ಫೋನಿ ಸಂತ್ರಸ್ಥರಿಗೆ 1 ಕೋಟಿ ರೂ. ನೀಡಿದ ನಟ ‘ಅಕ್ಷಯ್ ಕುಮಾರ್’

ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಫೋನಿ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಫೋನಿ ಚಂಡಮಾರುತದ ಹೊಡೆತಕ್ಕೆ ಓಳಗಾಗಿರುವ ಒಡಿಶಾ ಮತ್ತು ಪುರಿ ಸೇರಿದಂತೆ ಕರಾವಳಿ ತೀರದ ಜಿಲ್ಲೆಗಳು ತತ್ತರಿಸಿವೆ.
ಚಂಡಮಾರುತದ ಪರಿಣಾಮ 16ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಲ್ಲದೇ, ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಹೊತ್ತಿನ ಊಟಕ್ಕು ಪರದಾಡುವಂತಾಗಿದೆ. ಸದ್ಯ ಕಷ್ಟದಲ್ಲಿರುವ ಜನರ ನೆರವಿಗೆ ಬಂದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಂತ್ರಸ್ತರಿಗೆ 1 ಕೋಟಿ ಪರಿಹಾರ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಕ್ಷಯ್ ಹಣವನ್ನು ನೀಡಿದ್ದಾರೆ.
ಕಷ್ಟದಲ್ಲಿರುಔರಿಗೆ ಅಕ್ಷಯ್ ಸದಾ ನೆರವಿನ ಹಸ್ತಾಚಾಚುತ್ತಾರೆ. ಈ ಹಿಂದೆ ಯೋಧರಿಗೆ ನೆರವಾಗಿದ್ದರು. ಅಲ್ಲದೆ ಕೇರಳ ಮತ್ತು ಚೆನ್ನೈ ನೆರೆ ತಂತ್ರಸ್ತರ ಕಷ್ಟಕ್ಕೂ ಅಕ್ಷಯ್ ಸ್ಪಂದಿಸಿದ್ದರು.