ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಬಸ್ ವ್ಯವಸ್ಥೆ

ಬೈಂದೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಕ್ಕೆ ಸಂಬಂಧಿಸಿದಂತೆ 15- ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಪಿ.ಓ ಆಗಿ ಕೆಲಸ ನಿರ್ವಹಿಸಲು ನೇಮಕಗೊಂಡ ಬೇರೆ ವಿಧಾನಸಭಾ ಕ್ಷೇತ್ರದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮೇ 6 ರಂದು ಚುನಾವಣಾ ಕರ್ತವ್ಯ ನಿಮಿತ್ತ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಅನುಕೂಲವಾಗುವಂತೆ ಉಚಿತ ಬಸ್ಸುಗಳ ವ್ಯವಸ್ಥೆಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾಡಲಾಗಿದ್ದು, ಬೈಂದೂರಿಗೆ ತೆರಳಲು ಈ ಕೆಳಗೆ ತಿಳಿಸಿರುವ ಸ್ಥಳಗಳಿಂದ ಬಸ್ಸುಗಳು ಹೊರಡಲಿವೆ.

119-ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಂದಾಪುರದ ಗಾಂಧಿ ಮೈದಾನದಿಂದ ಬಸ್ಸ್ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕರಾದ ಎಂ.ಹೆಚ್. ವಾಲೇಕರ್, ಮೊ: 9341049161, ಸಹಾಯಕರಾದ ರಂಗರಾಜು ಮೊ: 8197809032 ಹಾಗೂ ಕಿಶೋರ ಮೊ. 7483054340 ಅನ್ನು ಸಂಪರ್ಕಿಸಬಹುದಾಗಿದೆ.

120- ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಬೋರ್ಡ್ ಹೈಸ್ಕೂಲ್ ನಿಂದ ಬಸ್‌ಗಳು ಹೊರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಅಶ್ವತ್ಥ್ ಮೊಬೈಲ್ ನಂ.9164146545, ಸಹಾಯಕರಾದ ಶಿವರಾಜ ಕಟಗಿ ಮೊ. ನಂ. :9844218717, ಜಗಧೀಶ್ ಮುರನಾಳ ಮೊ.ನಂ. 9880913596 ಅನ್ನು ಸಂಪರ್ಕಿಸಬಹುದಾಗಿದೆ.

121- ಕಾಪು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಪು ಸರ್ವೀಸ್ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದ್ದು, ಮಾಹಿತಿಗಾಗಿ ಮೇಲ್ವಿಚಾರಕ ಇಜ್ಜಾರ್ ಸಾಹೇಬ್ ಮೊ:9972716555, ಸಹಾಯಕರಾದ ವಿಜಯ ಮೊ. ನಂ. 9845162068 ಹಾಗೂ ಕ್ಲಾರೆನ್ಸ್ ಲೆಸ್ಟಾನ್ ಮೊ: 8095101024 ಅನ್ನು ಸಂಪರ್ಕಿಸಬಹುದಾಗಿದೆ.

122- ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂಡೀಮಠ ಬಸ್ ನಿಲ್ದಾಣದಿಂದ ಬಸ್‌ಗಳು ಹೊರಡಲಿದ್ದು ಮಾಹಿತಿಗಾಗಿ ಮೇಲ್ವಿಚಾರಕ ರಿಯಾಜ್ ಮಹಮ್ಮದ್ ಮೊ: 8197028646, ಸಹಾಯಕರಾದ ರವಿಚಂದ್ರ ಪಾಟೀಲ್ ಮೊ.ನಂಬರ್. 8277404724 ಹಾಗೂ ಬಾಲಕೃಷ್ಣ ತಲ್ಲೂರು ಮೊ: 8073752849 ಅನ್ನು ಸಂಪರ್ಕಿಸಬಹುದಾಗಿದೆ.

ಮೇಲೆ ತಿಳಿಸಲಾದ ಸ್ಥಳಗಳಿಂದ ಬೈಂದೂರು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಮತ್ತು ವಾಪಾಸು ಬರಲು ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಮೇ 6 ರಂದು ಬೆಳಗ್ಗೆ 7 ಗಂಟೆಗೆ ಸದ್ರಿ ಸ್ಥಳದಲ್ಲಿ ಹಾಜರಿದ್ದು, ಅಲ್ಲಿಂದ ಮಸ್ಟರಿಂಗ್ ಸ್ಥಳಕ್ಕೆ ತೆರಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.