ಫೆ. 9: ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ 15 ರ ಸಂಭ್ರಮ, ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

ಬ್ರಹ್ಮಾವರ: ಜಿ.ಎಂ. ವಿದ್ಯಾನಿಕೆತನ್ ಪಬ್ಲಿಕ್ ಸ್ಕೂಲ್ ನ 15ರ ಸಂಭ್ರಮ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ, ಶಂಕುಸ್ಥಾಪನಾ ಸಮಾರಂಭ ಫೆ. 9ರಂದು ಬೆಳ್ಳಿಗೆ 9.30ಕ್ಕೆ ಜರಗಲಿದೆ.

ಅತಿಥಿಗಳಾಗಿ ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ಯುಸಿಸಿಐ ಅಧ್ಯಕ್ಷ ಶ್ರೀ ಕೃಷ್ಣ ರಾವ್ ಕೊಡಂಚ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಾರಾಡಿ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ರಾಜಾರಾಮ್ ಶೆಟ್ಟಿ, ಮಂಗಳೂರು ಎಸ್ ಕೆ ಎಸ್ ಗ್ರೂಪ್‌ ನ ಸನತ್ ಕುಮಾರ ಶೆಟ್ಟಿ, ಬೆಂಗಳೂರು ಬಿವಿಸಿ ಆ್ಯಂಡ್ ಕಂ. ಬಿ.ಟಿ. ಶೆಟ್ಟಿ, ವಿಜಯ ಶೆಟ್ಟಿ, ಹೈಕೋರ್ಟ್ ನ್ಯಾಯವಾದಿ ಪ್ರಸಾದ್ ಹೆಗ್ಡೆ, ಬ್ಯಾಂಕ್ ಆಫ್ ಬರೋಡಾ ಬ್ರಹ್ಮಾವರ ಶಾಖಾ ಪ್ರಬಂಧಕ ಜೀನತ್ ಕುಮಾರ್ ಶೆಟ್ಟಿ ಉಪಸ್ಥಿತರಿರುವರು.