ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪುಟಿದೆದ್ದ ಕಾರ್ಯಕರ್ತರ ಉತ್ಸಾಹ, ಮಾದರಿ ಕ್ಷೇತ್ರ ಮಾಡುವತ್ತ ಹರೀಶ್ ಪೂಂಜ ದಾಪುಗಾಲು

ಬೆಳ್ತಂಗಡಿ : ಇಲ್ಲಿಯ ಹಳೆಕೋಟೆಯ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರವರು ಹಾಗೂ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್ ರವರ ಸಮ್ಮುಖದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ನಗರದ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಈ ವೇಳೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಜನಿ ಕುಡ್ವ, ತಾಲೂಕು ಪ್ರಮುಖ್ ಜಯಾನಂದ ಗೌಡ, ಮಹಾಬಲ ಗೌಡ, ಮುಗುಳಿ ನಾರಾಯಣ ರಾವ್, ರಾಜೇಶ್ ಪ್ರಭು ಪಟ್ಟಣ ಪಂಚಾಯತ್ ಸದಸ್ಯರಾದ, ಶರತ್ ಕುಮಾರ್, ಲೋಕೇಶ್, ನಮ್ಮ ನಿರ್ದೇಶನ ಸದಸ್ಯರಾದ ಪ್ರಕಾಶ್ ಸಹಕಾರಿ ಭಾರತಿ ಅಧ್ಯಕ್ಷರಾಜೇಶ್ ಪೇರ್ಬುಡ ಉಪಸ್ಥಿತರಿದ್ದರು.

ಬಿಜೆಪಿ ಪ್ರಣಾಳಿಕೆಯಲ್ಲಿರುವ ಅಂಶಗಳು: ನಗರದ ಪ್ರಮುಖ ರಸ್ತೆಗಳನ್ನು ಸೌಂದರೀಕರಣಗೊಳಿಸಲಾಗುವುದು, ಸುಸಜ್ಜಿತ ಸಂತೆ ಮಾರುಕಟ್ಟೆ ಪ್ರಾಂಗಾಣ ಅಭಿವೃದ್ಧಿಗೊಳಿಸುವುದು, ಸುಸಜ್ಜಿತ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ, ಗೂಡ್ಸ್, ಟೆಂಪೋ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ, ನಿವೇಶನ ರಹಿತರಿಗೆ ನಿವೇಶನವನ್ನು ಒದಗಿಸುವುದು , ನಗರದ ಎಲ್ಲಾ ವಸತಿರಹಿತರಿಗೆ ವಸತಿಯನ್ನು ಒದಗಿಸುವುದು, ನಗರದ ಪ್ರತೀ ಮನೆಗಳಿಗೆ 12 ಗಂಟೆ ಕುಡಿಯುವ ನೀರಿನ ವ್ಯವಸ್ಥೆ, ನಗರದ ಪ್ರಮುಖ ಕೆರೆಗಳ ಅಭಿವೃದ್ಧಿ, ನಗರದ ಆಯ್ದ ಭಾಗದಲ್ಲಿ ಚಿಣ್ಣರ ಪಾರ್ಕ್ ನಿರ್ಮಾಣ , ಸಾಲು ಮರದ ತಿಮ್ಮಕ್ಕ ಟೀ ಪಾರ್ಕನ್ನು 2 ನೇ ಹಂತದ ಕಾರ್ಯಯೋಜನೆಯಾಗಿ ಅಭಿವೃದ್ಧಿ ಗೊಳಿಸುವುದು, ಸರಕಾರಿ ಮಾದರಿ ಶಾಲೆಗಳನ್ನು ಅಭಿವೃದ್ಧಿ ಗೊಳಿಸುವುದು , ನಗರದ ಹೈಟೆಕ್ ಸ್ಮಶಾನ ನಿರ್ಮಾಣ, ನಗರದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು.