ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ :ಬಿಜೆಪಿಯಿಂದ ದೇಶದ ಜನರಲ್ಲಿ ಹಿಂಸೆಯ ಭಾವನೆ ಬೆಳೆಸುವ ಪ್ರಯತ್ನ :ಗಫೂರ್‌ ಟೀಕೆ

ಉಡುಪಿ:  ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾತೂರಾಮ್‌ ಗೋಡ್ಸೆಗೆ ದೇಶಭಕ್ತನ ಪಟ್ಟ ಕಟ್ಟುವ ಕೆಲಸ  ಬಿಜೆಪಿ ಮಾಡುತ್ತಿದೆ.  ಜನರಲ್ಲಿ ಹಿಂಸೆಯ ಭಾವನೆ ಬೆಳೆಸುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌ ಹೇಳಿದರು.
 ನಾತೂರಾಮ್‌ ಗೋಡ್ಸೆಯನ್ನು ದೇಶ ಭಕ್ತನೆಂದು ಬಿಂಬಿಸುವ ಬಿಜೆಪಿ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಅನಂತಕುಮಾರ್‌ ಹೆಗಡೆ ಹಾಗೂ ನಾಯಕಿ ಸಾದ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ನಗರದ ಕಾಂಗ್ರೆಸ್‌ ಭವನದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನಳಿನ್‌ ಕುಮಾರ್‌ ಕಟೀಲ್‌ ದೇಶದ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಬಿಜೆಪಿ
ಹೈಕಮಾಂಡ್‌ಗೆ ಈ ದೇಶದ ಸಂವಿಧಾನ ಹಾಗೂ ಮಹಾತ್ಮ ಗಾಂಧೀಜಿಯ ಮೇಲೆ ಗೌರವ ಇದ್ದಾರೆ ತಕ್ಷಣವೇ ಈ ಇಬ್ಬರು ಸಂಸದರನ್ನು ಪಕ್ಷದಿಂದ ಉಚ್ಚಾಟಿಸಬೇಕು ಆಗ್ರಹಿಸಿದರು.
ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ದೇಶಕ್ಕೆ
ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿಯ ಅವರಿಗೆ ಬಿಜೆಪಿ ಅವಮಾನ
ಮಾಡುತ್ತಿರುವುದು ಖಂಡನೀಯ ಎಂದರು.
ಕೆಪಿಸಿಸಿ ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೊ, ಮುರಲಿ ಶೆಟ್ಟಿ, ಮುಖಂಡರಾದ
ಭಾಸ್ಕರ್‌ ರಾವ್‌ ಕಿದಿಯೂರು, ಜನಾರ್ದನ್‌ ಭಂಡಾರ್ಕರ್‌, ರಮೇಶ್‌ ಕಾಂಚನ್‌, ಕಿಶನ್‌
ಹೆಗ್ಡೆ ಕೊಳ್ಕೆಬೈಲ್‌, ರೋಶಿನಿ ಒಲಿವೇರಾ, ಡಾ. ಸುನೀತಾ ಶೆಟ್ಟಿ, ಪ್ರಖ್ಯಾತ್‌
ಶೆಟ್ಟಿ, ಶಶಿಧರ್‌ ಶೆಟ್ಟಿ, ಯತೀಶ್‌ ಕರ್ಕೇರ, ಗಣೇಶ್‌ ನೆರ್ಗಿ, ಕುಶಾಲ್‌ ಶೆಟ್ಟಿ
ಮೊದಲಾದವರು ಭಾಗವಹಿಸಿದ್ದರು.