸಂಚಾರ ಇಲ್ಲದೆ ಸರಕಾರಿ ನೌಕರರಿಗೆ ಕಚೇರಿಗೆ ಬರಲು ತೊಂದರೆ ಆಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ  ಸುಬ್ರಮಣ್ಯ  ಶೇರಿಗಾರ್ ಅವರು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಲ್ಲಿ ಸಾರಿಗೆ ವ್ಯವಸ್ಥೆ ಮಾಡುವಂತೆ ಮನವಿ‌ ಮಾಡಿದ್ದರು.
ಅದರಂತೆ ಬೈಂದೂರು  –  ಕುಂದಾಪುರ  –  ರಜತಾದ್ರಿ  ಹಾಗೂ ಹೆಜಮಾಡಿ  –  ಕಾಪು  –  ಉಡುಪಿ  –  ರಜತಾದ್ರಿ ಮಾರ್ಗವಾಗಿ ಸರಕಾರಿ ಬಸ್  ಸೌಲಭ್ಯ ಒದಗಿಸುವುದಾಗಿ  ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಬಸ್ ಗಳು ಬೆಳಿಗ್ಗೆ 8 ಗಂಟೆಗೆ ಡಿಪೋದಿಂದ ಹೋರಾಡಲಿವೆ ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ  ಸುಬ್ರಮಣ್ಯ  ಶೇರಿಗಾರ್ ಹೇಳಿದ್ದಾರೆ