ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ: ಬಿಜೆಪಿ ಮಹಿಳಾ ಮೋರ್ಚಾದಿಂದ ಗೋ ಪೂಜೆ ಕಾರ್ಯಕ್ರಮ

ಉಡುಪಿ: ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ನೀಲಾವರ ಗೋಶಾಲೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಗೋ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ನಳಿನಿ ಪ್ರದೀಪ್, ಉಡುಪಿ ಗ್ರಾಮಾಂತರದ ಅಧ್ಯಕ್ಷೆ ವೀಣಾ ನಾಯಕ್, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ವಸಂತಿ ಸತೀಶ್.

ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ರಮಾಶೆಟ್ಟಿ, ರಜನಿ ಹೆಬ್ಬಾರ್, ಕಾರ್ಯದರ್ಶಿ ಪೂರ್ಣಿಮಾ ರತ್ನಾಕರ್, ರೇಣುಕಾ, ಕೋಶಾಧಿಕಾರಿ ಮಾಯಾ ಕಾಮತ್, ಸುಜಲ ಸತೀಶ್ ಸುವರ್ಣ, ಪೂರ್ಣಿಮ ಶೆಟ್ಟಿ, ಆಶಾ, ರಶ್ಮಿ, ಶಶಿಕಲಾ, ಮಾಲತಿ, ಪ್ರತಿಮಾ ನಾಯಕ್, ಶೋಭಾ ಹಂದಾಡಿ ಜಯಲಕ್ಷ್ಮಿ, ಶ್ರೀಲತಾ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.