ನೇಶನಲ್ ಐಟಿಐ ಕಾಲೇಜಿನಲ್ಲಿ “ಮಾದಕ ವಸ್ತುಗಳ ವಿರೋದಿ‌ ದಿನಾಚರಣೆ” ಕಾರ್ಯಕ್ರಮ.

ಬ್ರಹ್ಮಾವರ: ನೇಶನಲ್ ಐಟಿಐ ಕಾಲೇಜಿನಲ್ಲಿ ಜೂ.25 ರಂದು “ಮಾದಕ ವಸ್ತುಗಳ ವಿರೋದಿ‌ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕಿನ ಆರಕ್ಷಕ ಠಾಣೆಯ ಪಿಎಸ್ಐ ಅಶೋಕ್ ಅವರು ಮಾದಕ ವ್ಯಸನದಿಂದ ಆಗುವ ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ವೆಂಕಟೇಶ್ ಕ್ರಮಧಾರಿ ಸ್ವಾಗತಿಸಿದರು. ತರಬೇತಿ ಅಧಿಕಾರಿ ಭಾಸ್ಕರ ಉಪಾದ್ಯ ಧನ್ಯವಾದ ಸಲ್ಲಿಸಿದರು. ವೇದಿಕೆಯಲ್ಲಿ ಪೋಲಿಸ್ ಸುರೇಶ್ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಒಟ್ಟಾಗಿ ಪ್ರತಿಜ್ನಾ ವಿಧಿ ಸಲ್ಲಿಸಿದರು.