ಬ್ರಹ್ಮಾವರ: ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ವಾಟ್ಸಾಪ್ ಬಳಗ

ಬ್ರಹ್ಮಾವರ: ಸತೀಶ್ ಎಸ್. ಕಾಡೋಲಿ, ಸುಶಾಂತ್ ಕಾಡೋಲಿ, ಪ್ರಮೋದ ಹೇರೂರು, ಪ್ರಶಾಂತ್ ಕಾಡೋಲಿ ಅವರ ನೇತ್ರತ್ವದ ಹೇರೂರು ಶಾಲೆ ಹಳೆ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್ ಮತ್ತು ಮಾಕ್ಷಿಮ್ ಮಸ್ಕರೇನ್ಹಸ್ ನೇತೃತ್ವದ ದೇವರ ಮಕ್ಕಳು ಗ್ರೂಪ್ ಜಂಟಿಯಾಗಿ ಬ್ರಹ್ಮಾವರ ಸಮೀಪದ ಹೇರೂರಿನ ಬಡ ಮಹಿಳೆ ಪ್ರೇಮ ಪೂಜಾರ್ತಿ ಅವರಿಗೆ ಉಚಿತವಾಗಿ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆಯ ಮೆರೆದಿದೆ.

ಪ್ರೇಮ ಅವರು ಶಿಥಿಲಗೊಂಡಿದ್ದ ಮನೆಯಲ್ಲಿ ವಾಸವಾಗಿದ್ದರು. ಇದನ್ನು ಮನಗಂಡ ವಾಟ್ಸಪ್ ಬಳಗವು ನೂತನ ಮನೆಯನ್ನು ನಿರ್ಮಿಸಿ ಪ್ರೇಮ ಅವರಿಗೆ ಮನೆ ಹಸ್ತಾಂತರ ಮಾಡಿದೆ.

ಈ ಸಂದರ್ಭದಲ್ಲಿ ಮೀರಾ ಸದಾನಂದ ಪೂಜಾರಿ, ಉದಯ ಕಾಮತ್, ಜೂಲಿಯಾನ ಮಸ್ಕರೇನಸ್, ಭಾಸ್ಕರ್, ಪ್ರೇಮ ಶೆಟ್ಟಿ, ರಾಘೇಶ್ ಪೂಜಾರಿ ಕಟಪಾಡಿ, ಪದ್ಮಾವತಿ ಸಾಧು ಪೂಜಾರಿ, ರಾಘು ಕೊಳಂಬೆ, ದಿನೇಶ್ ಶೆಟ್ಟಿ, ಭಾಸ್ಕರ್, ಪ್ರಮೋದ್ ಶೆಟ್ಟಿ ಹಾಗೂ
ಗ್ರೂಪ್ ನ ಸದಸ್ಯರು ಇದ್ದರು.